ಕರ್ನಾಟಕ

karnataka

ETV Bharat / state

ಶಿವಾಯ ಫೌಂಡೇಶನ್ ವತಿಯಿಂದ ನೆರವಿನ ಹಸ್ತ - Shivaya Foundation

ಸಹೃದಯಿ ದಾನಿಗಳ ನೆರವಿನಿಂದ ಈಗ ಈ ಪರಿವಾರಕ್ಕೆ ನೆಲಸಲು ಮನೆಯ ಅರ್ಧ ಕೆಲಸ ಪೂರ್ಣಗೊಂಡಿದೆ. ಈ ಪರಿಸ್ಥಿತಿ ಮನಗಂಡು ಶಿವಾಯ ಫೌಂಡೇಷನ್ ವತಿಯಿಂದ 25,000 ರೂ. ನೆರವು..

Supported by the Shivaya Foundation
ಶಿವಾಯ ಫೌಂಡೇಶನ್ ವತಿಯಿಂದ ನೆರವಿನ ಹಸ್ತ

By

Published : Jul 13, 2020, 9:12 PM IST

ಮಂಗಳೂರು :ಸೂರಿಂಜೆ ಗ್ರಾಮದ ಪೊನ್ನಗಿರಿ ನಿವಾಸಿ ವಾಮನ ದೇವಾಡಿಗ (52) ಅವರು ಇತ್ತೀಚೆಗೆ ಕ್ಯಾನ್ಸರ್​​ನಿಂದ ಮೃತಪಟ್ಟಿದ್ದರು. ಮರದ ಕೆಲಸಗಾರನಾಗಿ ಕಟ್ಟಿಗೆ ಕತ್ತರಿಸುವ ಕೆಲಸ ನಿರ್ವಹಿಸುತ್ತಿದ್ದ ಅವರು ಮನೆಯಲ್ಲಿ, ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳು ಹಾಗೂ ಸಹೋದರಿ ಇದ್ದಾರೆ.

ಸಹೋದರಿ ಅವರ ಗಂಡ ತೀರಿ ಹೋಗಿರುವ ಕಾರಣ ಎರಡು ಹೆಣ್ಣು ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಇವರ ಮೇಲಿತ್ತು. ಪಾಶ್ವವಾಯು ಪೀಡಿತ ತಾಯಿ ಹಾಗೂ ನೆಲೆಸಲು ಸರಿಯಾದ ಸೂರು ಇಲ್ಲದೇ ಅರ್ಧಂಬರ್ಧ ತಯಾರಾಗಿರುವ ಮನೆಯಲ್ಲಿ ವಾಸಿಸುತ್ತಿದ್ದ ಅವರು, ಇತ್ತೀಚಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಆರ್ಥಿಕ ನೆರವು ಕೋರಿ ಶಿವಾಯ ಸಂಸ್ಥೆಗೆ ಮನವಿ ಕಳುಹಿಸಿದ್ದರು.

ಆದರೆ, ದುರಾದೃಷ್ಟವಶಾತ್ ಕ್ಯಾನ್ಸರ್ ಚಿಕಿತ್ಸೆಗೆ ತುತ್ತಾಗಿದ್ದ ವಾಮನ ದೇವಾಡಿಗರು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸಹೃದಯಿ ದಾನಿಗಳ ನೆರವಿನಿಂದ ಈಗ ಈ ಪರಿವಾರಕ್ಕೆ ನೆಲಸಲು ಮನೆಯ ಅರ್ಧ ಕೆಲಸ ಪೂರ್ಣಗೊಂಡಿದೆ. ಈ ಪರಿಸ್ಥಿತಿ ಮನಗಂಡು ಶಿವಾಯ ಫೌಂಡೇಷನ್ ವತಿಯಿಂದ 25,000 ರೂ. ಧನ ಸಹಾಯ ನೀಡಲಾಯ್ತು.

ಈ ಸಂದರ್ಭದಲ್ಲಿ ಶಿವಾಯ ಫೌಂಡೇಷನ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಫಲಿಮಾರು, ಪ್ರಶಾಂತ್ ಶೆಟ್ಟಿ ಪಂಜ, ರಾಯೆಶ್ ಪೈ, ಸೋನಿಯಾ ಶೆಟ್ಟಿ, ನಿಧೀಶ್ ದೇವಾಡಿಗ ಉಪಸ್ಥಿತರಿದ್ದರು.

ABOUT THE AUTHOR

...view details