ಕರ್ನಾಟಕ

karnataka

ಶ್ರೀ ಕ್ಷೇತ್ರ ಕದ್ರಿ ದೇವಾಲಯದ ಬ್ರಹ್ಮಕಲಶೋತ್ಸವ : ಪೇಜಾವರ ಶ್ರೀಗಳಿಂದ ಧಾರ್ಮಿಕ ಉಪನ್ಯಾಸ

By

Published : May 7, 2019, 1:47 AM IST

ಶ್ರೀ ಕ್ಷೇತ್ರ ಕದ್ರಿ ಮಂಜುನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು‌ ಉದ್ಘಾಟಿಸಿ, ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮಾತನಾಡಿದರು.

ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ

ಮಂಗಳೂರು: ಶಿವ ಎಂದರೆ ನಮ್ಮ‌ಅಂತಃಕರಣವನ್ನು‌ ನಿರ್ಮಲಗೊಳಿಸುವ ದೇವರು.‌ ಶಿವನು‌ ತನ್ನ ಮೂರನೆಯ ಕಣ್ಣಿನಿಂದ ಕಾಮನನ್ನು ಸುಟ್ಟು ನಮಗೆ ಮಹಾನ್ ಸಂದೇಶವನ್ನು ನೀಡಿದ್ದಾನೆ. ಜೊತೆಗೆ ಸತ್ಕಾಮನೆಗಳನ್ನು ಹುಟ್ಟು ಹಾಕುವಂತೆ ಸೂಚಿಸಿದ್ದಾನೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಕ್ಷೇತ್ರ ಕದ್ರಿ ಮಂಜುನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಮಾತನಾಡಿದ ಅವರು, ಮತ್ತೊಬ್ಬರ ದೋಷವನ್ನು‌ ಹುಡುಕುತ್ತೇವೆ. ಆದರೆ ಅವರ ಉತ್ತಮ ಗುಣವನ್ನು ಗಮನಿಸುವುದಿಲ್ಲ. ಶಿವ ಹಾಗಲ್ಲ‌. ಅವನು ಸಮುದ್ರ ಮಥನದಿಂದ ಬಂದ ಚಂದ್ರನನ್ನು‌ ಧರಿಸಿದ. ಕಾಲಕೋಟ ವಿಷವನ್ನು ನುಂಗಿದ. ಹಾಗೆಯೇ ನಾವು ಮತ್ತೊಬ್ಬರ ದೋಷವನ್ನು ನುಂಗಿಬಿಡಬೇಕು. ಇಂದು ಭ್ರಷ್ಟಾಚಾರ ದೊಡ್ಡ ಕಾಲಕೋಟ ವಿಷವಾಗಿದೆ. ಅದು ನಾಶವಾಗಬೇಕಾದರೆ ಶಿವನ‌ ಅನುಗ್ರಹ ಇಡೀ ರಾಷ್ಟ್ರಕ್ಕೆ ಆಗಬೇಕು ಎಂದು ಹೇಳಿದರು.

ಈ‌ ಸಂದರ್ಭದಲ್ಲಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ಸ್ವಾಮೀಜಿ, ಡಾ.ಶಾಂತಾರಾಮ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು, ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details