ಮಂಗಳೂರು:ವೇತನ ಹೆಚ್ಚಿಸಬೇಕೆಂದು ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆಯ ಪಂಪ್ ಹೌಸ್ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ವೇತನ ಪರಿಷ್ಕರಣೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ಪಂಪ್ ಹೌಸ್ ಕಾರ್ಮಿಕರಿಂದ ಪ್ರತಿಭಟನೆ! - ಪಂಪ್ ಹೌಸ್ ಕಾರ್ಮಿಕರ ಪ್ರತಿಭಟನೆ
ಮಂಗಳೂರು ಮಹಾನಗರ ಪಾಲಿಕೆಯ ಪಂಪ್ ಹೌಸ್ನ ಸುಮಾರು 136 ಕಾರ್ಮಿಕರು ವೇತನ ಹೆಚ್ಚಿಸಬೇಕೆಂದು ಆಗ್ರಹಿಸಿ ನಗರದ ಮುಲ್ಲಕಾಡು ಎಸ್ ಟಿಪಿಯ ಮುಂಭಾಗ ಧರಣಿ ನಡೆಸುತ್ತಿದ್ದಾರೆ.

ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ನಗರದ ಮುಲ್ಲಕಾಡು ಎಸ್ ಟಿಪಿಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 136 ಕಾರ್ಮಿಕರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.ಈ ಸಂದರ್ಭ ಪಂಪ್ ಹೌಸ್ ಕಾರ್ಮಿಕ ರಾಜೇಶ್ ಪೆರ್ನಾಜೆ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯು 2014ರಿಂದ ಪಂಪ್ ಹೌಸ್ ಟೆಂಡರನ್ನು ಎಸ್ಇಝಡ್ ಗೆ ನೀಡುತ್ತಿದೆ. ಆ ಬಳಿಕ ನಮಗೆ ಸಂಬಳ ಪರಿಷ್ಕರಣೆ ಆಗಿಲ್ಲ. ಅಲ್ಲದೆ ನಮಗೆ ಸೌಲಭ್ಯಗಳು ಇಲ್ಲ. ಅವರು ಮೂರು ವರ್ಷಗಳಿಗೊಮ್ಮೆ ಹೊರ ಗುತ್ತಿಗೆದಾರರಿಗೆ ಸಬ್ ಟೆಂಡರ್ ನೀಡುತ್ತಿದ್ದಾರೆ. ಆ ಸಬ್ ಟೆಂಡರ್ ದೊಡ್ಡ ಮೊತ್ತದಲ್ಲಿ ನೀಡಲಾಗುತ್ತದೆ. ಆದರೆ ನೌಕಕರಿಗೆ ಮಾತ್ರ ಕರ್ನಾಟಕ ಸರಕಾರದ ಕನಿಷ್ಠ ವೇತನ ನೀಡಲಾಗುತ್ತಿದೆ. ನಮಗೆ ಟೆಂಡರ್ ನಲ್ಲಿರುವ ವೇತನವೇ ದೊರಕಬೇಕು. ಅಲ್ಲದೆ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ತನಿಖೆ ನಡೆಸಬೇಕೆಂದು ಒಂದು ತಿಂಗಳ ಹಿಂದೆ ಮನವಿ ನೀಡಿದ್ದೆವು. ಅಲ್ಲದೆ ಶಾಸಕರು, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ನೀಡಿದ್ದೇವೆ. ಆದರೆ ಈವರೆಗೆ ಎಸ್ಇಝಡ್ ನವರು ಈವರೆಗೆ ಯಾವುದೇ ತನಿಖೆ ನಡೆಸಲಿಲ್ಲ. ಅಲ್ಲದೆ ಯಾರ ಮೇಲೂ ಕ್ರಮ ಕೈಗೊಳ್ಳಲೂ ಇಲ್ಲ. ಆದ್ದರಿಂದ ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ರು.