ಕರ್ನಾಟಕ

karnataka

ETV Bharat / state

'ಕೃಷಿಕರೇ ಬೆಳೆ ಬಿಸಾಡಬೇಡಿ, ಮಾರುಕಟ್ಟೆ ಬೆಲೆಗಿಂತ ಒಂದು ರೂಪಾಯಿ  ಹೆಚ್ಚು ನೀಡಿ ಖರೀದಿಸುತ್ತೇವೆ'

ಲಾಕ್​ಡೌನ್ ವೇಳೆ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ತರಕಾರಿಗಳನ್ನು ರಸ್ತೆ, ಚರಂಡಿಗೆ ಎಸೆದಿರುವುದನ್ನು ಗಮನಿಸಿದ ಪನಾಮ ನೇಚರ್ ಫ್ರೆಶ್ ಕಂಪನಿಯು ಇದೀಗ ರೈತರ ತರಕಾರಿಗಳನ್ನು ಖರೀದಿಸಲು ಪ್ಲಾನ್​ ಹಾಕಿಕೊಂಡಿದೆ.

By

Published : Jun 6, 2021, 1:44 PM IST

Panama group
ಪನಾಮ ಉದ್ಯಮಿ

ಮಂಗಳೂರು:ಕೊರೊನಾ ಲಾಕ್​ಡೌನ್ ವೇಳೆ ರೈತರು ಬೆಳೆದಿರುವ ತರಕಾರಿಗಳನ್ನು ಸೂಕ್ತ ಬೆಲೆ ನೀಡಿ ನಾವು‌ ಖರೀದಿಸುತ್ತೇವೆ ಎಂದು ಪನಾಮ ನೇಚರ್ ಫ್ರೆಶ್ ಪ್ರೈವೆಟ್ ಲಿಮಿಟೆಡ್​ನ ಸಿಇಓ ವಿವೇಕ್ ರಾಜ್ ಪೂಜಾರಿ ತಿಳಿಸಿದ್ದಾರೆ.

ಪನಾಮ ನೇಚರ್ ಫ್ರೆಶ್ ಕಂಪನಿ ತರಕಾರಿಗಳನ್ನು ಖರೀದಿಸಲು ಪ್ಲಾನ್

ಕೊರೊನಾ ಲಾಕ್​ಡೌನ್ ವೇಳೆ ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗದೆ ತರಕಾರಿಗಳನ್ನು ರಸ್ತೆ, ಚರಂಡಿಗೆ ಎಸೆದಿರುವುದನ್ನು ಗಮನಿಸಿದ್ದೇನೆ. ಇದಕ್ಕಾಗಿ ರಾಜ್ಯದಲ್ಲಿ ರೈತರು ತಮ್ಮ ಬೆಳೆಗಳನ್ನು ಎಸೆಯದೆ ನಮಗೆ ನೀಡಿದರೆ ಅವರಿಗೆ ನಿಗದಿತ ಬೆಲೆಗಿಂತ ಒಂದು ರೂಪಾಯಿ ಜಾಸ್ತಿ‌ ನೀಡಿ ಖರೀದಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಖರೀದಿ ಪ್ರಕ್ರಿಯೆಗಾಗಿ ಪನಮಾ ಸಂಸ್ಥೆ 75 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದರು. ಬೆಳೆಗಳನ್ನು ನೀಡುವವರು enquiries@panamacorporationltd.com ಇಮೇಲ್​ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ

For All Latest Updates

ABOUT THE AUTHOR

...view details