ಕರ್ನಾಟಕ

karnataka

By

Published : Jul 31, 2019, 7:06 AM IST

Updated : Jul 31, 2019, 8:05 PM IST

ETV Bharat / state

ಕಾಫಿ ಸಾಮ್ರಾಟನ ಯುಗಾಂತ್ಯ... ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ವಿಧಿವಿಧಾನ

ಸಿದ್ಧಾರ್ಥ್

19:12 July 31

ಪಂಚಭೂತಗಳಲ್ಲಿ ಲೀನ​​ನಾದ ಕಾಫಿ ಸಾಮ್ರಾಟ ಸಿದ್ಧಾರ್ಥ್​

ಕಾಫಿ ಸಾಮ್ರಾಟ ಸಿದ್ಧಾರ್ಥ್​

ಚಿಕ್ಕಮಗಳೂರು:ನೇತ್ರಾವತಿ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಹಿರಿಯ ಕಾಫಿ ಉದ್ಯಮಿ ವಿ ಜಿ ಸಿದ್ದಾರ್ಥ್ ಅವರ ಅಂತ್ಯಕ್ರಿಯೆ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು. 

 ಚಿಕ್ಕಮಗಳೂರಿನ ಚೇತನಹಳ್ಳಿ ಕಾಫಿ ಎಸ್ಟೇಟ್​​ನಲ್ಲಿ ಸಿದ್ಧಾರ್ಥ್​ ಅಂತ್ಯಕ್ರಿಯೆ ನಡೆದಿದ್ದು, ಈ ವೇಳೆ ಇಬ್ಬರು ಪುತ್ರರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಮಾಜಿ ಸಿಎಂ ಎಸ್​ಎಂ ಕೃಷ್ಣ ಅವರ ಅಳಿಯನಾಗಿದ್ದ ಸಿದ್ಧಾರ್ಥ್​​ ಕಳೆದ ಎರಡು ದಿನಗಳ ಹಿಂದೆ ಏಕಾಏಕಿ ಕಣ್ಮರೆಯಾಗಿದ್ದರು. ನಿನ್ನೆ ದಿನ ಅವರ ಹುಡುಕಾಟ ನಡೆದಿತ್ತು.ತದನಂತರ ಅವರ ಮೃತದೇಹ ಇಂದು ಬೆಳಗ್ಗೆ 6:30ಕ್ಕೆ ಪತ್ತೆಯಾಗಿತ್ತು. 

18:55 July 31

ಪಂಚಭೂತಗಳಲ್ಲಿ ಲೀನ​​ನಾದ ಕಾಫಿ ಸಾಮ್ರಾಟ ಸಿದ್ಧಾರ್ಥ್​

  • ಒಕ್ಕಲಿಗ ಸಂಪ್ರದಾಯದಂತೆ ಸಿದ್ಧಾರ್ಥ್​ ಅಂತಿಮ ವಿಧಿವಿಧಾನ ಆರಂಭ
  • ಚೇತನಹಳ್ಳಿ ಎಸ್ಟೇಟ್​ನಲ್ಲಿ ಸಿದ್ದಾರ್ಥ್​​ ಅಂತಿಮ ವಿಧಿವಿಧಾನ
  • ಅಂತಿಮ ದರ್ಶನ ಸ್ಥಳದಿಂದ ಚಿತೆಯತ್ತ ಸಿದ್ದಾರ್ಥ್​ ಪಾರ್ಥಿವ ಶರೀರ
  • ಒಕ್ಕಲಿಗರ ಸಂಪ್ರದಾಯದಂತೆ ನಡೆಯಲಿರುವ ಅಂತ್ಯಕ್ರಿಯೆ
  • ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈರಿಂದ ಅಂತಿಮ ದರ್ಶನ
  • ಸಿದ್ದಾರ್ಥ್​ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಿರುವ ಪುತ್ರ
  • ಅಂತಿಮ ದರ್ಶನದ ವೇಳೆ ನೂಕುನುಗ್ಗಲು, ಪೊಲೀಸರಿಂದ ನಿಯಂತ್ರಣ

18:06 July 31

ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈರಿಂದ ಅಂತಿಮ ದರ್ಶನ

  • ಸ್ವಗ್ರಾಮ ಚೇತನಹಳ್ಳಿ ಎಸ್ಟೇಟ್​ ತಲುಪಿದ ಸಿದ್ದಾರ್ಥ್​​ ಪಾರ್ಥಿವ ಶರೀರ
  • ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರೆ ತಾಲೂಕಿನ ಎಸ್ಟೇಟ್​​
  • ಅಂತ್ಯಕ್ರಿಯೆಗೆ ಸಕಲ ಸಿದ್ಧತೆ, ಕೆಲವೇ ಕ್ಷಣಗಳಲ್ಲಿ ಸಿದ್ಧಾರ್ಥ್​ ಅಂತ್ಯಕ್ರಿಯೆ

17:30 July 31

ಚೇತನಹಳ್ಳಿ ಎಸ್ಟೇಟ್​​ ತಲುಪಿದ ಸಿದ್ದಾರ್ಥ್​ ಪಾರ್ಥಿವ ಶರೀರ

ಚೇತನಹಳ್ಳಿ ಎಸ್ಟೇಟ್​​ ತಲುಪಿದ ಸಿದ್ದಾರ್ಥ್​ ಪಾರ್ಥಿವ ಶರೀರ
  • ಸ್ವಗ್ರಾಮ ಚೇತನಹಳ್ಳಿಯತ್ತ ಸಿದ್ಧಾರ್ಥ್​ ಮೃತದೇಹ ರವಾನೆ
  • ಆ್ಯಂಬುಲೆನ್ಸ್​​ನಲ್ಲಿ ಸಿದ್ದಾರ್ಥ್​ ಮೃತದೇಹ ಹುಟ್ಟೂರಿನತ್ತ ರವಾನೆ
  • ಚೇತನಹಳ್ಳಿ ಎಸ್ಟೇಟ್​​ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ 

