ಕರ್ನಾಟಕ

karnataka

ETV Bharat / state

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ವೀರರಾಣಿ ಅಬ್ಬಕ್ಕ' ಹೆಸರಿಡುವಂತೆ ಒತ್ತಾಯ - Veera Rani Abbakka Airport Name

ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಹೆಗ್ಗಳಿಕೆ ಪಡೆದ ಅಬ್ಬಕ್ಕಳ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡುವಂತೆ ಮಾಜಿ‌ ಶಾಸಕ ಜಯರಾಮ ಶೆಟ್ಟಿ ಮನವಿ ಮಾಡಿದರು.

Re-name Mangaluru International Airport After Veera Rani Abbakka
Re-name Mangaluru International Airport After Veera Rani Abbakka

By

Published : Dec 18, 2021, 9:36 AM IST

ಮಂಗಳೂರು:ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ವೀರರಾಣಿ ಅಬ್ಬಕ್ಕ'ಳ ಹೆಸರಿಡಬೇಕೆಂಬ ಒತ್ತಾಯವನ್ನು ನಾವು ಸಾಕಷ್ಟು ವರ್ಷಗಳಿಂದ ಮಾಡುತ್ತಿದ್ದರೂ, ಇನ್ನೂ ಆ ಕನಸು ಈಡೇರಿಲ್ಲ ಎಂದು ಮಾಜಿ‌ ಶಾಸಕ ಜಯರಾಮ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನಾಮಕರಣ ಬದಲಾವಣೆ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಗ್ಗೆ ಅಂದಿನ ಸಂಸದ ಧನಂಜಯ ಕುಮಾರ್ ಅವರು ಲೋಕಸಭೆಯಲ್ಲಿ, ಶಾಸಕಿಯಾಗಿದ್ದ ಶಕುಂತಲಾ ಶೆಟ್ಟಿಯವರು ವಿಧಾನಸಭೆಯಲ್ಲಿ ಹಾಗೂ ಪರಿಷತ್​ ಸದಸ್ಯರಾಗಿದ್ದ ಐವನ್ ಡಿಸೋಜ ವಿಧಾನ ಪರಿಷತ್​ನಲ್ಲಿ ಪ್ರಸ್ತಾಪ ಮಾಡಿದ್ದರು.

ಮಾಜಿ‌ ಶಾಸಕ ಜಯರಾಮ ಶೆಟ್ಟಿ

ತುಳುನಾಡಿನ ಕ್ರಾಂತಿ ಪುರುಷರಾದ ಕೋಟಿ - ಚೆನ್ನಯರ ಹೆಸರು ಇಡಬೇಕೆಂಬ ಕೂಗು ಸಹ ಕೇಳಿ ಬರುತ್ತಿದೆ‌. ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಕೋಟಿ - ಚೆನ್ನಯರಿಗಿಂತಲೂ 200 ವರ್ಷಗಳ ಕಾಲ ಹಿಂದಿನವಳು ಅಬ್ಬಕ್ಕ. ಆದ್ದರಿಂದ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಅಬ್ಬಕ್ಕಳ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೇಕೆಂಬುದು ನಮ್ಮೆಲ್ಲರ ಹಕ್ಕೊತ್ತಾಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಪುತ್ಥಳಿ ಕೆಡವಿ ಪುಂಡರ ಅಟ್ಟಹಾಸ.. ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಗ್ನ

ABOUT THE AUTHOR

...view details