ಕರ್ನಾಟಕ

karnataka

ETV Bharat / state

'ಪವಿತ್ರ ಆರ್ಥಿಕತೆ' ಸಂವಾದ: ಮಂಗಳೂರಿನಲ್ಲಿ‌ ಗಾಂಧಿವಾದಿಯಿಂದ ವಿಶಿಷ್ಟ ಸತ್ಯಾಗ್ರಹ - ಪವಿತ್ರ ಆರ್ಥಿಕತೆ ಸಂವಾದ ಕಾರ್ಯಕ್ರಮ

ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಆರ್ಥಿಕ ಸುಧಾರಣೆ ಮಾಡಿ ಎಂದು ಒತ್ತಾಯಿಸಿ 'ಪವಿತ್ರ ಆರ್ಥಿಕತೆ' ಎಂಬ ವಿಶಿಷ್ಟ ಸತ್ಯಾಗ್ರಹ ಹಾಗೂ ಸಂವಾದ ನಡೆಸಿದ್ದಾರೆ.

ಗಾಂಧಿವಾದಿ ಪ್ರಸನ್ನ ಹೆಗ್ಗೋಡು

By

Published : Nov 15, 2019, 4:54 PM IST

ಮಂಗಳೂರು: ಇಲ್ಲಿನ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರು ಗಾಂಧಿ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದು ಎಲ್ಲಾ ಸಮಸ್ಯೆಗಳಿಗೂ ಮಹಾತ್ಮ ಗಾಂಧೀಜಿ ಅವರಂತೆ ಸತ್ಯಾಗ್ರಹ, ಉಪವಾಸಗಳೇ ಪರಿಹಾರವೆಂದು ನಂಬಿದ್ದಾರೆ.

ಪವಿತ್ರ ಆರ್ಥಿಕತೆ ಸಂವಾದ ಕಾರ್ಯಕ್ರಮ

ಅಪ್ಪಟ ಗಾಂಧಿವಾದಿ ಪ್ರಸನ್ನ ಹೆಗ್ಗೋಡು ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿರುವ ಪರಿಸ್ಥಿತಿಯ ವಿರುದ್ಧ ಪ್ರತಿಭಟಿಸಿದ್ದಾರೆ. ಮಂಗಳೂರಿನ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್​ನಲ್ಲಿ ಉದ್ಯೋಗ ಸೃಷ್ಟಿ ಮಾಡಿ ಆರ್ಥಿಕತೆ ಸುಧಾರಣೆ ಮಾಡಿ ಎಂದು ಪವಿತ್ರ ಆರ್ಥಿಕತೆ ಎಂಬ ವಿಶಿಷ್ಟ ಸತ್ಯಾಗ್ರಹ ಹಾಗೂ ಸಂವಾದ ನಡೆಸಿದರು.

ಆಧುನಿಕ ಜಗತ್ತಿನಲ್ಲಿ ಆವರಿಸಿರುವ ರಾಕ್ಷಸ ಆರ್ಥಿಕತೆಯ ಪರಿಣಾಮದಿಂದ ಯುವ ಜನಾಂಗ ಹೇಗೆ ಉದ್ಯೋಗದಿಂದ ವಂಚಿತರಾಗುತ್ತಾರೆ ಎಂದು ವಿಸ್ತಾರವಾಗಿ ಅವರು ತಿಳಿಸಿದರು. ಈ ಸಮಸ್ಯೆಯಿಂದ ನಮ್ಮನ್ನು ನಾವು ಯಾವ ರೀತಿಯಲ್ಲಿ ಬಿಡಿಸಿಕೊಳ್ಳಬಹುದು ಎಂದು ಜನರ ಪ್ರಶ್ನೆಗೆ ಹೆಗ್ಗೋಡು ಉತ್ತರಿಸಿದ್ದಾರೆ.

ಮಂಗಳೂರಿನ ಚಿಂತಕರು, ಶಿಕ್ಷಕರು, ನಾಟಕಕಾರರು ಹಾಗು ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details