ಮಂಗಳೂರು: ಮುಲ್ಕಿ ನಗರಾಡಳಿತದ ಸ್ಥಾಯಿ ಸಮಿತಿಯ ಆಯ್ಕೆ ಸಂದರ್ಭದಲ್ಲಿ ತಮಗೆ ಅಧಿಕ ಸ್ಥಾನ ದೊರಕಬೇಕೆಂದು ಕಾಂಗ್ರೆಸ್ ಸದಸ್ಯರು ಗದ್ದಲವೆಬ್ಬಿಸಿದ ಪರಿಣಾಮ, ಆಯ್ಕೆ ಪ್ರಕ್ರಿಯೆಯೇ ಮುಂದೂಡಿದ ಘಟನೆ ಮುಲ್ಕಿ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಮುಲ್ಕಿ ನಗರಾಡಳಿತ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆ: ಕೈ ಸದಸ್ಯರ ಗೊಂದಲದಿಂದ ಮುಂದೂಡಿಕೆ - ಮುಲ್ಕಿ ನಗರಾಡಳಿತ ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯರ ಕಿತ್ತಾಟ ಸುದ್ದಿ
ಮಂಗಳೂರಿನ ಮುಲ್ಕಿ ನಗರಾಡಳಿತದ ಸ್ಥಾಯಿ ಸಮಿತಿಯ ಆಯ್ಕೆ ವೇಳೆ ಸ್ಥಾನ ಹಂಚಿಕೆ ವಿಚಾರದಲ್ಲಿ ಪಕ್ಷಗಳ ಸದಸ್ಯರ ನಡುವೆ ಗೊಂದಲ ಮೂಡಿದ ಕಾರಣ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
![ಮುಲ್ಕಿ ನಗರಾಡಳಿತ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆ: ಕೈ ಸದಸ್ಯರ ಗೊಂದಲದಿಂದ ಮುಂದೂಡಿಕೆ mulki panchayath town meeting postpones due to members fight](https://etvbharatimages.akamaized.net/etvbharat/prod-images/768-512-10277233-thumbnail-3x2-manglore.jpg)
ಮುಲ್ಕಿ ನಗರಾಡಳಿತ ಸ್ಥಾಯಿ ಸಮಿತಿಯ ಆಯ್ಕೆ ವೇಳೆ ಗೊಂದಲ
ಶಾಸಕ ಉಮಾನಾಥ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಮುಲ್ಕಿ ನ.ಪಂ.ಅಧ್ಯಕ್ಷ ಸುಭಾಷ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮುಲ್ಕಿ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದಿದ್ದು, ಈ ಸಂದರ್ಭ ನೂತನ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಾಂಗ್ರೆಸ್ನಿಂದ ಬಾಲಚಂದ್ರ ಕಾಮತ್, ಮಂಜುನಾಥ ಕಂಬಾರ ಮತ್ತು ವಿಮಲಾ ಪೂಜಾರಿ ಹೆಸರನ್ನು ಅನುಮೋದನೆ ಮಾಡಿದ್ರು. ಆದರೆ ನಗರಾಡಳಿತದಲ್ಲಿ 9 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ಗೆ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚಿಗೆ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಆದರೆ ಸಭೆ ಇದನ್ನು ಒಪ್ಪಲಿಲ್ಲ.
ಕಾಂಗ್ರೆಸ್ ಸದಸ್ಯರು ಯಾವುದೇ ಕಾರಣಕ್ಕೂ ಅಧಿಕ ಸ್ಥಾನ ನೀಡದೆ ಸಭೆ ಮುಂದುವರಿಯಲು ಬಿಡುವುದಿಲ್ಲ ಎಂದು ಗದ್ದಲವೆಬ್ಬಿಸಿದ ಕಾರಣ ಆಯ್ಕೆ ಪ್ರಕ್ರಿಯೆಯನ್ನು ಮುಂದಿನ ಸಾಮಾನ್ಯ ಸಭೆಗೆ ಮುಂದೂಡಲಾಯಿತು.
ಇದನ್ನೂ ಓದಿ: ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ; ಯಡಿಯೂರಪ್ಪ