ಕರ್ನಾಟಕ

karnataka

ETV Bharat / state

ಯುಜಿಸಿ ನಿಯಮ ಮೀರಿ ಪರೀಕ್ಷೆ ನಡೆಸಲು ಹೊರಟಿದೆ ಸಂತ ಅಲೋಶಿಯಸ್ ಕಾಲೇಜು: ವಿದ್ಯಾರ್ಥಿಗಳ ಆಕ್ರೋಶ

ಯುಜಿಸಿ ನಿಯಮದ ಪ್ರಕಾರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕಾದರೆ ಶೇ.40ರಷ್ಟು ಆನ್​ಲೈನ್​​ ತರಗತಿ ನಡೆದು, ಶೇ.60ರಷ್ಟು ಆಫ್​ಲೈನ್ ತರಗತಿ ನಡೆಯಬೇಕು. ಆದರೆ ಈ ನಿಯಮಗಳನ್ನು ನಗರದ ಸಂತ ಅಲೋಶಿಯಸ್ ಕಾಲೇಜು ಗಾಳಿಗೆ ತೂರಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By

Published : Jul 13, 2021, 8:09 AM IST

Updated : Jul 13, 2021, 8:51 AM IST

Student Outrage against Aloysius College
ಅಲೋಶಿಯಸ್ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಮಂಗಳೂರು: ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಆನ್​ಲೈನ್​​ ತರಗತಿಗಳ ಮೂಲಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇನ್ನೂ ಸರಿಯಾಗಿ ಪರೀಕ್ಷೆ ಬರೆಯಲು ಸಿದ್ಧರಾಗಿಲ್ಲ. ಆದರೆ ಈ ನಡುವೆ ನಗರದ ಸಂತ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿಯು ಯುಜಿಸಿ ನಿಯಮವನ್ನು ಮೀರಿ ಶೇ.60ರಷ್ಟು ಆಫ್​​ಲೈನ್ ತರಗತಿ ನಡೆಸದೇ ಪರೀಕ್ಷೆ ನಡೆಸಲು ಹೊರಟಿರುವ ಬಗ್ಗೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದ.ಕ. ಜಿಲ್ಲಾ ಘಟಕ ದನಿ ಎತ್ತಿದೆ.

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ತನುಷ್ ಶೆಟ್ಟಿ

ಈ ಬಗ್ಗೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ತನುಷ್ ಶೆಟ್ಟಿ ಮಾತನಾಡಿ, ಯುಜಿಸಿ ನಿಯಮದ ಪ್ರಕಾರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕಾದರೆ ಶೇ.40ರಷ್ಟು ಆನ್​ಲೈನ್​​ ತರಗತಿ ನಡೆದು, ಶೇ.60ರಷ್ಟು ಆಫ್​ಲೈನ್ ತರಗತಿ ನಡೆಯಬೇಕು. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿ ನಗರದ ಸಂತ ಅಲೋಶಿಯಸ್ ಕಾಲೇಜು ಇದೀಗ ಪದವಿ ಹಾಗೂ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಜುಲೈ 20ರಿಂದ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಈ ಬಗ್ಗೆ ದನಿ ಎತ್ತಿದ ವಿದ್ಯಾರ್ಥಿಗಳ‌ ದನಿಯನ್ನು ಅಡಗಿಸುವ ಪ್ರಯತ್ನವನ್ನು ಕಾಲೇಜು ಆಡಳಿತ ಮಂಡಳಿ ಮಾಡುತ್ತಿದೆ. ಈ ಸಂಬಂಧ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಾತನಾಡಲು ತೆರಳಿದಾಗ ಅಲ್ಲಿನ ಪ್ರಾಂಶುಪಾಲರು ದಬಾಯಿಸಿ ಹಿಂದೆ ಕಳುಹಿಸಿದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ಮಂಗಳೂರು ವಿವಿ ಕುಲಪತಿಗಳಿಗೆ, ದ.ಕ.ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ. ಆದರೂ ಕಾಲೇಜು ಆಡಳಿತ ಮಂಡಳಿ ಪರೀಕ್ಷೆ ನಡೆಸಿದ್ದಲ್ಲಿ ಅಲೋಶಿಯಸ್ ಕ್ಯಾಂಪಸ್​ಗೆ ಹೋಗಿ ಪ್ರಾಂಶುಪಾಲರ ಕಚೇರಿ ಮುಂಭಾಗ ಧರಣಿ ನಡೆಸುತ್ತೇವೆ ಎಂದು ಆಗ್ರಹಿಸಿದರು.

ಇದನ್ನೂ ಓದಿ:ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಬ್ಯಾಂಕಿಂಗ್ ಪರೀಕ್ಷೆ : IBPS ನಿರ್ಧಾರ ಖಂಡಿಸಿದ ಮನು ಬಳಿಗಾರ್

ಅಲ್ಲದೇ ದ.ಕ. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ರಾಜ್ಯದ, ಹೊರ ರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಕೋವಿಡ್ ಸಂಕಷ್ಟ ಕಾಲದಲ್ಲಿ ಈ ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿದ್ದು, ಅಂತಹ ವಿದ್ಯಾರ್ಥಿಗಳಿಗೆ ಅವರದ್ದೇ ಊರಿನಲ್ಲಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಅದೇ ರೀತಿ ಕೋವಿಡ್​ನಿಂದ ರಾಜ್ಯಾದ್ಯಂತ 45-50ರಷ್ಟು ಉಪನ್ಯಾಸಕರು ಮೃತಪಟ್ಟಿದ್ದು, ಅವರಿಗೆ ತಕ್ಷಣ ಸರ್ಕಾರ ಪರಿಹಾರ ನೀಡಬೇಕೆಂದು ತನುಷ್ ಶೆಟ್ಟಿ ಒತ್ತಾಯಿಸಿದರು.

Last Updated : Jul 13, 2021, 8:51 AM IST

ABOUT THE AUTHOR

...view details