ಕರ್ನಾಟಕ

karnataka

ETV Bharat / state

ಮಂಗಳೂರು ಬಾಂಬ್​ ಪ್ರಕರಣ: ಆರೋಪಿ ಆದಿತ್ಯ ರಾವ್​​ 10 ದಿನ ಪೊಲೀಸ್​ ವಶಕ್ಕೆ - 10ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಕೋರ್ಟ್​​ ಆದೇಶ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್​ನನ್ನು 10 ದಿನಗಳ ಕಾಲ ಮಂಗಳೂರು ಪೊಲೀಸರ ವಶದಲ್ಲಿ ಇಡಬೇಕೆಂದು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.​​ ಕಿಶೋರ್​​ಕುಮಾರ್​​ ಆದೇಶ ಹೊರಡಿಸಿದ್ದಾರೆ.

ಕೋರ್ಟ್​​ ಆದೇಶ
ಕೋರ್ಟ್​​ ಆದೇಶ

By

Published : Jan 23, 2020, 4:20 PM IST

Updated : Jan 23, 2020, 8:08 PM IST

ಮಂಗಳೂರು:ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್​ನನ್ನು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ಬಳಿಕ 10 ದಿನಗಳ ಕಾಲ ಮಂಗಳೂರು ಪೊಲೀಸರ ವಶಕ್ಕೆ ನೀಡಿ ನ್ಯಾ. ಕೆ ಎನ್​​ ಕಿಶೋರ್​​ಕುಮಾರ್​​ ಆದೇಶ ಹೊರಡಿಸಿದ್ದಾರೆ.

ನಿನ್ನೆ ರಾತ್ರಿಯಿಂದ ಪಣಂಬೂರಿನಲ್ಲಿರುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿದ್ದ ಆರೋಪಿ ಆದಿತ್ಯ ರಾವ್​​ನನ್ನು ಪೊಲೀಸರು ಬಿಗಿ ಬಂದೋಬಸ್ತ್​ಲ್ಲಿ ವಿಶೇಷ ಭದ್ರತಾ ವಾಹನದ ಮೂಲಕ ನ್ಯಾಯಾಲಯಕ್ಕೆ ಕರೆತಂದಿದ್ದರು.

ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ವೈದ್ಯಕೀಯ ಪರೀಕ್ಷೆ ನಡೆಸಿ, ಆರೋಪಿ ಸದೃಢನಾಗಿರುವುದು ಸಾಬೀತಾದ ಬಳಿಕ‌ ಆತನನ್ನು ತನಿಖಾಧಿಕಾರಿ ಬೆಳ್ಳಿಯಪ್ಪ ನೇತೃತ್ವದ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಅಲ್ಲದೆ ಆರೋಪಿ‌ಯು ಸ್ಫೋಟಕ ತಯಾರಿಸಲು ಚೆನ್ನೈನಿಂದ ರಾಸಾಯನಿಕವನ್ನು ತರಿಸಿಕೊಂಡ ಹಿನ್ನೆಲೆಯಲ್ಲಿ ಮುಂದಿನ ಹತ್ತು ದಿನಗಳ ಒಳಗಡೆ ಆರೋಪಿಯನ್ನು ತನಿಖಾ ತಂಡ ಚೆನ್ನೈಗೆ ಕರೆದುಕೊಂಡು ಹೋಗಲಿದೆ.

Last Updated : Jan 23, 2020, 8:08 PM IST

ABOUT THE AUTHOR

...view details