16:40 July 31

ಆ್ಯಂಬುಲೆನ್ಸ್​​ನಲ್ಲಿ ಸಿದ್ದಾರ್ಥ್​ ಮೃತದೇಹ ಹುಟ್ಟೂರಿನತ್ತ ರವಾನೆ

ಸಿದ್ದಾರ್ಥ್​ ಮೃತದೇಹ ಹುಟ್ಟೂರಿನತ್ತ ರವಾನೆ
  • ಸ್ವಗ್ರಾಮ ಚೇತನಹಳ್ಳಿಯತ್ತ ಸಿದ್ಧಾರ್ಥ್​ ಮೃತದೇಹ ರವಾನೆ
  • ಸಿದ್ದಾರ್ಥ್​ ಕುಟುಂಬಸ್ಥರಿಗೆ ಕೈ ಶಾಸಕರಿಂದ ಸಾಂತ್ವನ
  • ಅಂತಿಮ ದರ್ಶನ ಪಡೆದ ಮಾಜಿ ಸಚಿವ ಡಿಕೆ ಶಿವಕುಮಾರ್​​​
  • ಅಂತಿಮ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ
  • ಅಂತಿಮ ದರ್ಶನದ ವೇಳೆ ಕಣ್ಣೀರು ಹಾಕಿದ ಮಾಜಿ ಸಿಎಂ ಹೆಚ್​​ಡಿಕೆ
  • ಹ್ಯಾರಿಸ್​,ಕೆಜೆ ಜಾರ್ಜ್​ರಿಂದ ಅಂತಿಮ ದರ್ಶನ, ಕುಟುಂಬಸ್ಥರಿಗೆ ಸಾಂತ್ವನ
  • ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಮಾಜಿ ಸಿಎಂ ಎಸ್​ಎಂ ಕೃಷ್ಣ ಭೇಟಿ, ಪರಿಶೀಲನೆ

16:21 July 31

ಸ್ವಗ್ರಾಮ ಚೇತನಹಳ್ಳಿಯತ್ತ ಸಿದ್ಧಾರ್ಥ್​ ಮೃತದೇಹ ರವಾನೆ

  • ಅಂತಿಮ ದರ್ಶನ ಪಡೆದ ಸಿಎಂ ಬಿಎಸ್​ ಯಡಿಯೂರಪ್ಪ
  • ಚಿಕ್ಕಮಗಳೂರಿನ ಕೆಫೆ ಕಾಫಿಡೇ ಗ್ಲೋಬಲ್​ ಆವರಣದಲ್ಲಿ ಅಂತಿಮ ದರ್ಶನ
  • ಹೂಗುಚ್ಛವಿರಿಸಿ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಿಎಸ್​ವೈ
  • ಸಿದ್ದಾರ್ಥ್​ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ

15:43 July 31

ಅಂತಿಮ ದರ್ಶನ ಪಡೆದ ಸಿಎಂ ಬಿಎಸ್​ ಯಡಿಯೂರಪ್ಪ

ಮುಖ್ಯಮಂತ್ರಿ ಬಿಎಸ್​ವೈ ಅಂತಿಮ ದರ್ಶನ
  • ಕೆಫೆ ಕಾಫಿ ಡೇ ಮಾಲಿಕ ಸಾವು ಹಿನ್ನೆಲೆ
  • ಹಂಗಾಮಿ ಮುಖ್ಯಸ್ಥರಾಗಿ ಎಸ್​.ವಿ.ರಂಗನಾಥ್ ನೇಮಕ
  • ಇಂದು ನಡೆದ ಬೋರ್ಡ್​ ಸಭೆಯಲ್ಲಿ ನಿರ್ಧಾರ

14:22 July 31

ಹಂಗಾಮಿ ಮುಖ್ಯಸ್ಥರಾಗಿ ಎಸ್​.ವಿ.ರಂಗನಾಥ್ ನೇಮಕ

  • ಸಿದ್ಧಾರ್ಥ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ತಿಳಿದಿಲ್ಲ ಹಾಗೂ ಆರ್ಥಿಕ ಪರಿಸ್ಥಿತಿಯೂ ಗೊತ್ತಿಲ್ಲ
  • ಆದರೆ ಉದ್ಯಮಿಗಳು ತಮ್ಮ ಉದ್ಯಮದ ಸೋಲನ್ನು ಸ್ವಾಭಿಮಾನದ ನಾಶಕ್ಕೆ ಎಡೆಮಾಡಿಕೊಡಬಾರದು
  • ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಟ್ವೀಟ್

