ಕರ್ನಾಟಕ

karnataka

By

Published : Jul 30, 2019, 7:13 PM IST

ETV Bharat / state

ನದಿಗೆ ಹಾರಿರುವುದನ್ನು ನಾನು ನೋಡಿದ್ದೇನೆ!: ಪ್ರತ್ಯಕ್ಷದರ್ಶಿ ಹೇಳಿಕೆ

ಸೋಮವಾರ ರಾತ್ರಿ ಮೀನಿಗಾಗಿ ಬಲೆ ಬೀಸುವಾಗ ನದಿಗೆ ಯಾರೋ ಬಿದ್ದಿರುವ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿ ಸೈಮನ್ ಡಿಸೋಜಾ ಮಾಹಿತಿ ನೀಡಿದ್ದಾರೆ.

ಮೀನುಗಾರ ಸೈಮನ್ ಡಿಸೋಜಾ

ಮಂಗಳೂರು: ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ದೊರೆತಂತೆ ಕಾಣುತ್ತಿದೆ. ಸೋಮವಾರ ರಾತ್ರಿ ತಾನು ಮೀನಿಗಾಗಿ ಬಲೆ ಬೀಸುವಾಗ ನದಿಗೆ ಯಾರೋ ಬಿದ್ದಿರುವುದನ್ನು ನೋಡಿರುವುದಾಗಿ ಮೀನುಗಾರ ಸೈಮನ್ ಡಿಸೋಜಾ ಮಾಹಿತಿ ಕೊಟ್ಟಿದ್ದಾರೆ.

ಪ್ರತ್ಯಕ್ಷದರ್ಶಿ ಸೈಮನ್ ಡಿಸೋಜಾ ಹೇಳಿಕೆ

ತಕ್ಷಣ ನಾನು ಆ ಸ್ಥಳಕ್ಕೆ ಹೋಗುವಷ್ಟರಲ್ಲಿ ಆ ವ್ಯಕ್ತಿ ನದಿ ಆಳಕ್ಕೆ ಹೋಗಿದ್ದರು. ಈ ಹಿಂದೆ ಇಂತಹ ಹಲವಾರು ಘಟನೆಗಳು ನಡೆದಿವೆ ಎಂದಸೈಮನ್ ಡಿಸೋಜಾ ಹೇಳಿದ್ದಾರೆ. ಕಳೆದರಾತ್ರಿ ಸುಮಾರು 7 ರಿಂದ 7.30 ರ ಮಧ್ಯೆ ಈ ಘಟನೆ ನಡೆದಿತ್ತು. ಆದರೆ ನಾನು ಆ ವ್ಯಕ್ತಿಯನ್ನು ರಕ್ಷಿಸಲು ಧಾವಿಸುವಷ್ಟರಲ್ಲಿ ವ್ಯಕ್ತಿ ನೀರಿನಾಳಕ್ಕೆ ಹೋಗಿ ಆಗಿತ್ತು ಎಂದು ಹೇಳಿದ್ದಾರೆ.

ಈ ಹಿಂದೆ ನಡೆದ ಅನೇಕ ಆತ್ಮಹತ್ಯೆ ಪ್ರಕರಣಗಳಲ್ಲಿ ಜನರನ್ನು ರಕ್ಷಿಸಿರುವುದಾಗಿ ಅವರು ಮಾಹಿತಿ ನೀಡಿದ್ರು.

ABOUT THE AUTHOR

...view details