ಕಡಬ/ದಕ್ಷಿಣ ಕನ್ನಡ: ಮನೆಯ ಹಿಂಬದಿಯ ಶೆಡ್ನಲ್ಲಿ ಅಕ್ರಮವಾಗಿ ದನದ ಮಾಂಸ ತಯಾರು ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿರುವ ಘಟನೆ ಮಂಗಳವಾರ ರಾತ್ರಿ ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ಎಂಬಲ್ಲಿ ನಡೆದಿದೆ.
ಮನೆ ಹಿಂಬದಿ ಶೆಡ್ನಲ್ಲಿ ದನದ ಮಾಂಸ ತಯಾರು: ಕಡಬ ಪೊಲೀಸರ ದಾಳಿ - ದಕ್ಷಿಣಕನ್ನಡ ಸುದ್ದಿ
ಅಕ್ರಮವಾಗಿ ದನದ ಮಾಂಸ ತಯಾರು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಕಡಬ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಶಮೀಲಾಗಿರುವ ಮೂವರು ಪರಾರಿಯಾಗಿದ್ದು ಅಕ್ರಮ ಮಾಂಸವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
![ಮನೆ ಹಿಂಬದಿ ಶೆಡ್ನಲ್ಲಿ ದನದ ಮಾಂಸ ತಯಾರು: ಕಡಬ ಪೊಲೀಸರ ದಾಳಿ](https://etvbharatimages.akamaized.net/etvbharat/prod-images/768-512-5046279-thumbnail-3x2-mng.jpg)
ಬಂಧಿತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ವಿನೋದ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಬಾವೆ, ಶ್ರೀಧರ್, ಪೂಪಿ ಯಾನೆ ಥಾಮಸ್ ಎಂಬವರು ಪರಾರಿಯಾಗಿದ್ದಾರೆ. ನೂಜಿಬಾಳ್ತಿಲದಲ್ಲಿ ಅಕ್ರಮವಾಗಿ ದನದ ಮಾಂಸ ತಯಾರು ಮಾಡಲಾಗುತ್ತಿದೆ ಎಂಬ ಬಗ್ಗೆ ಸುಳಿವು ಪಡೆದ ಕಡಬ ಎಎಸ್ಐ ರವಿ.ಎಂ. ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು 30 ಕೆಜಿಯಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸಿದರೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡದ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ಎಚ್ಚರಿಸಿದ್ದಾರೆ.