13:06 July 31

ಆನಂದ್ ಮಹೀಂದ್ರ ಟ್ವೀಟ್

  • ಮಾಜಿ ಸಿಎಂ ಎಸ್ ಎಂ ಕೃಷ್ಣ ಹಾಗೂ ಅವ್ರ ಪತ್ನಿ ಚಿಕ್ಕಮಂಗಳೂರು ಕಡೆ ಪಯಣ
  • ಹೆಚ್ ಎ ಎಲ್​ಗೆ  ತೆರಳಿರುವ ಎಸ್ ಎಂ ಕೃಷ್ಣಾ ಪತ್ನಿ  ಪ್ರೇಮಾ ಕೃಷ್ಣಾ.
  • ಚಾಪರ್ ವಿಮಾನ ಮೂಲಕ ಮೂಡಿಗೆರೆ ತಲುಪಲಿರುವ ಎಸ್ ಎಂ ಕೆ ದಂಪತಿ
  • ಮಧ್ಯಾಹ್ನ 2.30ಕ್ಕೆ ಮೂಡಿಗೆರೆ ತಲುಪಲಿರುವ ಎಸ್ ಎಂ ಕೃಷ್ಣ
  • ಎಸ್ ಎಂ ಕೆ ದಂಪತಿ ಹೊರತು ಪಡಿಸಿ ಉಳಿದೆಲ್ಲ ಕುಟುಂಬಸ್ಥರು ರಸ್ತೆ ಮಾರ್ಗದಿಂದ ಪ್ರಯಾಣ

12:14 July 31

ಚಿಕ್ಕಮಗಳೂರಿನತ್ತ ದಂಪತಿ ಸಮೇತ ಎಸ್​ಎಂಕೆ ಪ್ರಯಾಣ
  • ಚೇತನಹಳ್ಳಿ ಎಸ್ಟೇಟ್​ನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ
  • ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿರುವ ಚಿಕ್ಕಿನಹಳ್ಳಿ
  • ಮನೆಯ ಪಕ್ಕದಲ್ಲಿರುವ ಆವರಣದಲ್ಲಿ ಒಕ್ಕಲಿಗರ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರ
  • ಭದ್ರತೆಗಾಗಿ ಡಿವೈಎಸ್​ಪಿ ನೇತೃತ್ವದಲ್ಲಿ 200 ಜನ ಪೊಲೀಸರ ನಿಯೋಜನೆ
  • ಅಡಿಷನಲ್​ ಎಸ್ಪಿ ಶ್ರುತಿ ಕೂಡ ಸ್ಥಳದಲ್ಲೇ ಮೊಕ್ಕಾಂ
  • ಮಂಗಳೂರಿನಿಂದ ಮೃತದೇಹವನ್ನು ನೇರವಾಗಿ ಚಿಕ್ಕಮಗಳೂರಿನಲ್ಲಿರುವ ಎಬಿಸಿ ಕಾಫಿ ಕ್ಯೂರಿಂಗ್ ಆವರಣಕ್ಕೆ ರವಾನೆ
  • ಎಬಿಸಿ ಕಾಫಿ ಕ್ಯೂರಿಂಗ್ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ 
  • ಜಿಲ್ಲಾ ಎಸ್ಪಿ ಹರೀಶ್​ ಪಾಂಡೆಯಿಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ

11:58 July 31

ಹುಟ್ಟೂರಿನಲ್ಲಿ ಅಂತಿಮ ದರ್ಶನ ಹಾಗೂ ಅಂತಿಮ ಕಾರ್ಯದ ಸಿದ್ಧತೆ
  • ಸಿದ್ಧಾರ್ಥ ಸಾವು ಹಿನ್ನೆಲೆ
  • ಮೃತರ ಗೌರವಾರ್ಥ ಚಿಕ್ಕಮಗಳೂರಿನಲ್ಲಿ ಅಘೋಷಿತ ಬಂದ್​
  • ಮಧ್ಯಾಹ್ನ 2ರಿಂದ 4ರವರೆಗೆ ಅಂಗಡಿ-ಮುಂಗಟ್ಟು ಬಂದ್

11:47 July 31

ಮೀನುಗಾರಿಕೆಗೆ ತೆರಳಿದ ವೇಳೆ ಮೃತದೇಹ ತೇಲುತ್ತಿದ್ದುದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದೆ. ಶವವನ್ನು ಮೇಲೆತ್ತುವ ಕಾರ್ಯದಲ್ಲಿ ನಾನು ಪಾಲ್ಗೊಂಡಿದ್ದೆ: ರಿತೇಶ್, ಮೀನುಗಾರ

11:30 July 31

ಚಿಕ್ಕಮಗಳೂರಿನತ್ತ ಸಿದ್ಧಾರ್ಥ ಪಾರ್ಥಿವ ಶರೀರ ರವಾನೆ
  • ಸಿದ್ದಾರ್ಥ್ ಮೃತದೇಹ ವೆನ್ಲಾಕ್ ಆಸ್ಪತ್ರೆಯಿಂದ ಚಿಕ್ಕಮಗಳೂರಿಗೆ ಆ್ಯಂಬುಲೆನ್ಸ್ ಮೂಲಕ 10.45ಕ್ಕೆ ರವಾನೆ
  • ಮಂಗಳೂರಿನಿಂದ ಬಿ.ಸಿ.ರೋಡ್ ಮೂಲಕ ಉಜಿರೆ ಮಾರ್ಗವಾಗಿ ರವಾನೆ ಚಿಕ್ಕಮಗಳೂರಿಗೆ ರವಾನೆಯಾಗಲಿದೆ.
  • ಅಂಬ್ಯುಲೆನ್ಸ್‌ನಲ್ಲಿ ಕುಟುಂಬ ಸದಸ್ಯರು ಪಯಣ ಮಾಡಿದರು. ಶಾಸಕ ರಾಜೇಗೌಡ, ಯುಟಿ ಖಾದರ್, ಐವನ್ ಡಿಸೋಜಾ ಸಾಥ್
  • ಮಂಗಳೂರಿನ ‌ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ

