ಬಂಟ್ವಾಳ: ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಅಣ್ಣನೇ ತಮ್ಮನನ್ನು ಹತ್ಯೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ಬೊಂಡಾಲ ಶಾಂತಿಗುಡ್ಡೆ ಎಂಬಲ್ಲಿ ನಡೆದಿದೆ.
ಅಕ್ರಮ ಸಂಬಂಧ ಶಂಕೆ: ಅಡಕೆ ಸಲಾಕೆಯಿಂದ ಹೊಡೆದು ತಮ್ಮನನ್ನೇ ಕೊಂದ ಅಣ್ಣ - Man kills younger brother suspecting illicit affair with wife
ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ತಮ್ಮನನ್ನೇ ಅಣ್ಣ ಅಡಕೆ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
![ಅಕ್ರಮ ಸಂಬಂಧ ಶಂಕೆ: ಅಡಕೆ ಸಲಾಕೆಯಿಂದ ಹೊಡೆದು ತಮ್ಮನನ್ನೇ ಕೊಂದ ಅಣ್ಣ ಕೊಲೆ](https://etvbharatimages.akamaized.net/etvbharat/prod-images/768-512-12700074-thumbnail-3x2-lek.jpg)
ಶುಕ್ರವಾರ ಮಧ್ಯರಾತ್ರಿ ಸುಂದರ (30) ಎಂಬಾತನನ್ನು ಆತನ ಅಣ್ಣ ರವಿ ಅಡಕೆ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಅಣ್ಣ- ತಮ್ಮನ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಶುಕ್ರವಾರ ಮನೆಯಲ್ಲಿ ತಾಯಿಯ ವರ್ಷಾಂತಿಕ ಪೂಜೆ ನಡೆಸಲಾಯಿತು. ರಾತ್ರಿ ಊಟ ಮಾಡಿದ ನಂತರ ಎಂದಿನಂತೆ ರವಿ ಮತ್ತು ಸುಂದರ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಸುಂದರನ ತಲೆಗೆ ಅಣ್ಣ ಅಡಕೆ ಸಲಾಕೆಯಿಂದ ಏಟು ಕೊಟ್ಟಿದ್ದು, ಪರಿಣಾಮ ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಸಲಾಕೆಯನ್ನು ಪಕ್ಕದಲ್ಲೇ ಬಿಸಾಡಿ ರವಿ ಪರಾರಿಯಾಗಿದ್ದಾನೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರವಿ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.