ಕರ್ನಾಟಕ

karnataka

ETV Bharat / state

ದುಬೈನಿಂದ ಕಣ್ಣೂರಿಗೆ ಬಂದ ಕರ್ನಾಟಕ ಪ್ರಯಾಣಿಕರು.. ಕಾಸರಗೋಡಿನಲ್ಲಿ ಗೊಂದಲ, ಮಂಗಳೂರಿಗೆ ಶಿಫ್ಟ್!! - Quarantine

ಕೇರಳದ 4 ಸರ್ಕಾರಿ ಬಸ್​ಗಳಲ್ಲಿ ಬಂದ ಪ್ರಯಾಣಿಕರು ನೇರವಾಗಿ ಅದೇ ಬಸ್‌ಗಳಲ್ಲಿ ದಕ್ಷಿಣ ಕನ್ನಡದ ಹೋಟೆಲ್‌ ಸೇರಿದ್ದಾರೆ. ಲಾಕ್‌ಡೌನ್ ಬಳಿಕ ಇದೇ ಪ್ರಥಮ ಬಾರಿ ಕೇರಳದ ಬಸ್‌ ಕರ್ನಾಟಕದ ರಸ್ತೆಯಲ್ಲಿ ಸಂಚರಿಸಿದೆ. ಇದೀಗ ಮಂಗಳೂರಿನ 2, ದೇರಳಕಟ್ಟೆಯ 1 ಹಾಗೂ ಕೂಳೂರಿನ 1 ಹೋಟೆಲ್​ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿದೆ..

Mangalore
Mangalore

By

Published : Jun 29, 2020, 4:05 PM IST

Updated : Jun 29, 2020, 8:20 PM IST

ಮಂಗಳೂರು :ದುಬೈಯಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ‌ ಜೂನ್‌ 27ರಂದು ಬಂದಿಳಿದ 150 ಪ್ರಯಾಣಿಕರು ಕಾಸರಗೋಡಿನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು‌. ಅಲ್ಲಿ ಗೊಂದಲ ಏರ್ಪಟ್ಟು ಇದೀಗ ಅವರೆಲ್ಲರೂ ಮಂಗಳೂರಿಗೆ ಶಿಫ್ಟ್ ಆಗಿ ವಿವಿಧ ಹೋಟೆಲ್‌ಗಳಲ್ಲಿ ಕ್ವಾರಂಟೈನ್​ಗೆ ಒಳಗಾದ ಘಟನೆ ನಡೆದಿದೆ.

ಕೆಸಿಎಫ್‌ ಆಯೋಜಿಸಿರುವ ಚಾರ್ಟರ್ ವಿಮಾನದ ಮೂಲಕ‌ ದುಬೈನಿಂದ ಮಂಗಳೂರಿಗೆ ಬಂದಿರುವ 150 ಪ್ರಯಾಣಿಕರನ್ನು ಮಂಗಳೂರಿಗೆ ತಲುಪಿಸುವ ವ್ಯವಸ್ಥೆ ಮಾಡಲು ಪ್ರಯತ್ನಿಸಿತ್ತು. ಆದರೆ, ದ.ಕ ಜಿಲ್ಲಾಡಳಿತ, ಕರ್ನಾಟಕ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯದ ಅನುಮತಿ ಸಿಗದ ಕಾರಣ ಜೂನ್ 27ರಂದು ದುಬೈಯಿಂದ ಕೇರಳದ ಕಣ್ಣೂರಿಗೆ ವಿಮಾನ ಬಂದಿದೆ.

