ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡದಲ್ಲಿ ಕೊರೊನಾದಿಂದ 7 ಮಂದಿ ಸಾವು: 428 ಮಂದಿಗೆ ಸೋಂಕು - corona news

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಇಂದು ಏಳು ಜನರು ಸಾವನ್ನಪ್ಪಿದ್ದು, 222 ಮಂದಿ ಗುಣಮುಖರಾಗಿದ್ದಾರೆ. 428 ಮಂದಿಗೆ ಸೋಂಕು ತಗುಲಿದೆ.

ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

By

Published : Sep 4, 2020, 8:48 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಇಂದು 7 ಮಂದಿ ಸಾವನ್ನಪ್ಪಿದ್ದು, 428 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೊನಾದಿಂದ ಮೃತಪಟ್ಟ 7 ಮಂದಿಯಲ್ಲಿ 4 ಮಂದಿ ಮಂಗಳೂರು ತಾಲೂಕು, ಒಬ್ಬರು ಪುತ್ತೂರು ತಾಲೂಕು ಮತ್ತು ಇಬ್ಬರು ಹೊರಜಿಲ್ಲೆಯವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 391ಕ್ಕೆ ಏರಿಕೆಯಾಗಿದೆ.

ಮಂಗಳೂರು ತಾಲೂಕಿನ 222 ಮಂದಿ, ಬಂಟ್ವಾಳ ತಾಲೂಕಿನ 61, ಪುತ್ತೂರು ತಾಲೂಕಿನ 54 , ಸುಳ್ಯ ತಾಲೂಕಿನ 45, ಬೆಳ್ತಂಗಡಿ ತಾಲೂಕಿನ 28 ಮತ್ತು ಹೊರಜಿಲ್ಲೆಯ 18 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು14223 ಮಂದಿಗೆ ಕೊರೊನಾ ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 222 ಮಂದಿ ಗುಣಮುಖರಾಗಿದ್ದು, ಈವರೆಗೆ 10928 ಮಂದಿ ಗುಣಮುಖರಾಗಿದ್ದಾರೆ. 2904 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details