11:21 July 31

  • ಸಿದ್ಧಾರ್ಥ ನಿಗೂಢ ಸಾವು ಹಿನ್ನೆಲೆ
  • ಲೋಕಸಭೆಯಲ್ಲಿ ಐಟಿ ಅಧಿಕಾರಿಗಳ ಕಿರುಕುಳ ಬಗ್ಗೆ ಲೋಕಸಭೆಯಲ್ಲಿ ನಿಲುವಳಿ ಸೂಚನೆ
  • ಕಾಂಗ್ರೆಸ್ ನಾಯಕ ಮನೀಷ್ ತಿವಾರಿಯಿಂದ ನಿಲುವಳಿ ಮಂಡನೆ

11:04 July 31

  • ಸಿದ್ದಾರ್ಥ್ ನಮ್ಮ ರಾಜ್ಯದ ಅಸ್ತಿ
  • ಕನ್ನಡಿಗರಾಗಿ ಇಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ
  • ವಿಶ್ವಾಸ ದಿಂದ ಜನರನ್ನ ನೋಡಿಕೊಂಡಿದ್ದ ವ್ಯಕ್ತಿ ಕೊನೆ ಉಸಿರು ಎಳೆದಿದ್ದಾರೆ
  • ಇದನ್ನ ನನಗೆ  ನಂಬಲು ಆಗ್ತಿಲ್ಲ
  • ಅವರ  ಸಿಬ್ಬಂದಿಗಳು, ಕುಟುಂಬಸ್ಥರಿಗೆ ದುಃಖಬರಿಸುವ ಶಕ್ತಿ ಆ ದೇವರು ನೀಡಲಿ
  • ಆ ದೇವರೇ ಎಲ್ಲವನ್ನು ನೋಡಿಕೊಳ್ಳಲಿ
  • ನಾನು ಅದರ ಬಗ್ಗೆ ಏನು ಮಾತನಾಡಲ್ಲ

10:49 July 31

ಡಿಕೆ ಶಿವಕುಮಾರ್ ಮಾತು

ಡಿಕೆ ಶಿವಕುಮಾರ್​ ಹೇಳಿಕೆ

ಖ್ಯಾತ ಉದ್ಯಮಿ ಸಿದ್ಧಾರ್ಥ ಸಾವು ನಿಜಕ್ಕೂ ದುರದೃಷ್ಟಕರ. ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ದೇವರು ನೀಡಲಿ.
ಸಿದ್ಧಾರ್ಥ ಬರೆದಿರುವ ಪತ್ರವನ್ನು ಸಮರ್ಪಕವಾಗಿ ತನಿಖೆ ನಡೆಸಬೇಕು. ಇದು ಆತ್ಮಹತ್ಯೆ ಅಲ್ಲ..!
ಮಿಲಿಂದ್ ದಿಯೋರಾ ಟ್ವೀಟ್

10:45 July 31

ಮಿಲಿಂದ್ ದಿಯೋರಾ ಟ್ವೀಟ್

ಯಾವುದೇ ಉದ್ಯಮವಿದ್ದರೂ, ರಾಜ್ಯ ಸರ್ಕಾರ ಹಾಗೂ ಐಟಿ ಇಲಾಖೆಯನ್ನು ಸಂಭಾಳಿಸುವುದು ಅತ್ಯಂತ ಸವಾಲಿನ ಕೆಲಸ. ಓರ್ವ ಉದ್ಯಮಿಗೆ ಐಟಿ,ಇಡಿ, ಸಿಬಿಐ,ಆರ್​ಒಸಿಗಳು ಅಡೆತಡೆಗಳಾಗಿವೆ ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಟ್ವೀಟ್

10:33 July 31

ಕಾರ್ತಿ ಚಿದಂಬರಂ ಟ್ವೀಟ್

  • ಸಿದ್ದಾರ್ಥ ಆತ್ಮಹತ್ಯೆಗೆ ಐಟಿ ಡಿಜಿ ಕಿರುಕುಳ ಹಿನ್ನೆಲೆ
  • ಪ್ರತಿಕ್ರಿಯೆಗೆ ನಿರಾಕರಿಸಿದ ನೂತನ ಸಿಎಂ ಬಿಎಸ್​ವೈ
  • ಐಟಿ ಡಿಜಿ ಪತ್ರದ ಕುರಿತ ಪ್ರತಿಕ್ರಿಯೆಗೆ ಬಿಎಸ್​​ವೈ  ‌ನಕಾರ
  • ಐಟಿ ಪತ್ರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳುತ್ತಿದ್ದಂತೆ  ಹೊರಟ ಸಿಎಂ
  • ಏನು ಮಾತನಾಡದೇ ಹೊರಟ ನೂತನ ಸಿಎಂ ಯಡಿಯೂರಪ್ಪ

