ಮಂಗಳೂರು (ದಕ್ಷಿಣಕನ್ನಡ): ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕುಲಶೇಖರ್ ನಿವಾಸಿ ಪ್ರಾಣೇಶ್ ಬರೆದಿರುವ ತುಳು ಕವನ ವಿಶ್ವದಾಖಲೆ ಬರೆದಿದೆ. ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪ್ರಾಣೇಶ್ 'ತುಳುನಾಡ ಐಸಿರಿ' ಎಂಬ ಹೆಸರಿನ ಈ ಕವನ 21 ಅಡಿ ಉದ್ದವಿದೆ. ತುಳುಭಾಷೆ ಸಂಸ್ಕೃತಿಯನ್ನು ಬಿಂಬಿಸುವ ಈ ಕವನದಲ್ಲಿ 108 ಚರಣಗಳಿದೆ. 2241 ತುಳು ಶಬ್ದಗಳನ್ನು ಬಳಸಿ ರಚಿಸಲಾಗಿದೆ.
ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ... ಮಂಗಳೂರು ವಿದ್ಯಾರ್ಥಿಯಿಂದ ತುಳುವಿನಲ್ಲಿ 21 ಅಡಿ ಉದ್ದದ ಹಾಡು! - 21 ಅಡಿ ಉದ್ದದ ಹಾಡು
ಇಂಜಿನಿಯರಿಂಗ್ ವಿದ್ಯಾರ್ಥಿಯೊರ್ವ ಬರೆದ ತುಳು ಕವನವೊಂದು ವರ್ಲ್ಡ್ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ದಾಖಲೆಗೆ ಪಾತ್ರವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ಕವನ ಬರೆಯಲು 30 ಕ್ಕೂ ಅಧಿಕ ಎ4 ಹಾಳೆಯನ್ನು ಉಪಯೋಗಿಸಲಾಗಿದ್ದು, 432 ಸಾಲುಗಳನ್ನು ಹೊಂದಿದೆ. ಕವನದಲ್ಲಿ ತುಳುನಾಡಿನ ಸಂಸ್ಕೃತಿಯಾದ ದೈವರಾಧನೆ, ನಾಗಾರಾಧನೆ, ಪುಣ್ಯಕ್ಷೇತ್ರ, ತುಳುನಾಡ ಹಬ್ಬಗಳ ಆಚರಣೆ, ಜನಪ್ರಿಯ ಕ್ರೀಡೆ, ತುಳು ಭಾಷೆಯನ್ನು 8 ನೇ ಪರಿಚ್ಛೇದ ಕ್ಕೆ ಸೇರಿಸುವ ಮನವಿ ಸಾಹಿತ್ಯ ರೂಪದಲ್ಲಿ ಇದೆ. ಈಗಾಗಲೇ ಹಲವು ತುಳು ಹಾಡುಗಳನ್ನು ಬರೆದು ಗೌರವಕ್ಕೆ ಪಾತ್ರರಾಗಿದ್ದ ಪ್ರಾಣೇಶ್ ಗೆ ಇದೀಗ ವರ್ಲ್ಡ್ ಬುಕ್ ಅಫ್ ರೆಕಾರ್ಡ್ ನ ಗರಿಮೆ ಸಿಕ್ಕಿರುವುದು ಅವರ ಕುಟುಂಬದವರ ಸಂತಸಕ್ಕೆ ಕಾರಣವಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಕಳುಹಿಸಲಾದ ಈ ಕವನ ವರ್ಲ್ಡ್ ಬುಕ್ ಅಫ್ ರೆಕಾರ್ಡ್ಸ್ ಗೆ ಆಯ್ಕೆಯಾದ ಬಗ್ಗೆ ಹಾಗೂ ಇಮೇಲ್ ಮೂಲಕ ಸರ್ಟಿಫಿಕೇಟ್ ಬಂದಿದೆ. ತುಳುವಿನಲ್ಲಿ ಅತಿ ಉದ್ದದ ಕವನ ಬರೆದಿರುವ ಪ್ರಾಣೇಶ್ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.