ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿ ಕಡಿಮೆ ಇರುವುದರಿಂದ ಪಿಲಿಕುಳ ನಿಸರ್ಗಧಾಮವನ್ನು ಜು.4 ರಿಂದ ಮುಚ್ಚಲು ನಿರ್ಧರಿಸಲಾಗಿದೆ.
ಪ್ರವಾಸಿಗರ ಕೊರತೆ: ಜು. 4 ರಿಂದ 31 ವರೆಗೆ ಪಿಲಿಕುಳ ಬಂದ್ - Mangalore latest news
ಪ್ರವಾಸಿಗರು ಕಡಿಮೆ ಪ್ರಮಾಣದಲ್ಲಿ ಪಿಲಿಕುಳಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜುಲೈ.04 ರಿಂದ ಜುಲೈ.31ರವರೆಗೆ ತಾತ್ಕಾಲಿಕವಾಗಿ ನಿಸರ್ಗಧಾಮವನ್ನು ಮುಚ್ಚಲಾಗುತ್ತಿದೆ.
![ಪ್ರವಾಸಿಗರ ಕೊರತೆ: ಜು. 4 ರಿಂದ 31 ವರೆಗೆ ಪಿಲಿಕುಳ ಬಂದ್ Pilikula](https://etvbharatimages.akamaized.net/etvbharat/prod-images/768-512-04:44:45:1593688485-kn-mng-05-pilikula-bund-photo-7202146-02072020164309-0207f-1593688389-66.jpg)
Pilikula
ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಪಿಲಿಕುಳ ನಿಸರ್ಗಧಾಮವನ್ನು ತೆರೆಯಲಾಗಿತ್ತು. ಆದರೆ ಕೊರೊನಾ, ಹಾಗೂ ಮಳೆಗಾಲದ ಕಾರಣದಿಂದ ಇಲ್ಲಿಗೆ ಬರುವ ಪ್ರವಾಸಿಗಳ ಸಂಖ್ಯೆಯಲ್ಲಿ ಇಳಿಮುಖವಾದ ಹಿನ್ನೆಲೆಯಲ್ಲಿ ನಿಸರ್ಗಧಾಮ ಮುಚ್ಚಲು ನಿರ್ಧರಿಸಲಾಗಿದೆ.
ಜುಲೈ.04 ರಿಂದ ಜುಲೈ.31ರವರೆಗೆ ಪಿಲಿಕುಳವನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದ್ದು, ಈ ಅವಧಿಯಲ್ಲಿ ಸಂದರ್ಶಕರ ಭೇಟಿಗೆ ಅವಕಾಶವಿರುವುದಿಲ್ಲ ಎಂದು ಪಿಲಿಕುಳ ನಿಸರ್ಗಧಾಮ ಪ್ರಕಟಣೆಯಲ್ಲಿ ತಿಳಿಸಿದೆ.