10:10 July 31

ಐಟಿ ಪ್ರಶ್ನೆಗೆ ಸಿಎಂ ಮೌನ

ಐಟಿ ಬಗೆಗಿನ ಪ್ರಶ್ನೆಗೆ ಉತ್ತರಿಸದೆ ತೆರಳಿದ ಸಿಎಂ ಬಿಎಸ್​ವೈ
  • ಮೂಡಿಗೆರೆ ತಾಲೂಕಿನ ಚಿಕನಹಳ್ಳಿಯಲ್ಲಿರುವ ಚೇತನಹಳ್ಳಿ ಎಸ್ಟೇಟ್​ನಲ್ಲಿ ಸಕಲ ಸಿದ್ಧತೆ
  • ಮಂಗಳೂರಿನಿಂದ ನೇರವಾಗಿ ಚಿಕ್ಕಮಗಳೂರಿನ ಎಬಿಸಿ ಆವರಣಕ್ಕೆ ಮೃತದೇಹ ರವಾನೆ
  • ಕೆಲ ಸಮಯದ ಅಂತಿಮ ದರ್ಶನದ ಬಳಿಕ ಚಿಕನನಹಳ್ಳಿಗೆ ರವಾನೆ.
  • ಚೇತನಹಳ್ಳಿಗೆ ಹರಿದು ಬರುತ್ತಿರುವ ಸಂಬಂಧಿಕರು ಹಾಗೂ ಸ್ನೇಹಿತರ ದಂಡು
  • ಮನೆಯ ಪಕ್ಕದಲ್ಲೇ ಇರುವ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ

10:00 July 31

ಪೊಲೀಸರು 8.30ಕ್ಕೆ ಮಾಹಿತಿ ನೀಡಿದ್ದರು. ಪೋಸ್ಟ್ ಮಾರ್ಟಂಗೆ ಎರಡು ತಾಸು ತಗುಲುತ್ತೆ,
ಪೊಲೀಸರ ಮನವಿ ಮೇರೆಗೆ ಇಬ್ಬರು ತಜ್ಞ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಪೊಲೀಸರ ಬೇಕಾದ ಎಲ್ಲ ಸಹಾಯ ಮಾಡುತ್ತೇವೆ ಮತ್ತು ಅವರಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಮಾಡಿಕೊಳ್ಳಬಹುದು: ಡಾ.ರಾಜೇಶ್ವರಿ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ

09:56 July 31

ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ಮಾತು

ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ಮಾತು
  • ಸಿಎಂ ಯಡಿಯೂರಪ್ಪ ಹೇಳಿಕೆ
  • ಸಿದ್ದಾರ್ಥ ಅವರ ಮೃತದೇಹ ಸಿಕ್ಕಿದೆ
  • ಎಸ್ ಎಂಕೆ ಮನೆಯವರಿಗೆ ಸಾಂತ್ವನ ಹೇಳೋದಕ್ಕೆ‌ ಶಬ್ದ ಸಿಕ್ತಿಲ್ಲ
  • ಅಂತ್ಯಕ್ರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ
  • ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತೇನೆ
  • ಆಗರ್ಭ ಶ್ರೀಮಂತ ಸಿದ್ದಾರ್ಥ್  ಆತ್ಮಹತ್ಯೆ ಮಾಡಿಕೊಂಡಿರೋದು ಗ್ರಹಚಾರ
  • ಸಾಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ
  • ದುಡುಕಿ ಆತ್ಮಹತ್ಯೆ ಮಾಡಿಕೊಂಡ್ರು
  • ಅವರ ಕುಟುಂಬಕ್ಕೆ ಧೈರ್ಯ ಕೊಡಲಿ
  • ದಸವಳಗಿರಿ ನಿವಾಸದ ಬಳಿ ಸಿಎಂ ಬಿಎಸ್ ವೈ ಹೇಳಿಕೆ

09:38 July 31

ಸಿಎಂ ಬಿಎಸ್​ವೈ ಹೇಳಿಕೆ

ಸಿದ್ಧಾರ್ಥ ಸಾವಿನ ಬಗ್ಗೆ ಮಾತನಾಡಿದ ಸಿಎಂ ಬಿಎಸ್​ವೈ
  • ಟ್ವೀಟ್ ಮೂಲಕ ಐಟಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಕಾಂಗ್ರೆಸ್ ಆಕ್ರೋಶ
  • ಐಟಿ ಅಧಿಕಾರಿಗಳ ಕ್ರೂರತ್ವಕ್ಕೆ ಸಿದ್ಧಾರ್ಥ ಬಲಿ
  • ಸಿದ್ಧಾರ್ಥ ಆತ್ಮಹತ್ಯೆ ದುರದೃಷ್ಟಕರ

