ಕರ್ನಾಟಕ

karnataka

ಕಟೀಲು ದೇವಸ್ಥಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

By

Published : Jan 27, 2020, 11:02 PM IST

ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್ ಇಂದು ಕಟೀಲು ದೇವಾಲಯಕ್ಕೆ ತೆರಳಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.

rajnath singh visits to katilu durgaparameshwari temple
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಟೀಲು ದೇವಾಸ್ಥನಕ್ಕೆ ಭೇಟಿ

ಮಂಗಳೂರು: ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್ ಇಂದು ಕಟೀಲು ದೇವಾಲಯಕ್ಕೆ ತೆರಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದ್ರು.

ನಗರದ ಬಂಗ್ರ ಕೂಳೂರಿನಲ್ಲಿ‌ ನಡೆದ ಮೋದಿ ಸರಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾನೂನನ್ನು ಬೆಂಬಲಿಸಿ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಬಂದ ಅವರು ಮೊದಲಿಗೆ ಕಟೀಲಿಗೆ ತೆರಳಿ ಶ್ರೀದೇವಿಯ ದರ್ಶನ ಪಡೆದರು. ಈಗ ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಈ ಬಗ್ಗೆಯೂ ಅವರು ಮಾಹಿತಿ ಪಡೆದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಟೀಲು ದೇವಾಸ್ಥನಕ್ಕೆ ಭೇಟಿ

ರಾಜನಾಥ್ ಸಿಂಗ್ ಈ ಹಿಂದೆಯೂ ಮಂಗಳೂರಿಗೆ ಬಂದ ಸಂದರ್ಭದಲ್ಲಿ ಪೊಳಲಿ ರಾಜರಾಜೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ನಡೆಯುತ್ತಿತ್ತು. ಆಗ ಅವರು ಪೊಳಲಿಗೆ ತೆರಳಿ ಶ್ರೀ ರಾಜರಾಜೇಶ್ವರಿ ದೇವಿಯ ದರ್ಶನ ಪಡೆದಿದ್ದರು.

For All Latest Updates

TAGGED:

ABOUT THE AUTHOR

...view details