ಕರ್ನಾಟಕ

karnataka

ಬೈಕ್ ಅಪಘಾತ : ವಿದ್ಯಾರ್ಥಿ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

By

Published : Mar 22, 2021, 9:07 AM IST

ಬೈಕ್ ಅಪಘಾತದಲ್ಲಿ ವಿವೇಕಾನಂದ ಕಾಲೇಜು​​ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ತಡ ರಾತ್ರಿ ಸವಣೂರು ಪುತ್ತೂರು ರಸ್ತೆಯ ಮಾಂತೂರು ಬಳಿ ನಡೆದಿದೆ. ಈ ವೇಳೆ ಇನ್ನೊಬ್ಬ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ.

road accident
ರಸ್ತೆ ಅಪಘಾತ

ಪುತ್ತೂರು: ಸವಣೂರು ಪುತ್ತೂರು ರಸ್ತೆಯ ಮಾಂತೂರು ಬಳಿ ಬೈಕ್ ಅಪಘಾತದಲ್ಲಿ ವಿವೇಕಾನಂದ ಕಾಲೇಜು​​ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ನಿನ್ನೆ ತಡ ರಾತ್ರಿ ಈ ಅಪಘಾತ ಸಂಭವಿಸಿದೆ.

ಮಡಿಕೇರಿ ತಾಲೂಕಿನ ಸೋಮವಾರ ಪೇಟೆ ನಿವಾಸಿ ಬೋಜಪ್ಪ, ಉಮಾವತಿ ದಂಪತಿ ಪುತ್ರ ಚೇತನ್ ಮೃತಪಟ್ಟ ಯುವಕನಾಗಿದ್ದಾನೆ. ಮತ್ತೊಬ್ಬ ಯುವಕ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ : ನಿಂತಿದ್ದ ಟಿಟಿ ವಾಹನಕ್ಕೆ ಟ್ಯಾಂಕರ್​ ಡಿಕ್ಕಿ: ಮೂವರ ಸಾವು

ಸ್ನೇಹಿತನ ಮನೆಗೆ ಹೋಗುತ್ತಿದ್ದ ವೇಳೆ ನಡೆದ ಘಟನೆ:

ಚೇತನ್ ಪುತ್ತೂರು ಪಿಜಿ ಯಲ್ಲಿದ್ದು, ಮಾರ್ಚ್ 21 ರಂದು ಮಾಣಿ ಸಾದಿಕುಕ್ಕು ಜಾತ್ರೆಗೆ ಸ್ನೇಹಿತ ಸುದೀಪ್ ಅವರ ಜೊತೆ ಹೋಗಿದ್ದ. ಬಳಿಕ ರಾತ್ರಿ ಸ್ನೇಹಿತ ಸುದೀಪ್ ಅವರ ಬೆಳ್ಳಾರೆ ಮನೆಗೆ ಹೋಗುತ್ತಿದ್ದ ವೇಳೆ ಮಾಂತೂರು ಸಮೀಪ ಬೈಕ್ ಅಪಘಾತವಾಗಿದೆ.

ABOUT THE AUTHOR

...view details