ಕರ್ನಾಟಕ

karnataka

ETV Bharat / state

ಸಿಎಎ-ಎನ್​ಆರ್​ಸಿ ಬೆಂಬಲಿಸಿ ಪೋಸ್ಟ್​ ಮಾಡಿದವನಿಗೆ ವಿದೇಶದಿಂದ ಬಂತು ಬೆದರಿಕೆ ಕರೆ - ಸಿಎಎ ಬೆಂಬಲಿಸಿ ಪೋಸ್ಟ್​ ಮಾಡಿದವನಿಗೆ ವಿದೇಶದಿಂದ ಬೆದರಿಕೆ

ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ಎನ್​​ಆರ್​​ಸಿಯಿಂದಾಗಿ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಫೇಸ್‌ಬುಕ್‌ ಪೋಸ್ಟ್ ಮಾಡಿದ್ದ ಬಿಜೆಪಿ ಕಾರ್ಯಕರ್ತನಿಗೆ‌ ವಿದೇಶದಿಂದ ಜೀವಬೆದರಿಕೆ ಕರೆ ಬಂದಿದೆ.

ಸಿಎಎ-ಎನ್​ಆರ್​ಸಿ ಬೆಂಬಲಿಸಿ ಪೋಸ್ಟ್​ ಮಾಡಿದವನಿಗೆ ವಿದೇಶದಿಂದ ಬೆದರಿಕೆ ಕರೆ, threaten call from abroad
ಜೀವ ಬೆದರಿಕೆ

By

Published : Jan 9, 2020, 9:33 PM IST

ಮಂಗಳೂರು:ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ಎನ್​​ಆರ್​​ಸಿಯಿಂದಾಗಿ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಫೇಸ್‌ಬುಕ್‌ ಪೋಸ್ಟ್ ಮಾಡಿದ್ದ ಬಿಜೆಪಿ ಕಾರ್ಯಕರ್ತನಿಗೆ‌ ವಿದೇಶದಿಂದ ಜೀವಬೆದರಿಕೆ ಕರೆ ಬಂದಿದೆ ಎಂದು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಜೆಪಿ ಕಾರ್ಯಕರ್ತ ಮುಹಮ್ಮದ್ ಅಸ್ಗರ್‌‌ ಅವರು ಸಿಎಎ ಮತ್ತು ಎನ್‌ಆರ್‌ಸಿಯಿಂದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌‌ನಲ್ಲಿ ಪೋಸ್ಟ್ ಹಾಕಿದ್ದರು. ಈ ಹೇಳಿಕೆ ವಿರುದ್ಧ ವಿದೇಶದಿಂದ ವ್ಯಕ್ತಿಯೊಬ್ಬ ಕರೆ ಮಾಡಿ ನಿಂದಿಸಿದ್ದಾನೆ. ಬಳಿಕ ವಾಟ್ಸಪ್‌ನಲ್ಲಿ ವಾಯ್ಸ್ ಮೆಸೇಜ್ ಮೂಲಕವೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮುಹಮ್ಮದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಪ್ರತಿ

'ನಿನ್ನನ್ನು ನಾವು ಬಿಟ್ಟದ್ದೇ ದೊಡ್ಡ ತಪ್ಪು, ನಿನ್ನನ್ನು ಯಾವತ್ತೋ ಮುಗಿಸಬೇಕಿತ್ತು ಎಂದು ಬೆದರಿಕೆಯೊಡ್ಡಿದ್ದಾನೆ. ದ.ಕ. ಜಿಲ್ಲೆಯಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ಬಗ್ಗೆ ಲೇಖನ ಬರೆದರೆ ನಿನ್ನ ಶವ ಯಾವುದಾದರೂ ಗುಡ್ಡದಲ್ಲಿ ಪತ್ತೆಯಾಗಬಹುದು. ದಿನದ 24 ಗಂಟೆಯೂ ನಿನಗೆ ಯಾರೂ ರಕ್ಷಣೆ ನೀಡಲ್ಲ ಎಂಬುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಗುರುವಾರ ಪುನಃ ಕರೆ ಮಾಡಿದ ಆತ, ನಾನು ನೀಡಿದ್ದ ಹೇಳಿಕೆ ವಾಪಸ್ ಪಡೆಯಲು ಎಚ್ಚರಿಕೆ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಪ್ರತಿ

ಜೀವ ಬೆದರಿಕೆ ಒಡ್ಡಿದ ಆರೋಪಿಯನ್ನು ಬಂಧಿಸಬೇಕು. ಜೊತೆಗೆ ತನಗೆ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details