ಕರ್ನಾಟಕ

karnataka

ಅಡಿಕೆ ಹಾಳೆಯಿಂದ ತ್ರಿವರ್ಣ ಬ್ಯಾಡ್ಜ್, ರಾಖಿ: ಬಳಕೆಯ ಬಳಿಕ ಗಿಡವಾಗಿ ಬೆಳೆಯುತ್ತೆ

By

Published : Aug 9, 2021, 11:59 AM IST

Updated : Aug 9, 2021, 2:23 PM IST

ಅಡಿಕೆ ಹಾಳೆಯಿಂದ ತಯಾರಿಸಲಾದ ತ್ರಿವರ್ಣ ಬ್ಯಾಡ್ಜ್ ಮತ್ತು ರಾಖಿಯ ಒಳಭಾಗದಲ್ಲಿ ಟೊಮ್ಯಾಟೊ, ಬದನೆ, ತುಳಸಿ ಗಿಡಗಳ ಬೀಜಗಳನ್ನು ಹಾಕಲಾಗಿದೆ. ಈ ತ್ರಿವರ್ಣ ಬ್ಯಾಡ್ಜ್ ಮತ್ತು ರಾಖಿ ಬಳಕೆಯ ಬಳಿಕ ತೊಟ್ಟಿಗೆ ಹಾಕಿದರೆ ಅದು ಗಿಡವಾಗಿ ಬೆಳೆಯಲಿದೆ. ಈ ತ್ರಿವರ್ಣ ಬ್ಯಾಡ್ಜ್ ಗೆ ರೂ 10 ಮತ್ತು ರಾಖಿಗೆ ರೂ 35 ದರ ವಿಧಿಸಲಾಗಿದ್ದು ಆನ್ ಲೈನ್ ಮೂಲಕ ಮಾರಾಟ ಪ್ರಕ್ರಿಯೆ ನಡೆಸಲಾಗುತ್ತದೆ.

ಅಡಿಕೆ ಹಾಳೆಯ ತ್ರಿವರ್ಣ ಧ್ವಜ ಬ್ಯಾಡ್ಜ್
ಅಡಿಕೆ ಹಾಳೆಯ ತ್ರಿವರ್ಣ ಧ್ವಜ ಬ್ಯಾಡ್ಜ್

ಮಂಗಳೂರು:ನಗರದ ಪಕ್ಷಿಕೆರೆಯಲ್ಲಿರುವ ಪೇಪರ್ ಸೀಡ್ ಸಂಸ್ಥೆ ಪರಿಸರಕ್ಕೆ ಪೂರಕವಾದ ಸಾಮಗ್ರಿಗಳನ್ನು ತಯಾರಿಸುವುದರಲ್ಲಿ ಪ್ರಖ್ಯಾತಿ ಪಡೆದಿದೆ. ಹಬ್ಬಗಳು ಮತ್ತು ಇತರ ಆಚರಣೆಗಳ ವೇಳೆ ಪರಿಸರ ಪೂರಕ ಮತ್ತು ಬಳಕೆಯ ಬಳಿಕ ಗಿಡವಾಗಿ ಬೆಳೆಯುವ ಸಾಮಗ್ರಿಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನಕ್ಕೆ ಪರಿಸರ ಪ್ರೇಮಿ ಉತ್ಪನ್ನಗಳನ್ನು ತಯಾರಿಸಿದೆ.