09:34 July 31

  • ಮನೆಯಿಂದ ಜಕ್ಕೂರ್ ಗೆ ತೆರಳಲಿರುವ ಎಸ್ ಎಂಕೆ ಕುಟುಂಬಸ್ಥರು
  • ಬಳಿಕ ಅಲ್ಲಿಂದ ಚಾಪರ್ ಮುಖಾಂತರ ಚಿಕ್ಕಮಗಳೂರಿಗೆ ತೆರಳುವ ಸಾಧ್ಯತೆ
  • ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಿಧನ ಹಿನ್ನಲೆ
  • ಚಿಕ್ಕಮಗಳೂರು ಬಂದ್ ಗೆ ಕರೆ ನೀಡಲು‌ ನಿರ್ಧಾರ
  • ಕಾಫಿ ವ್ಯಾಪಾರಸ್ಥರ ಸಂಘದಿಂದ ತುರ್ತು ಸಭೆ
  • ಚಿಕ್ಕಮಗಳೂರು ಕ್ಲಬ್ ನಲ್ಲಿ‌ ತುರ್ತು ಸಭೆ ನಡೆಸುತ್ತಿರುವ ಕಾಫಿ ಬೆಳೆಗಾರರು
  • ಕಾಫಿ ಮಾರುಕಟ್ಟೆಯ ಎಲ್ಲಾ ಚಟುವಟಿಕೆಗಳು ಬಂದ್
  • ನಗರದಲ್ಲಿ ಅಂಗಡಿ ಮುಂಗಟ್ಟು ಗಳು ತೆರೆಯದಂತೆ ಮನವಿ ಮಾಡಲಿರುವ ಬೆಳೆಗಾರರು.
  • ಇಂದು ಚಿಕ್ಕಮಗಳೂರು ನಗರ ಬಂದ್ ಆಗುವ ಸಾಧ್ಯತೆ
  • ಎಸ್ ಎಂ ಕೃಷ್ಣ ಮನೆಗೆ ಆರ್ ವಿ ದೇವರಾಜ್ ಆಗಮನ
  • ಕುಟುಂಬಸ್ಥರಿಗೆ ಕರೆ ಮಾಡಿದ ಶಾಸಕ ಯುಟಿ ಖಾದರ್
  • ಮೃತದೇಹ ಸಿಕ್ಕ ಬಗ್ಗೆ ಎಸ್ ಎಮ್ ಕೃಷ್ಣರಿಗೆ ಮಾಹಿತಿ
  • ದುಖಃತಪ್ತರಾಗಿರುವ ಕುಟುಂಬಸ್ಥರು
  • ಇನ್ನೇನು ಕೆಲ ಹೊತ್ತಲ್ಲಿ ಎಸ್ ಎಮ್ ಕೃಷ್ಣ ಮನೆಗೆ ಸಿಎಂ ಬರೋ ಸಾಧ್ಯತೆ
  • ಮೃತ ದೇಹವನ್ನ ಬೆಂಗಳೂರಿಗೆ ತರಬೇಕಾ ಬೇಡ್ವಾ ಅನ್ನೊ‌ಬಗ್ಗೆ ಚರ್ಚೆ
  • ಮಾಜಿ ಸಿಎಂ ಎಸ್ ಎಮ್‌ಕೆ‌ ನಿವಾಸದಲ್ಲಿ ನೀರವ ಮೌನ
  • ಕುಟುಂಬಸ್ಥರಿಗೆ ಕರೆ ಮಾಡಿದ ಶಾಸಕ ಯುಟಿ ಖಾದರ್
  • ಶಾಸಕ ಯು.ಟಿ ಖಾದರ್ ಮಾತು
  • ಮೃತದೇಹ ಸಿಕ್ಕ ಬಗ್ಗೆ ಎಸ್ ಎಮ್ ಕೃಷ್ಣರಿಗೆ ಮಾಹಿತಿ
  • ವಿಷಯ ಗೊತ್ತಾಗ್ತಿದ್ದಂತೆ ದುಖಃತಪ್ತರಾಗಿರುವ ಕುಟುಂಬಸ್ಥರು
  • ಆತಂಕದಲ್ಲಿರೋ ಎಸ್ ಎಮ್ ಕೆ ಪತ್ನಿ
  • ಮೃತದೇಹ ಚಿಕ್ಕಮಗಳೂರು ಅಥವಾ ಬೆಂಗಳೂರಿಗೆ ತರೋದರ ಬಗ್ಗೆ ಚರ್ಚೆ
  • ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ
  • ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
  • ಇನ್ನೇನು ಕೆಲ ಹೊತ್ತಲ್ಲಿ ಎಸ್ ಎಮ್ ಕೃಷ್ಣ ಮನೆಗೆ ಸಿಎಂ ಬರೋ ಸಾಧ್ಯತೆ
  • ಮೃತ ದೇಹ ಸಂಜೆ ಬರುವ ಸಾಧ್ಯತೆ
  • ವೆನ್ಲಾಕ್​ ಆಸ್ಪತ್ರೆಗೆ ಮೃತದೇಹ ರವಾನೆ
  • ಉದ್ಯಮಿ ಸಿದ್ದಾರ್ಥ್ ಸಾವು ಹಿನ್ನೆಲೆ
  •  ತೀವ್ರ ಆತಂಕಕ್ಕೊಳಗಾಗಿರೋ ಮಾಜಿ ಸಿಎಂ ಎಸ್ ಎಮ್ ಕೃಷ್ಣರಿಗೆ ಜ್ವರ
  • ಕುಟುಂಬದ ವೈದ್ಯರನ್ನ ಕರೆಸಿ ಚಿಕಿತ್ಸೆ ಪಡೆದಿರೋ ಎಸ್ ಎಮ್ ಕೆ
  • ಪೊಲೀಸ್ ಮತ್ತು ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿ ನದಿಯ ಸುತ್ತಾ ಅಲರ್ಟ್ ಬಗ್ಗೆ‌ ಕೂಡಾ ಮಾಹಿತಿ
  • ಅನಾರೋಗ್ಯ ಹಿನ್ನಲೆ‌ ಸದ್ಯ ಮನೆಯಲ್ಲಿ  ನಿದ್ರೆಯಲ್ಲಿರೋ ಎಸ್ ಎಮ್ ಕೆ
  • ಮನೆಯಲ್ಲಿ ಎಸ್ ಎಮ್ ಕೆ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿದಂತೆ ಸಂಬಂಧಿಕರು ಇದ್ದಾರೆ

ಮಂಗಳೂರು: ಜುಲೈ 29 ರ ರಾತ್ರಿಯಿಂದ ನಾಪತ್ತೆಯಾಗಿದ್ದ ಎಸ್​ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ.  ನೇತ್ರಾವತಿ ಹಿನ್ನೀರು ಪ್ರದೇಶದಲ್ಲಿ ಮೃತದೇಹ ಸಿಕ್ಕಿದೆ. 

