ಮಂಗಳೂರು: ರಾಜ್ಯವನ್ನೇ ತಲ್ಲಣಿಸಿದ್ದ ಉಜಿರೆ ರಥಬೀದಿಯ ಬಾಲಕನ ಅಪಹರಣ ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚಿದ ದ.ಕ.ಜಿಲ್ಲೆಯ ಪೊಲೀಸರಿಗೆ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ಘೋಷಣೆ ಮಾಡಿದ್ದಾರೆ.
ಡಿ.17ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯ ರಥಬೀದಿಯಲ್ಲಿನ ಮನೆಯಿಂದಲೇ 8 ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿತ್ತು. ಬಳಿಕ ಮನೆಯವರಿಗೆ 17 ಕೋಟಿ ರೂ. ನಗದು ನೀಡುವಂತೆ ಬೇಡಿಕೆ ಇಡಲಾಗಿತ್ತು. ಪೊಲೀಸರು ಈ ಪ್ರಕರಣವನ್ನು ಬೇಧಿಸಿ ಡಿ.19ರಂದು ಬಾಲಕನ ಅಪಹರಣಕಾರರನ್ನು ಕೋಲಾರದ ಮನೆಯೊಂದರಲ್ಲಿ ಬಂಧಿಸಿ ಬಾಲಕನನ್ನು ಮನೆಯವರಿಗೆ ಸುರಕ್ಷಿತವಾಗಿ ಒಪ್ಪಿಸಲಾಗಿತ್ತು.