ಕರ್ನಾಟಕ

karnataka

ETV Bharat / state

ಮೋದಿ ಪ್ರಮಾಣವಚನ: ಅಭಿಮಾನಿ ಬಳಗದಿಂದ ದಿನವಿಡೀ ಉಚಿತ ಬಸ್ ಸೇವೆ - undefined

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಂದ್ರ ಮೋದಿಯವರ ಅಭಿಮಾನಿ ಬಳಗವೊಂದು ಇಂದು ಇಡೀ ದಿನ ಉಚಿತ ಬಸ್​ ಸೇವೆ ನೀಡಿದ್ದಾರೆ.

ಉಚಿತ ಬಸ್ ಸೇವೆ ವ್ಯವಸ್ಥೆ ಮಾಡಿದ ಮೋದಿ‌ ಅಭಿಮಾನಿ ಬಳಗ

By

Published : May 30, 2019, 7:24 PM IST

Updated : May 30, 2019, 7:44 PM IST

ಮಂಗಳೂರು: ಕಿನ್ನಿಗೋಳಿಯಿಂದ ಮೂಡುಬಿದಿರೆ ಹಾಗೂ ಮಂಗಳೂರಿಗೆ ಸಂಚರಿಸುವ ಕೋಟ್ಯಾನ್ ಹೆಸರಿನ ಬಸ್​ನಲ್ಲಿ ಇಂದು ಸಂಚರಿಸುವ ಎಲ್ಲರೂ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಮೋದಿ ಅಭಿಮಾನ.

ಉಚಿತ ಬಸ್ ಸೇವೆ ವ್ಯವಸ್ಥೆ ಮಾಡಿದ ಮೋದಿ‌ ಅಭಿಮಾನಿ ಬಳಗ

ಹೌದು ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಈ ಹಿನ್ನೆಲೆ ಅವರ ಅಭಿಮಾನಿ ಬಳಗದಿಂದ ಇಂದು ಬೆಳಗ್ಗೆಯಿಂದಲೇ ಈ ಉಚಿತ ಸಂಚಾರ ಸೇವೆ ಆರಂಭವಾಗಿದೆ. ಈ ಬಸ್​ ಕಿನ್ನಿಗೋಳಿಯಿಂದ ಮೂಡುಬಿದಿರೆಗೆ ಹೋಗಿ ಅಲ್ಲಿಂದ ಕಿನ್ನಿಗೋಳಿಗೆ ಸಂಚರಿಸಿ ಬಳಿಕ ಮಂಗಳೂರಿಗೆ ಬರಲಿದೆ. ಹೀಗೆ ದಿನಕ್ಕೆ ಎರಡು ಟ್ರಿಪ್ ಇದೇ ರೀತಿ ಈ ಬಸ್ ಸಂಚರಿಸುತ್ತದೆ. ಬಸ್​ಗೆ ದಿನಕ್ಕೆ 3,500 ರೂ. ಡೀಸೆಲ್ ವೆಚ್ಚ ಬೀಳುತ್ತದೆ.

ಈ ಸಂದರ್ಭ ಮಾತನಾಡಿದ ಬಸ್​ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಇಂದು ಎಲ್ಲರೂ ದೇಶಾದ್ಯಂತ ವಿವಿಧ ರೀತಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಾವು ಗೆಳೆಯರೆಲ್ಲಾ ಸೇರಿ ಈ ಉಚಿತ ಬಸ್ ಸೇವೆಯನ್ನು ಮಾಡಿದ್ದೇವೆ. ಇದಕ್ಕೆ ಮೋದಿಯ ಮೇಲಿನ ಅಭಿಮಾನವೇ ಕಾರಣ. ಐದು ವರ್ಷಗಳ ಹಿಂದೆ ಮೋದಿಯವರು ಪ್ರಧಾನಿಯಾದಾಗಲೂ ಇದೇ ರೀತಿ ನಾವು ಉಚಿತ ಬಸ್ ವ್ಯವಸ್ಥೆ ಮಾಡಿದ್ದೆವು. ಮುಂದೆಯೂ ಅವರೇ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾವು ಈ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಬಸ್ ನಲ್ಲಿ ಪ್ರಯಾಣಿಸಿದ ಶಬೀರ್ ಅಹಮದ್ ತೋಕೂರು ಮಾತನಾಡಿ, ನಾನು ಯಾವಾಗಲೂ ಇದೇ ಬಸ್​ನಲ್ಲಿ ಪ್ರಯಾಣಿಸುವುದು. ಬಸ್ ಪೂರ್ತಿ ರಶ್ ಇತ್ತು. ಮೊದಲಿಗೆ ನನಗೆ ಇವತ್ತು ಬಸ್ ಉಚಿತ ಸೇವೆ ಎಂದು ತಿಳಿದಿರಲಿಲ್ಲ. ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಉಚಿತ ಬಸ್ ಸೇವೆ ಇರುವುದು ಸಂತೋಷ ತಂದಿದೆ. ಬಸ್​ನಲ್ಲಿದ್ದ ಎಲ್ಲರೂ ಇಂದು ಸಂತೋಷ ವಾಗಿ‌ ಪ್ರಯಾಣಿಸಿದರು‌ ಎಂದರು.

ಒಟ್ಟಿನಲ್ಲಿ ಈ ಬಸ್​ನ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ ಈ ವಿಶಿಷ್ಟವಾದ ಮೋದಿ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಇತರ ಚಾಲಕರು ಹಾಗೂ ನಿರ್ವಾಹಕರು ಸಹಕಾರ ನೀಡಿದ್ದಾರೆ. 2014 ರಂದು ಮೋದಿ ಅಧಿಕಾರ ವಹಿಸಿಕೊಂಡಾಗಲೂ ಶ್ರೀಕಾಂತ್ ಬಲವಿನಗುಡ್ಡೆ ಇದೇ ರೀತಿ ಉಚಿತ ಬಸ್ ಸೇವೆ ಮಾಡಿದ್ದರಂತೆ.

Last Updated : May 30, 2019, 7:44 PM IST

For All Latest Updates

TAGGED:

ABOUT THE AUTHOR

...view details