ಕರ್ನಾಟಕ

karnataka

By

Published : Jun 25, 2020, 2:51 PM IST

Updated : Jun 25, 2020, 7:31 PM IST

ETV Bharat / state

ಮಳೆ ಬಂದ್ರೆ ದ್ವೀಪವಾಗುವ ಪ್ರದೇಶಗಳು: ಸೇತುವೆಗಾಗಿ ದಶಕದಿಂದ ನಡೆಯುತ್ತಿದೆ ಹೋರಾಟ

ಮಳೆಗಾಲ ಆರಂಭವಾಯಿತೆಂದರೆ ಕರಾವಳಿ ಭಾಗದ ಪ್ರದೇಶಗಳ ಪರಿಸ್ಥಿತಿ ಅಕ್ಷರಶಃ ದ್ವೀಪದಂತಾಗುತ್ತದೆ. ಇಲ್ಲಿನ ಮಿತ್ತಬಾಗಿಲು, ಮಲವಂತಿಗೆ ಬಳಿಯ ಗ್ರಾಮಗಳಿಗೆ ಸಂಪರ್ಕ ಸೇತುವೆಯಿಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.

The fight for the bridge has been going on for a decade from villagers
ಮಳೆ ಬಂದರೆ ದ್ವೀಪದಂತಾಗುತ್ತದೆ ಗ್ರಾಮಗಳು: ಸೇತುವೆಗಾಗಿ ದಶಕದಿಂದ ನಡೆಯುತ್ತಲಿದೆ ಹೋರಾಟ

ಬೆಳ್ತಂಗಡಿ (ದ.ಕ):ಮಳೆಗಾಲದಲ್ಲಿತಾಲೂಕಿನ ಮಲವಂತಿಗೆ ಹಾಗೂ ಮಿತ್ತಬಾಗಿಲು ಗ್ರಾಮ ಪಂಚಾಯಿತಿಗಳ ಗಡಿಭಾಗದಲ್ಲಿರುವ ಈ ಪ್ರದೇಶಗಳ ಪರಿಸ್ಥಿತಿ ಹೇಳತೀರದಾಗಿದೆ. ಎರ್ಮಾಯಿ, ಪರ್ಲ, ಮಕ್ಕಿ, ಬದನಾಜೆ, ಪಾಡಿ, ದೈಪಿತ್ತಿಲು, ಎಲ್ಯರಕಂಡ, ಬೈಲು, ಬುಡಲ ಹಾಗೂ ಇನ್ನಿತರ ಸುಮಾರು 40 ರಿಂದ 50 ಮನೆಗಳು ಕಲ್ಲಂಡ ಎಂಬಲ್ಲಿ ಹರಿಯುವ ಹಳ್ಳದಿಂದಾಗಿ ದ್ವೀಪದಂತಾಗುತ್ತದೆ.

ಈ ಹಳ್ಳ ದಾಟಲು ಯಾವುದೇ ರೀತಿಯ ಸೇತುವೆ ಇಲ್ಲದೇ ಇರುವುದು ಇದಕ್ಕೆಲ್ಲ ಕಾರಣ. ಹಲವು ವರ್ಷಗಳಿಂದ ಈ ಪ್ರದೇಶದ ಜನರು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಉಪಯೋಗಿಲ್ಲ. ಕಳೆದ ಭಾರಿ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ನೆರೆ ಬಂದು ಹಳ್ಳದ ಮಣ್ಣೆಲ್ಲ ಕೊಚ್ಚಿ ಹೋಗಿ ನದಿಯಷ್ಟು ಅಗಲವಾಗಿದ್ದು, ಕೃಷಿ ಭೂಮಿ ಸರ್ವನಾಶವಾಗಿದೆ.

ಕಳೆದ ವರ್ಷದ ನೆರೆ ಸಂದರ್ಭದಲ್ಲಿ ಹೇಗೋ ನಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದೇವೆ. ಪ್ರತೀ ವರ್ಷ ಈ ಹಳ್ಳಕ್ಕೆ ನಾವೆಲ್ಲ ಸ್ಥಳೀಯರು ಸೇರಿ ತಾತ್ಕಾಲಿಕ ಅಡಿಕೆ ಮರದ ಸೇತುವೆ ನಿರ್ಮಿಸುತ್ತಿದ್ದೆವು. ಅದರೆ ಈ ಬಾರಿ ಯಾವ ರೀತಿಯಲ್ಲೂ ಮಳೆಗಾಲದಲ್ಲಿ ಹಳ್ಳವನ್ನು ದಾಟದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಕಳೆದ ಸಲ ಬಂದಿರುವ ನೆರೆಯಿಂದ ಹಳ್ಳದ ಬದಿಯ ಮಣ್ಣೆಲ್ಲ ಹೋಗಿದ್ದು, ತಾತ್ಕಾಲಿಕ ಸೇತುವೆ ನಿರ್ಮಿಸುವುದಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ ಉದ್ಭವಿಸಿದೆ.

ಹಲವು ವರ್ಷಗಳಿಂದ ಸೇತುವೆ ನಿರ್ಮಾಣ ಮಾಡಿ ಬೆಡಿಕೆ ಇಟ್ಟರೂ ಈ ಬಗ್ಗೆ ಯಾರೂ ಗಮನ ಹರಿಸಿಲ್ಲ. ಆದರೆ ಈ ಸಲ ನಾವು ನಮ್ಮ ಅತಂಕವನ್ನು ಶಾಸಕ ಹರೀಶ್ ಪೂಂಜರ ಗಮನಕ್ಕೆ ತಂದಿದ್ದೇವೆ. ಅವರು ಸೂಕ್ತವಾಗಿ ಸ್ಪಂದಿಸಿ ಸೇತುವೆಯ ಭರವಸೆ ನೀಡಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

Last Updated : Jun 25, 2020, 7:31 PM IST

ABOUT THE AUTHOR

...view details