ಕರ್ನಾಟಕ

karnataka

By

Published : Jul 6, 2022, 10:05 AM IST

ETV Bharat / state

ಮಂಗಳೂರು: ಕಡಲ್ಕೊರೆತಕ್ಕೆ ಬಟಪಾಡಿ ರಸ್ತೆ ಸಮುದ್ರಪಾಲು, ಮೂಡಬಿದಿರೆಯಲ್ಲಿ ಧರೆ ಕುಸಿತ

ಮಳೆಯಿಂದ ಮಂಗಳೂರಿನ ಹೊರವಲಯದ ಮೊಂಟುಗೋಳಿಯಲ್ಲಿ ಧರೆ ಕುಸಿದು ರಸ್ತೆಗೆ ಬಿದ್ದಿದೆ. ಉಳ್ಳಾಲದ ಉಚ್ಚಿಲ ಬಟಪಾಡಿಯಲ್ಲಿ ಕಡಲ್ಕೊರೆತ ತೀವ್ರವಾಗಿದೆ.

sea-erosion-damage-road-in-mangaluru
ಮಂಗಳೂರು: ಕಡಲ್ಕೊರೆತಕ್ಕೆ ಬಟಪಾಡಿ ರಸ್ತೆ ಸಮುದ್ರಪಾಲು, ಮೂಡಬಿದಿರೆಯಲ್ಲಿ ಧರೆ ಕುಸಿತ

ಮಂಗಳೂರು:ನಗರದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಇಂದು ಬೆಳಗ್ಗೆಯಿಂದ ಕೊಂಚ ಬಿಡುವು ನೀಡಿದೆ. ಮಳೆಯಿಂದ ಕಡಲ್ಕೊರೆತವು ತೀವ್ರವಾಗಿದ್ದು, ಉಳ್ಳಾಲದ ಉಚ್ಚಿಲ ಬಟಪಾಡಿಯಲ್ಲಿ ಬಟಪಾಡಿಯ ಸುಮಾರು 1 ಕಿ.ಮೀ ದೂರದವರೆಗಿನ ರಸ್ತೆ ಸಮುದ್ರಪಾಲಾಗಿದೆ.


ಹವಾಮಾನ ಇಲಾಖೆಯ ಪ್ರಕಾರ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಇದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಎರಡು ದಿನ ಆರೆಂಜ್ ಅಲರ್ಟ್ ಎಚ್ಚರಿಕೆಯಲ್ಲಿ ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಇಂದೂ ಕೂಡ ಜಿಲ್ಲೆಯಲ್ಲಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

1. ಧರೆ ಕುಸಿತ:ಮಂಗಳೂರಿನ ಹೊರವಲಯದ ಮೊಂಟುಗೋಳಿಯಲ್ಲಿ ಧರೆ ಕುಸಿದು ರಸ್ತೆಗೆ ಬಿದ್ದಿದೆ. ನಡುಪದವು- ಮೋಂಟುಗೋಳಿ ರಸ್ತೆಯಲ್ಲಿ ಧರೆ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಹಾಗೆಯೇ ಗುರುಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯ ಧರೆ ಕುಸಿಯುತ್ತಿದ್ದು, ಕುಸಿತ ಹೆಚ್ಚಾದರೆ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಇದೆ.


2. ವಿಮಾನಗಳು ಡೈವರ್ಟ್:ಭಾರಿ ಮಳೆಗೆ ನಿನ್ನೆ ಮಂಗಳೂರಿಗೆ ಬರಬೇಕಿದ್ದ ಎರಡು ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ದುಬೈ ಮತ್ತು ದಮಾಮ್​ನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನ ಮಂಗಳೂರಿನಲ್ಲಿ ಇಳಿಯಲಾಗದೆ, ಬೆಂಗಳೂರಿಗೆ ಡೈವರ್ಟ್ ಮಾಡಲಾಗಿತ್ತು.

3. ಚರಂಡಿಗೆ ಬಿದ್ದ ಕಾರು:ಉಳ್ಳಾಲದ ಸೋಮೇಶ್ವರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಚರಂಡಿಗೆ ಬಿದ್ದಿದೆ. ಬಳಿಕ ಕಾರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಮೇಲೆತ್ತಿದ್ದಾರೆ.

4. ಕಾರುಗಳಿಗೆ ಹಾನಿ:ಮೂಡಬಿದಿರೆಯಲ್ಲಿ ಧರೆ ಕುಸಿದು ಕಾರುಗಳಿಗೆ ಹಾನಿಯಾದ ಘಟನೆ ನಡೆದಿದೆ. ಇಲ್ಲಿನ ಮೈಟ್ ಕಾಲೇಜು ಕಟ್ಟಡದ ಬಳಿ ಧರೆ ಕುಸಿದಿದ್ದು, ವಿದ್ಯಾರ್ಥಿಗಳ ಮೂರು ಕಾರುಗಳು ಜಖಂಗೊಂಡಿವೆ.

ಇದನ್ನೂ ಓದಿ:ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ: ಹಲವೆಡೆ ಶಾಲೆ, ಕಾಲೇಜಿಗೆ ರಜೆ ಘೋಷಣೆ

ABOUT THE AUTHOR

...view details