ಕರ್ನಾಟಕ

karnataka

ETV Bharat / state

ಕಡಲ್ಕೊರೆತದ ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ: ಸಚಿವ ಯು.ಟಿ.ಖಾದರ್ - Minister ,U.T. Khadar, pressmeet , Manglore,

ಉಳ್ಳಾಲ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದಿಂದ ಸಂತ್ರಸ್ತರಾದವರಿಗೆ ಶಾಶ್ವತ ಪರಿಹಾರದ ನೆಲೆಯಲ್ಲಿ ಎರಡು ಬೆಡ್ ರೂಂಗಳ ಮನೆ ಅಥವಾ ಮೂರು ಸೆಂಟ್ಸ್ ಗಳಷ್ಟು ಜಮೀನು ನೀಡಿ, ಕೊಡಗು ಮಾದರಿಯಲ್ಲಿ ಪರಿಹಾರದ ವ್ಯವಸ್ಥೆ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ಸಚಿವ ಯು.ಟಿ.ಖಾದರ್

By

Published : Jun 16, 2019, 3:26 AM IST

ಮಂಗಳೂರು: ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಚಿವ ಯು.ಟಿ ಖಾದರ್​, ಕಡಲ್ಕೊರೆತಕ್ಕೊಳಗಾದವರಿಗೆ ಗ್ರಾಮೀಣ ಮಟ್ಟದಲ್ಲಿ ಜಾಗ ನೀಡಬೇಕೆಂಬ ಬೇಡಿಕೆ ಇರುವ ಕಾರಣ ಜಾಗದ ಗುರುತಿಸುವಿಕೆಯ ಕೆಲಸ ನಡೆಯುತ್ತಿದೆ ಎಂದರು.

ಈ ಯೋಜನೆ ಮಂಜೂರು ಆಗುವವರೆಗೆ ಕಡಲ್ಕೊರೆತಕ್ಕೆ ಒಳಗಾದವರಿಗೆ ಮನೆ ಬಾಡಿಗೆ ಕೊಡುವ ಯೋಜನೆಯೂ ಇದೆ. ಸದ್ಯ ಕಡಲ್ಕೊರೆತದಿಂದ 150 ಮನೆಗಳು ಅಪಾಯದಲ್ಲಿವೆ ಎಂದು ಸಚಿವ ಖಾದರ್ ಹೇಳಿದರು.

ಬೇರೆಡೆ ಸುಸಜ್ಜಿತ ಮನೆಗಳಿದ್ದರೂ, ಉಳ್ಳಾಲ ಸಮುದ್ರ ತೀರದಲ್ಲಿ ಪರಿಹಾರ ಹಣದ ಆಸೆಗಾಗಿ ನೆಲೆಸಿದವರೂ ಇದ್ದಾರೆ ಎಂಬ ಆರೋಪಗಳಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಉತ್ತಮ ವ್ಯವಸ್ಥೆ ಇರುವವರು ಯಾರೂ ಇಂತಹ ಪರಿಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಈ ಆರೋಪವನ್ನು ನಾನು ನಂಬುವುದಿಲ್ಲ. ಹಾಗೇನಾದರೂ ಇದ್ದರೆ ಅರ್ಹರನ್ನು ಗುರುತಿಸಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸಚಿವ ಯು.ಟಿ.ಖಾದರ್

ಜೂ.18 ರಂದು ಕಂದಾಯ ಸಚಿವರ ಸಭೆ:

ದ.ಕ.ಜಿಲ್ಲೆಯ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಂಬಂಧಪಟ್ಟಂತೆ ಜೂನ್ 18ರಂದು ಕಂದಾಯ ಸಚಿವರು ಸಭೆ ನಡೆಸಲಿದ್ದಾರೆ. ಅಂದು ಬೆಳಗ್ಗೆ ಉಡುಪಿಯಲ್ಲಿ ಹಾಗೂ ಮಧ್ಯಾಹ್ನದ ಬಳಿಕ ಮಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಅಲ್ಲದೆ ಪ್ರಾಪರ್ಟಿ ಕಾರ್ಡ್​ಗೆ ಸಂಬಂಧಿಸಿದಂತೆ ಯೂ ಅವರು ಪರಿಶೀಲನಾ ಸಭೆ ನಡೆಸಲಿದ್ದಾರೆ. ಜತೆಗೆ ಕಡಲ್ಕೊರೆತದಿಂದ ಮನೆಹಾನಿಯಾದವರಿಗೆ, ಮನೆ ಕಳೆದುಕೊಂಡವರಿಗೆ ಅತೀ ಶೀಘ್ರದಲ್ಲಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗುವುದು. ಕಡಲ್ಕೊರೆತ ಪ್ರದೇಶದಲ್ಲಿ ತಾತ್ಕಾಲಿಕ ಸಂರಕ್ಷಣಾ ಕಾಮಗಾರಿಯು ಈಗಾಗಲೇ ಪ್ರಾರಂಭವಾಗಿದ್ದು, ಮಳೆ ಮುಗಿದ ತಕ್ಷಣ ಶಾಶ್ವತ ತಡೆಗೋಡೆ ನಿರ್ಮಿಸುವ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

For All Latest Updates

TAGGED:

ABOUT THE AUTHOR

...view details