ಕರ್ನಾಟಕ

karnataka

ETV Bharat / state

SSLCಯಲ್ಲಿ ಸಾಧನೆಗೈದ ವಿದ್ಯಾರ್ಥಿ ಅನುಷ್​: ದೂರವಾಣಿ ಕರೆ ಮಾಡಿ ಅಭಿನಂದಿಸಿದ ಸಚಿವರು - student who score highest marks

ಎಸ್ಎಸ್ಎಲ್​ಸಿಯಲ್ಲಿ 625ಕ್ಕೆ 625 ಅಂಕ‌ ಗಳಿಸಿರುವ ವಿದ್ಯಾರ್ಥಿ ಅನುಷ್ ಎ.ಎಲ್. ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿ ಅನುಷ್ ಎ.ಎಲ್
ವಿದ್ಯಾರ್ಥಿ ಅನುಷ್ ಎ.ಎಲ್

By

Published : Aug 10, 2020, 8:56 PM IST

ಮಂಗಳೂರು: ಎಸ್ಎಸ್ಎಲ್​ಸಿಯಲ್ಲಿ 625ಕ್ಕೆ 625 ಅಂಕ‌ ಗಳಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನುಷ್ ಎ.ಎಲ್.ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.

ವಿದ್ಯಾರ್ಥಿ ಅನುಷ್ ಎ.ಎಲ್

ಕೋಟ ಶ್ರೀನಿವಾಸ ಪೂಜಾರಿಯವರ ಕರೆ ಬಂದಿರುವುದರಿಂದ ವಿದ್ಯಾರ್ಥಿ ಅನುಷ್ ಎ.ಎಲ್. ಹರ್ಷಚಿತ್ತರಾಗಿದ್ದಾರೆ‌. ವಿದ್ಯಾರ್ಥಿ ಗಳಿಸಿರುವ ಅಂಕದ ಬಗ್ಗೆ ವಿಚಾರಿಸಿದ ಸಚಿವರು, ಅನುಷ್ ತಂದೆಯ ಉದ್ಯೋಗ, ಶಾಲೆಯ ಬಗ್ಗೆ ವಿಚಾರಿಸಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬಳಿಕ ಅನುಷ್​ ಎಸ್ಎಸ್ಎಲ್​ಸಿಯಲ್ಲಿ ಟಾಪರ್ ಆಗಿರೋದಕ್ಕೆ ಜಿಲ್ಲೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.

ABOUT THE AUTHOR

...view details