ಮಂಗಳೂರಿನ ಹೊಯಿಗೆ ಬಜಾರ್​ನಲ್ಲಿ ಸಿದ್ಧಾರ್ಥ್​ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ಶವವನ್ನು ಗುರುತಿಸಿದ ಮೀನುಗಾರರು ದಡಕ್ಕೆ ತಂದಿದ್ದಾರೆ. ಸದ್ಯ ಮಂಗಳೂರಿನ ವೆನ್ಲಾಕ್​ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.

ಸಿದ್ಧಾರ್ಥ್​ ಅವರು ಬದುಕಿಬರಬಹುದೆಂದು ಕಾಯುತ್ತಿದ್ದ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನ ಹಳ್ಳಿಯಲ್ಲಿರುವ ಅವರ ಕುಟುಂಬ ವರ್ಗವು ಸದ್ಯ ಶೋಕ ಸಾಗರದಲ್ಲಿ ಮುಳುಗಿದೆ. 

ಕೆಫೆ ಕಾಫಿ ಡೇ ಸಂಸ್ಥೆಯ ನಷ್ಟದಿಂದಾಗಿ ನೊಂದಿದ್ದ ಸಿದ್ಧಾರ್ಥ್​ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಆದಾಯ ತೆರಿಗೆ ಇಲಾಖೆಯ ಈ ಹಿಂದಿನ ಡಿಜಿ ತಮಗೆ ಕಿರುಕುಳ ನೀಡಿದ್ದರು ಎಂದು ಸಿದ್ಧಾರ್ಥ್​ ಅವರು ಬರೆದಿದ್ದರೆನ್ನಲಾದ ಪತ್ರವೊಂದು ವೈರಲ್​ ಆಗಿತ್ತು. 

ಜುಲೈ 29 ರಿಂದ ನಾಪತ್ತೆಯಾಗಿದ್ದ ಎಸ್​ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ.  

07:02 July 31

ಕಾಫಿ ಸಾಮ್ರಾಟನ ಯುಗಾಂತ್ಯ

ಶಾಸಕ ಯುಟಿ ಖಾದರ್ ಮಾತು
  • ಮನೆಯಿಂದ ಜಕ್ಕೂರ್ ಗೆ ತೆರಳಲಿರುವ ಎಸ್ ಎಂಕೆ ಕುಟುಂಬಸ್ಥರು
  • ಬಳಿಕ ಅಲ್ಲಿಂದ ಚಾಪರ್ ಮುಖಾಂತರ ಚಿಕ್ಕಮಗಳೂರಿಗೆ ತೆರಳುವ ಸಾಧ್ಯತೆ
  • ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಿಧನ ಹಿನ್ನಲೆ
  • ಚಿಕ್ಕಮಗಳೂರು ಬಂದ್ ಗೆ ಕರೆ ನೀಡಲು‌ ನಿರ್ಧಾರ
  • ಕಾಫಿ ವ್ಯಾಪಾರಸ್ಥರ ಸಂಘದಿಂದ ತುರ್ತು ಸಭೆ
  • ಚಿಕ್ಕಮಗಳೂರು ಕ್ಲಬ್ ನಲ್ಲಿ‌ ತುರ್ತು ಸಭೆ ನಡೆಸುತ್ತಿರುವ ಕಾಫಿ ಬೆಳೆಗಾರರು
  • ಕಾಫಿ ಮಾರುಕಟ್ಟೆಯ ಎಲ್ಲಾ ಚಟುವಟಿಕೆಗಳು ಬಂದ್
  • ನಗರದಲ್ಲಿ ಅಂಗಡಿ ಮುಂಗಟ್ಟು ಗಳು ತೆರೆಯದಂತೆ ಮನವಿ ಮಾಡಲಿರುವ ಬೆಳೆಗಾರರು.
  • ಇಂದು ಚಿಕ್ಕಮಗಳೂರು ನಗರ ಬಂದ್ ಆಗುವ ಸಾಧ್ಯತೆ
  • ಎಸ್ ಎಂ ಕೃಷ್ಣ ಮನೆಗೆ ಆರ್ ವಿ ದೇವರಾಜ್ ಆಗಮನ
  • ಕುಟುಂಬಸ್ಥರಿಗೆ ಕರೆ ಮಾಡಿದ ಶಾಸಕ ಯುಟಿ ಖಾದರ್
  • ಮೃತದೇಹ ಸಿಕ್ಕ ಬಗ್ಗೆ ಎಸ್ ಎಮ್ ಕೃಷ್ಣರಿಗೆ ಮಾಹಿತಿ
  • ದುಖಃತಪ್ತರಾಗಿರುವ ಕುಟುಂಬಸ್ಥರು
  • ಇನ್ನೇನು ಕೆಲ ಹೊತ್ತಲ್ಲಿ ಎಸ್ ಎಮ್ ಕೃಷ್ಣ ಮನೆಗೆ ಸಿಎಂ ಬರೋ ಸಾಧ್ಯತೆ
  • ಮೃತ ದೇಹವನ್ನ ಬೆಂಗಳೂರಿಗೆ ತರಬೇಕಾ ಬೇಡ್ವಾ ಅನ್ನೊ‌ಬಗ್ಗೆ ಚರ್ಚೆ
  • ಮಾಜಿ ಸಿಎಂ ಎಸ್ ಎಮ್‌ಕೆ‌ ನಿವಾಸದಲ್ಲಿ ನೀರವ ಮೌನ
  • ಕುಟುಂಬಸ್ಥರಿಗೆ ಕರೆ ಮಾಡಿದ ಶಾಸಕ ಯುಟಿ ಖಾದರ್
  • ಶಾಸಕ ಯು.ಟಿ ಖಾದರ್ ಮಾತು
  • ಮೃತದೇಹ ಸಿಕ್ಕ ಬಗ್ಗೆ ಎಸ್ ಎಮ್ ಕೃಷ್ಣರಿಗೆ ಮಾಹಿತಿ
  • ವಿಷಯ ಗೊತ್ತಾಗ್ತಿದ್ದಂತೆ ದುಖಃತಪ್ತರಾಗಿರುವ ಕುಟುಂಬಸ್ಥರು
  • ಆತಂಕದಲ್ಲಿರೋ ಎಸ್ ಎಮ್ ಕೆ ಪತ್ನಿ
  • ಮೃತದೇಹ ಚಿಕ್ಕಮಗಳೂರು ಅಥವಾ ಬೆಂಗಳೂರಿಗೆ ತರೋದರ ಬಗ್ಗೆ ಚರ್ಚೆ
  • ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರ
  • ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
  • ಇನ್ನೇನು ಕೆಲ ಹೊತ್ತಲ್ಲಿ ಎಸ್ ಎಮ್ ಕೃಷ್ಣ ಮನೆಗೆ ಸಿಎಂ ಬರೋ ಸಾಧ್ಯತೆ
  • ಮೃತ ದೇಹ ಸಂಜೆ ಬರುವ ಸಾಧ್ಯತೆ
  • ವೆನ್ಲಾಕ್​ ಆಸ್ಪತ್ರೆಗೆ ಮೃತದೇಹ ರವಾನೆ
  • ಉದ್ಯಮಿ ಸಿದ್ದಾರ್ಥ್ ಸಾವು ಹಿನ್ನೆಲೆ
  •  ತೀವ್ರ ಆತಂಕಕ್ಕೊಳಗಾಗಿರೋ ಮಾಜಿ ಸಿಎಂ ಎಸ್ ಎಮ್ ಕೃಷ್ಣರಿಗೆ ಜ್ವರ
  • ಕುಟುಂಬದ ವೈದ್ಯರನ್ನ ಕರೆಸಿ ಚಿಕಿತ್ಸೆ ಪಡೆದಿರೋ ಎಸ್ ಎಮ್ ಕೆ
  • ಪೊಲೀಸ್ ಮತ್ತು ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿ ನದಿಯ ಸುತ್ತಾ ಅಲರ್ಟ್ ಬಗ್ಗೆ‌ ಕೂಡಾ ಮಾಹಿತಿ
  • ಅನಾರೋಗ್ಯ ಹಿನ್ನಲೆ‌ ಸದ್ಯ ಮನೆಯಲ್ಲಿ  ನಿದ್ರೆಯಲ್ಲಿರೋ ಎಸ್ ಎಮ್ ಕೆ
  • ಮನೆಯಲ್ಲಿ ಎಸ್ ಎಮ್ ಕೆ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿದಂತೆ ಸಂಬಂಧಿಕರು ಇದ್ದಾರೆ

