ಕರ್ನಾಟಕ

karnataka

ETV Bharat / state

ಕೋವಿಡ್ ಮೃತರ ಅಂತ್ಯಸಂಸ್ಕಾರ: ಟಾಸ್ಕ್ ಫೋರ್ಸ್ ರಚನೆ - funeral of covid deceased

ಕೋವಿಡ್-19 ನಿಂದ ಮೃತಪಟ್ಟರೆ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ನಡೆಸುವ ಸಲುವಾಗಿ ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ.ಡಾ. ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ಮಾರ್ಗದರ್ಶನದಲ್ಲಿ ಮೂವರು ಧರ್ಮಗುರುಗಳ ಮುಂದಾಳತ್ವದಲ್ಲಿ 16 ಯುವಕರ ಎರಡು ಟಾಸ್ಕ್ ಫೋರ್ಸ್ ತಂಡಗಳನ್ನ ನಿಯೋಜನೆ ಮಾಡಲಾಗಿದೆ.

Task Force Team Formation
ಕೋವಿಡ್ ಮೃತರ ಅಂತ್ಯಸಂಸ್ಕಾರ ನಡೆಸಲು ಟಾಸ್ಕ್ ಫೋರ್ಸ್ ತಂಡ ರಚನೆ

By

Published : Aug 5, 2020, 8:07 AM IST

ಕಡಬ:ಮಲಂಕರ ಕ್ಯಾಥೋಲಿಕ್ ಧರ್ಮಸಭೆಯ ಪುತ್ತೂರು ಧರ್ಮಪ್ರಾಂತ್ಯದ ಅಧೀನದಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರು ಕೋವಿಡ್-19 ರಿಂದ ಮೃತಪಟ್ಟರೆ ತಮ್ಮ ಪ್ರೀತಿ ಪಾತ್ರರನ್ನು ಸಮಯೋಚಿತವಾಗಿ ಮತ್ತು ಘನತೆಯಿಂದ ಚರ್ಚ್ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ನಡೆಸುವ ಸಲುವಾಗಿ ಟಾಸ್ಕ್ ಫೋರ್ಸ್ ತಂಡಗಳನ್ನ ನಿಯೋಜನೆ ಮಾಡಲಾಗಿದೆ.

ರೆ.ಡಾ.ಗೀವರ್ಗೀಸ್ ಮಾರ್ ಮಕ್ಕಾರಿಯೋಸ್..

ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ.ಡಾ.ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ಮಾರ್ಗದರ್ಶನದಲ್ಲಿ ಮೂವರು ಧರ್ಮಗುರುಗಳ ಮುಂದಾಳತ್ವದಲ್ಲಿ 16 ಯುವಕರು ಎರಡು ಗುಂಪುಗಳಾಗಿ ಈ ತಂಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕೋವಿಡ್ -19ರ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಎಲ್ಲ ನಿರ್ದೇಶನಗಳನ್ನು ಹಾಗೂ ಪ್ರೋಟೋಕಾಲ್ ಅನುಸರಿಸಿ ಚರ್ಚ್ ಸಮಾಧಿಯಲ್ಲಿ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಅಂತ್ಯಸಂಸ್ಕಾರವನ್ನು ಈ ತಂಡ ಮಾಡಲಿದೆ.

ಇನ್ನು ಪಿಪಿಐ ಕಿಟ್ ಧರಿಸುವಿಕೆ ಹಾಗೂ ಅಂತ್ಯಸಂಸ್ಕಾರದ ವೇಳೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಸುಚಿತ್ರಾರಾವ್ ನೇತೃತ್ವದಲ್ಲಿ ಈ ತಂಡಕ್ಕೆ ತರಬೇತಿ ನೀಡಲಾಯಿತು. ತಂಡದ ಸದಸ್ಯರು ಕೇಳಿದ ಸಂಶಯಗಳಿಗೆ ವೈದ್ಯಾಧಿಕಾರಿ ಸುಚಿತ್ರಾರಾವ್ ಉತ್ತರ ನೀಡುವ ಮೂಲಕ ಕೊರೊನಾ ಸಮಯದಲ್ಲಿ ಭಯಪಡುವ ಅಗತ್ಯ ಇಲ್ಲ, ಬದಲಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂದರು.

ABOUT THE AUTHOR

...view details