ಅಡಿಕೆ ಹಾಳೆಯ ತ್ರಿವರ್ಣ ಧ್ವಜ ಬ್ಯಾಡ್ಜ್

ಖ್ಯಾತ ಪರಿಸರ ಪ್ರೇಮಿ‌, ಕಲಾವಿದ ನಿತಿನ್‌ವಾಸ್ ಅವರು ಪರಿಸರಕ್ಕೆ ಪೂರಕವಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತಾರೆ. ಇತ್ತೀಚಿಗೆ ಅವರ ಪೇಪರ್ ಸೀಡ್ ಸಂಸ್ಥೆಯಿಂದ ತಯಾರಿಸಲಾದ ಗಿಡವಾಗಿ ಬೆಳೆಯುವ ಮಾಸ್ಕ್​​​ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯಾಗಿತ್ತು. ಇದೀಗ ಇವರು ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನ ದಿನಕ್ಕಾಗಿ ವಿಶೇಷ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಕರಾವಳಿಯ ಪ್ರಸಿದ್ದ ಬೆಳೆಯಾದ ಅಡಿಕೆ ಮರದ ಎಲೆಯನ್ನು ಉಪಯೋಗಿಸಿ ಭಾರತದ ತ್ರಿವರ್ಣ ಧ್ವಜದ ಬ್ಯಾಡ್ಜ್ ಮತ್ತು ರಕ್ಷಾ ಬಂಧನ ತಯಾರಿಸಿದ್ದಾರೆ. ಈ ಹಿಂದೆ ಇದನ್ನು ಪೇಪರ್‌ಗಳನ್ನು ಸಂಸ್ಕರಿಸಿ ತಯಾರಿಸುತ್ತಿದ್ದರು. ಆದರೆ ರಕ್ಷಾ ಬಂಧನ ಮತ್ತು ಸ್ವಾತಂತ್ರ್ಯ ದಿನಾಚರಣೆ ಮಳೆಗಾಲದಲ್ಲಿ ಬರುವುದರಿಂದ ಅದು ಬೇಗನೆ ಒದ್ದೆಯಾಗುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅಡಿಕೆ ಮರದ ಹಾಳೆಯ ಮೂಲಕ ತಯಾರಿಸಿದ್ದಾರೆ.

ಈ ಅಡಿಕೆ ಹಾಳೆಯಿಂದ ತಯಾರಿಸಲಾದ ತ್ರಿವರ್ಣ ಬ್ಯಾಡ್ಜ್ ಮತ್ತು ರಾಖಿಯ ಒಳಭಾಗದಲ್ಲಿ ಟೊಮ್ಯಾಟೊ, ಬದನೆ, ತುಳಸಿ ಗಿಡಗಳ ಬೀಜಗಳನ್ನು ಹಾಕಲಾಗಿದೆ. ಈ ತ್ರಿವರ್ಣ ಬ್ಯಾಡ್ಜ್ ಮತ್ತು ರಾಖಿ ಬಳಕೆಯ ಬಳಿಕ ತೊಟ್ಟಿಗೆ ಹಾಕಿದರೆ ಅದು ಗಿಡವಾಗಿ ಬೆಳೆಯಲಿದೆ. ಈ ತ್ರಿವರ್ಣ ಬ್ಯಾಡ್ಜ್ ಗೆ ರೂ 10 ಮತ್ತು ರಾಖಿಗೆ ರೂ 35 ದರ ವಿಧಿಸಲಾಗಿದ್ದು ಆನ್‌ಲೈನ್ ಮೂಲಕ ಮಾರಾಟ ಪ್ರಕ್ರಿಯೆ ನಡೆಸಲಾಗುತ್ತದೆ.

ಇದನ್ನೂ ಓದಿ: ಮಂಗಳೂರು: ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದ ರಜನಿ ಶೆಟ್ಟಿ

ವಿವಿಧ ಹಬ್ಬ ಮತ್ತು ವಿಶೇಷ ದಿನಗಳ ಸಂದರ್ಭದಲ್ಲಿ ಉಪಯೋಗಿಸಲಾಗುವ ಉತ್ಪನ್ನಗಳನ್ನು ಪರಿಸರ ಸ್ನೇಹಿ ರೂಪ ಕೊಟ್ಟು ಆ ಮೂಲಕ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ನಿತಿನ್ ವಾಸ್ ನಿರಂತರವಾಗಿ ಮಾಡುತ್ತಿದ್ದಾರೆ. ಇದೀಗ ಸ್ವಾತಂತ್ರ್ಯ ಸಂಭ್ರಮಕ್ಕೆ ಮತ್ತು ರಕ್ಷಾ ಬಂಧನಕ್ಕೆ ಪರಿಸರ ಪೂರಕ ಉತ್ಪನ್ನ ತಯಾರಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Last Updated : Aug 9, 2021, 2:23 PM IST

For All Latest Updates

ABOUT THE AUTHOR

...view details