ಈ ವಿಮಾನದಲ್ಲಿ ಕರ್ನಾಟಕದ 150 ಪ್ರಯಾಣಿಕರಿದ್ದಾರೆ. ಕರ್ನಾಟಕದಲ್ಲಿ 7 ದಿನ ಹೋಟೆಲ್ ಕ್ವಾರಂಟೈನ್‌ ಇರುವ ಈ ಎಲ್ಲಾ ಪ್ರಯಾಣಿಕರಿಗೆ ಕರ್ನಾಟಕ ಪ್ರವೇಶಕ್ಕೆ ಕಾನೂನು ತೊಡಕು ಉಂಟಾಗಿತ್ತು. ಪ್ರಯಾಣಿಕರಿಗೆ ಕ್ವಾರಂಟೈನ್ ಕುರಿತು ಹಾಗೂ ಇ-ಪಾಸ್ ಬಗ್ಗೆ ಸರಿಯಾದ ಮಾಹಿತಿಯೂ ನೀಡಿರಲಿಲ್ಲ. ಮೊನ್ನೆ ಕಣ್ಣೂರಿಂದ ಬಂದ ಪ್ರಯಾಣಿಕರಿಗೆ ಕಾಸರಗೋಡಿನ 3 ಹೋಟೆಲ್‌ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು.

ನಿನ್ನೆ ಅಲ್ಲಿನ ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾಗಿರುವುದರಿಂದ ಕಾಸರಗೋಡು ಜಿಲ್ಲಾಧಿಕಾರಿಯವರು ಪ್ರಯಾಣಿಕರಿಂದ ಹೋಟೆಲ್ ತೆರವುಗೊಳಿಸಲು ಹೇಳಿದ್ದಾರೆ. ಪ್ರಯಾಣಿಕರು ಬೀದಿಗೆ ಬಂದ ವಿಷಯ ತಿಳಿದ ತಕ್ಷಣ ಮಾಜಿ ಸಚಿವ ಯು ಟಿ ಖಾದರ್, ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಅತಂತ್ರರಾದ 150 ಪ್ರಯಾಣಿಕರನ್ನು ಕಾಸರಗೋಡಿನಿಂದ ಮಂಗಳೂರಿಗೆ ತಲುಪಿಸಿ ಹೋಟೆಲ್ ಕ್ವಾರಂಟೈನ್ ಮಾಡುವ ವ್ಯವಸ್ಥೆ ಮಾಡಿದ್ದಾರೆ.

ಕೇರಳದ 4 ಸರ್ಕಾರಿ ಬಸ್​ಗಳಲ್ಲಿ ಬಂದ ಪ್ರಯಾಣಿಕರು ನೇರವಾಗಿ ಅದೇ ಬಸ್‌ಗಳಲ್ಲಿ ದಕ್ಷಿಣ ಕನ್ನಡದ ಹೋಟೆಲ್‌ ಸೇರಿದ್ದಾರೆ. ಲಾಕ್‌ಡೌನ್ ಬಳಿಕ ಇದೇ ಪ್ರಥಮ ಬಾರಿ ಕೇರಳದ ಬಸ್‌ ಕರ್ನಾಟಕದ ರಸ್ತೆಯಲ್ಲಿ ಸಂಚರಿಸಿದೆ. ಇದೀಗ ಮಂಗಳೂರಿನ 2, ದೇರಳಕಟ್ಟೆಯ 1 ಹಾಗೂ ಕೂಳೂರಿನ 1 ಹೋಟೆಲ್​ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಯಾಣಿಕರು ಕಾನೂನಾತ್ಮಕ ಪ್ರಯಾಣಕ್ಕೆ ಅರ್ಹರಲ್ಲದಿದ್ದರೂ ಕೆಸಿಎಫ್ ಮುಂಗಡವಾಗಿ ಕ್ವಾರಂಟೈನ್ ವ್ಯವಸ್ಥೆ ಮಾಡದಿದ್ರೂ ದ.ಕ ಜಿಲ್ಲಾಧಿಕಾರಿ ಸಿಂಧೂ ಪಿ ರೂಪೇಶ್ ಅವರು ಮಾನವೀಯ ನೆಲೆಯಲ್ಲಿ 150 ಮಂದಿಗೆ ತುರ್ತು ವ್ಯವಸ್ಥೆ ಮಾಡಿದ್ದಾರೆ.

Last Updated : Jun 29, 2020, 8:20 PM IST

ABOUT THE AUTHOR

...view details