ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕು ನಿಯಂತ್ರಣಕ್ಕೆ ಜೈನಮಠದಲ್ಲಿ ವಿಶೇಷ ಪ್ರಾರ್ಥನೆ, ಪೂಜೆ - ಮೂಡಬಿದಿರೆಯ ಜೈನಮಠದಲ್ಲಿ ವಿಶೇಷ ಪ್ರಾರ್ಥನೆ

ಎಲ್ಲೆಡೆ ವ್ಯಾಪಕವಾಗಿ ಹಬ್ಬಿರುವ ಕೊರೊನಾ ಹಲವಾರು ಜನರ ಪ್ರಾಣ ತೆಗೆದಿದ್ದು, ಕೊರೊನಾದಿಂದ ಮುಕ್ತಿ ಹೊಂದಿ ನಿರ್ಭೀತಿಯ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಲಿ ಎಂದು ಮೂಡಬಿದಿರೆಯ ಜೈನಮಠದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

Special Prayer at the Jain Math
ಜೈನಮಠದಲ್ಲಿ ವಿಶೇಷ ಪೂಜೆ

By

Published : Aug 12, 2020, 8:01 PM IST

ಮಂಗಳೂರು:ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದು, ಸಮಾಜದಲ್ಲಿ ನಿರ್ಭೀತಿಯ ವಾತಾವರಣ ಸೃಷ್ಟಿಯಾಗಲೆಂದು ಮೂಡಬಿದಿರೆಯ ಜೈನಮಠದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಜೈನಮಠದಲ್ಲಿ ವಿಶೇಷ ಪೂಜೆ

ಜೈನಮಠದಲ್ಲಿ ಶ್ರೀ ಚಂದ್ರನಾಥ ಸ್ವಾಮಿಗೆ ಅಭಿಷೇಕ, ಶ್ರೀ ಕೂಷ್ಮಾಂಡಿನಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು, ಕೊರೊನಾ ರೋಗದಿಂದ ಸಮಾಜವು ಮುಕ್ತಿಗೊಳ್ಳಲಿ, ಹಿರಿಯರು, ಅಪ್ರಾಪ್ತರಿಗೆ ಈ ರೋಗವು ಬಾಧಿಸದಿರಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ., ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುದೇಶ್ ಕುಮಾರ್, ಆನಡ್ಕ ದಿನೇಶ್‌ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details