ಕರ್ನಾಟಕ

karnataka

ಉಳ್ಳಾಲದಲ್ಲಿ ಕೊರೊನಾ ಸಂಕಟ: ಶಾಸಕ ಖಾದರ್ ವೆನ್​ಲಾಕ್ ಆಸ್ಪತ್ರೆಗೆ ಭೇಟಿ, ಪರಿಶೀಲನೆ

By

Published : Jun 28, 2020, 6:08 PM IST

ಉಳ್ಳಾಲದಲ್ಲಿ ಕೊರೊನಾ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆ ಶಾಸಕ ಯು.ಟಿ.ಖಾದರ್ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು‌.

sdd
ಶಾಸಕ ಖಾದರ್ ವೆನ್ಲಾಕ್ ಆಸ್ಪತ್ರೆಗೆ ಭೇಟಿ,ಪರಿಶೀಲನೆ

ಮಂಗಳೂರು: ಉಳ್ಳಾಲದಲ್ಲಿ ಕೊರೊನಾ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆ ಶಾಸಕ ಯು.ಟಿ. ಖಾದರ್ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು‌.

ಶಾಸಕ ಖಾದರ್ ವೆನ್ಲಾಕ್ ಆಸ್ಪತ್ರೆಗೆ ಭೇಟಿ, ಪರಿಶೀಲನೆ

ಈ ಸಂದರ್ಭ ವೆನ್​ಲಾಕ್ ಕೋವಿಡ್ ಆಸ್ಪತ್ರೆಯ ಅಧೀಕ್ಷಕ ಡಾ. ಸದಾಶಿವ ಚರ್ಚೆ ನಡೆಸಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆಹಾರ, ಚಿಕಿತ್ಸಾ ಕ್ರಮ, ಮುನ್ನೆಚ್ಚರಿಕೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೋವಿಡ್ ಸೋಂಕಿತ ಮಕ್ಕಳ ಬಗ್ಗೆ ಆಸ್ಪತ್ರೆಯಲ್ಲಿ ವಿಶೇಷ ನಿಗಾವಹಿಸುವಂತೆ ಸೂಚಿಸಿದ್ದಾರೆ.

ಇತ್ತೀಚೆಗೆ ಹುಟ್ಟಿದ ಮಗುವಿನ ಗಂಟಲು ದ್ರವ ತಪಾಸಣೆಯನ್ನು ಶೀಘ್ರ ನಡೆಸುವಂತೆ ಪೋಷಕರ ಒತ್ತಾಯದ ಮೇರೆಗೆ ವಿನಂತಿ ಮಾಡಿದರು. ಆದರೆ ಏಳು ದಿನದ ಬಳಿಕವೇ ಮಗುವಿನ ತಪಾಸಣೆ ಮಾಡಲಾಗುತ್ತದೆ ಎಂದು ವೈದ್ಯಾಧಿಕಾರಿ ಅವರು ಶಾಸಕರಿಗೆ ತಿಳಿಸಿದ್ದಾರೆ.

ABOUT THE AUTHOR

...view details