ಕರ್ನಾಟಕ

karnataka

ಮಂಗಳೂರು: ಆಭರಣ ಮಳಿಗೆಯಲ್ಲಿ ನೈತಿಕ ಪೊಲೀಸ್ ಗಿರಿ; ಮೂರು ಪ್ರಕರಣ ದಾಖಲು

By

Published : Dec 7, 2022, 11:37 AM IST

Updated : Dec 7, 2022, 1:41 PM IST

ಯುವತಿಯ ಪೋಷಕರು ಮತ್ತು ಪೊಲೀಸರೊಂದಿಗೆ ಆಭರಣ ಮಳಿಗೆ ಒಳಗೆ ಹೋದ ಬಜರಂಗದಳ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಮಂಗಳೂರು: ಆಭರಣ ಮಳಿಗೆಯಲ್ಲಿ ನೈತಿಕ ಪೊಲೀಸ್ ಗಿರಿ; ಮೂರು ಪ್ರಕರಣ ದಾಖಲು
moral-police-in-jewelry-shop-mangalore-three-cases-were-registered

ಮಂಗಳೂರು: ನಗರದ ಕಂಕನಾಡಿಯ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಂದಿಗೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅನ್ಯಕೋಮಿನ ಯುವಕ ಬೈಕ್​​ನಲ್ಲಿ ಕರೆದುಕೊಂಡು ಹೋದ ವಿಚಾರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಬಜರಂಗದಳ ಕಾರ್ಯಕರ್ತರು ಯುವತಿಯ ಪೋಷಕರಿಗೆ ಈ ಮಾಹಿತಿ ತಿಳಿಸಿ ಕರೆಸಿಕೊಂಡಿದ್ದರು ಎನ್ನಲಾಗಿದೆ.

ಯುವತಿಯ ಪೋಷಕರು ಮತ್ತು ಪೊಲೀಸರೊಂದಿಗೆ ಆಭರಣ ಮಳಿಗೆ ಒಳಗೆ ಹೋದ ಭಜರಂಗದಳ ಕಾರ್ಯಕರ್ತರು, ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಯುವಕ ತನ್ನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ದೂರನ್ನು ನೀಡಿದ್ದರೆ, ಯುವಕ ತನ್ನ ಮೇಲೆ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ತಾಯಿ ಪ್ರತಿ ದೂರು ನೀಡಿದ್ದಾರೆ.

ಜ್ಯುವೆಲ್ಲರಿ ಸಂಸ್ಥೆ ಅತಿಕ್ರಮ ಪ್ರವೇಶದ ದೂರನ್ನು ನೀಡಿದ್ದಾರೆ. ಈ ಮೂರು ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.‌ ಪ್ರಕರಣ ಸಂಬಂಧ ಈವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಉದ್ಯೋಗದಿಂದ ವಜಾಗೊಳಿಸಿದ್ದಕ್ಕೆ ಪೋಸ್ಟ್ ಮಾಸ್ಟರ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ.. ಕೇಸ್ ರದ್ದು

Last Updated : Dec 7, 2022, 1:41 PM IST

ABOUT THE AUTHOR

...view details