ಕರ್ನಾಟಕ

karnataka

ETV Bharat / state

ಕೆಎಸ್​​​ಆರ್​​ಟಿಸಿ ಬಸ್‌ನಲ್ಲಿ ಯುವತಿಗೆ ಕಿರುಕುಳ : ಮಂಗಳೂರಿನಲ್ಲಿ ಆರೋಪಿ ಬಂಧನ

ಇಂದು ಸುಳ್ಯದಿಂದ ಮಂಗಳೂರಿಗೆ ಯುವತಿಯೊಬ್ಬಳು ಕೆಎಸ್​​​ಆರ್​​ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಈಕೆಯ ಪಕ್ಕದ ಸೀಟಿನಲ್ಲಿ ವಾಜಿದ್ ಎ ಜಮಖಾನಿ ಪ್ರಯಾಣಿಸುತ್ತಿದ್ದ..

By

Published : Mar 19, 2022, 4:27 PM IST

ಆರೋಪಿ ಬಂಧನ
ಆರೋಪಿ ಬಂಧನ

ಮಂಗಳೂರು : ಕೆಎಸ್​​​ಆರ್​​ಟಿಸಿ ಬಸ್‌ನಲ್ಲಿ ಸಹಪ್ರಯಾಣಿಕಳಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಕನಾಡಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ವಾಜಿದ್ ಎ ಜಮಖಾನಿ ಬಂಧಿತ ಆರೋಪಿ.

ಇಂದು ಸುಳ್ಯದಿಂದ ಮಂಗಳೂರಿಗೆ ಯುವತಿಯೊಬ್ಬಳು ಕೆಎಸ್​​​ಆರ್​​ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಈಕೆಯ ಪಕ್ಕದ ಸೀಟಿನಲ್ಲಿ ವಾಜಿದ್ ಎ ಜಮಖಾನಿ ಪ್ರಯಾಣಿಸುತ್ತಿದ್ದ.

ಪ್ರಯಾಣದ ವೇಳೆ ಈತ ಯುವತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿ ಮಾನಹಾನಿ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯುವತಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details