ಕರ್ನಾಟಕ

karnataka

By

Published : Aug 21, 2020, 6:18 PM IST

ETV Bharat / state

ತಡೆಗೋಡೆ ಕುಸಿತ, ಸ್ಥಳ ಪರಿಶೀಲಿಸಿದ ಮಂಗಳೂರು ಮೇಯರ್

ವಿಪರೀತ ಮಳೆಯಿಂದ ತುಂಬೆ ಅಣೆಕಟ್ಟು ಆಸುಪಾಸಿನ ತಡೆಗೋಡೆ ಕುಸಿದಿದ್ದು, ಸ್ಥಳಕ್ಕೆ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tumbe dam
Tumbe dam

ಬಂಟ್ವಾಳ:ಮಂಗಳೂರಿಗೆ ನೀರೊದಗಿಸಲು ನಿರ್ಮಿಸಲಾದ ತುಂಬೆ ವೆಂಟೆಡ್ ಡ್ಯಾಂನ ಪಕ್ಕದಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ತಡೆಗೋಡೆಯೊಂದು ಕುಸಿದ ಹಿನ್ನೆಲೆಯಲ್ಲಿ ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಪರೀತ ಮಳೆಯಿಂದ ತುಂಬೆ ಅಣೆಕಟ್ಟು ಆಸುಪಾಸಿನ ತಡೆಗೋಡೆ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಆಯುಕ್ತರು ಮತ್ತು ಮನಪಾ ಅಧಿಕಾರಿಗಳ ತಂಡದೊಂದಿಗೆ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ತಡೆಗೋಡೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು. ಮತ್ತೆ ಮಳೆಯಾಗುವ ವೇಳೆ ತಡೆಗೋಡೆಗೆ ಹಾನಿಯಾಗದಂತೆ ಮುಂಜಾಗರೂಕತೆ ವಹಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದ್ದು, ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಇದೇ ವೇಳೆ ತುಂಬೆ ಅಣೆಕಟ್ಟು ಕಚೇರಿಗೆ ಭೇಟಿ ನೀಡಿ, ಅಲ್ಲಿನ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಲಾಯಿತು.

ABOUT THE AUTHOR

...view details