ಮಂಗಳೂರು: ಜುಲೈ 29 ರ ರಾತ್ರಿಯಿಂದ ನಾಪತ್ತೆಯಾಗಿದ್ದ ಎಸ್​ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ.  ನೇತ್ರಾವತಿ ಹಿನ್ನೀರು ಪ್ರದೇಶದಲ್ಲಿ ಮೃತದೇಹ ಸಿಕ್ಕಿದೆ. 

ಮಂಗಳೂರಿನ ಹೊಯಿಗೆ ಬಜಾರ್​ನಲ್ಲಿ ಸಿದ್ಧಾರ್ಥ್​ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ಶವವನ್ನು ಗುರುತಿಸಿದ ಮೀನುಗಾರರು ದಡಕ್ಕೆ ತಂದಿದ್ದಾರೆ. ಸದ್ಯ ಮಂಗಳೂರಿನ ವೆನ್ಲಾಕ್​ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.

ಸಿದ್ಧಾರ್ಥ್​ ಅವರು ಬದುಕಿಬರಬಹುದೆಂದು ಕಾಯುತ್ತಿದ್ದ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನ ಹಳ್ಳಿಯಲ್ಲಿರುವ ಅವರ ಕುಟುಂಬ ವರ್ಗವು ಸದ್ಯ ಶೋಕ ಸಾಗರದಲ್ಲಿ ಮುಳುಗಿದೆ. 

ಕೆಫೆ ಕಾಫಿ ಡೇ ಸಂಸ್ಥೆಯ ನಷ್ಟದಿಂದಾಗಿ ನೊಂದಿದ್ದ ಸಿದ್ಧಾರ್ಥ್​ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಆದಾಯ ತೆರಿಗೆ ಇಲಾಖೆಯ ಈ ಹಿಂದಿನ ಡಿಜಿ ತಮಗೆ ಕಿರುಕುಳ ನೀಡಿದ್ದರು ಎಂದು ಸಿದ್ಧಾರ್ಥ್​ ಅವರು ಬರೆದಿದ್ದರೆನ್ನಲಾದ ಪತ್ರವೊಂದು ವೈರಲ್​ ಆಗಿತ್ತು. 

ಜುಲೈ 29 ರಿಂದ ನಾಪತ್ತೆಯಾಗಿದ್ದ ಎಸ್​ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ.  

Last Updated : Jul 31, 2019, 8:05 PM IST

ABOUT THE AUTHOR

...view details