ಕರ್ನಾಟಕ

karnataka

ETV Bharat / state

ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಮೆಟ್ಟಿಲು ನವೀಕರಣ: ವಾಸ್ತು ದೋಷ ಕಾರಣ? - ಈಟಿವಿ ಭಾರತ ಕನ್ನಡ

ವಾಸ್ತು ದೋಷ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೆಟ್ಟಿಲುಗಳನ್ನು ನವೀಕರಣ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

renovation-of-dk-district-congress-office-stairs
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಮೆಟ್ಟಿಲು ನವೀಕರಣ : ವಾಸ್ತು ದೋಷ ಕಾರಣ ?

By

Published : Dec 14, 2022, 9:32 PM IST

ಮಂಗಳೂರು: ವಾಸ್ತು ದೋಷ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೆಟ್ಟಿಲುಗಳನ್ನು ನವೀಕರಣ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡಿವೆ. ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಳೆದ ಕೆಲವು ದಿನಗಳಿಂದ ಮೆಟ್ಟಿಲಿನ ನವೀಕರಣ ಕಾಮಗಾರಿ ನಡೆಯುತ್ತಿದೆ. ಈ ಹಿಂದೆ ಎಂಟು ಮೆಟ್ಟಿಲುಗಳಿದ್ದು, ಇದೀಗ ಒಂಭತ್ತು ಮೆಟ್ಟಿಲುಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಾಸ್ತುದೋಷದಿಂದಾಗಿ ಕಾಮಗಾರಿ ನಡೆದಿದೆ ಎಂಬ ವದಂತಿಗೆ, ಇದು ವಾಸ್ತು ಕಾರಣಕ್ಕಲ್ಲ. ಮೆಟ್ಟಿಲಿನ ಬದಿಯಲ್ಲಿದ್ದ ನೀರಿನ ಟ್ಯಾಂಕ್ ಶುದ್ದೀಕರಣಕ್ಕಾಗಿ ಮತ್ತು ಇಂಟರ್‌ಲಾಕ್ ಸರಿಯಾಗಿ ಹಾಕದ ಕಾರಣ ನವೀಕರಣ ಕಾಮಗಾರಿ ನಡೆಸಲಾಗಿದೆ ಎಂದು ಕಾಂಗ್ರೆಸ್ ​ನಾಯಕರು ಹೇಳಿದ್ದಾರೆ.

ಇದನ್ನೂ ಓದಿ :ದಕ್ಷಿಣ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ 'ನಮ್ಮ ಕ್ಲಿನಿಕ್' ಆರಂಭ

ABOUT THE AUTHOR

...view details