ಕರ್ನಾಟಕ

karnataka

ಅಕ್ರಮ ದನ ಸಾಗಣೆ ಆರೋಪ: ಓರ್ವನ ಬಂಧನ

ಮೂರು ದನಗಳನ್ನು ಪಿಕಪ್ ವಾಹನದಲ್ಲಿ ತುಂಬಿಕೊಂಡು ಮಂಗಳೂರಿನ ಕಸಾಯಿಖಾನೆಗೆ ತರುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ವಾಹನ ತಡೆದು ಆರೋಪಿಯನ್ನು ಪೊಲೀಸರಿಗೆ ಒಪ್ಪಿದ್ದಾರೆ.

By

Published : Jul 25, 2020, 1:04 PM IST

Published : Jul 25, 2020, 1:04 PM IST

Cattle
Cattle

ಮಂಗಳೂರು: ಉಚ್ಚಿಲದಿಂದ ಅಕ್ರಮವಾಗಿ ದನಗಳನ್ನು ಪಿಕಪ್ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ವಾಹನ ತಡೆದು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರು ದನಗಳನ್ನು ಪಿಕಪ್ ವಾಹನದಲ್ಲಿ ತುಂಬಿಕೊಂಡು ಮಂಗಳೂರಿನ ಕಸಾಯಿಖಾನೆಗೆ ತರುತ್ತಿದ್ದರು. ಈ ವೇಳೆ, ಉಚ್ಚಿಲದ ಬಳಿ ಬೈಕ್ ಸವಾರರೊಬ್ಬರು ವಾಹನ ತಡೆಯಲು ಯತ್ನಿಸಿದಾಗ ಬೈಕ್​​​​​​ಗೆ ಡಿಕ್ಕಿಹೊಡೆದು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಸ್ಥಳೀಯರು ಮುಕ್ಕ ಚೆಕ್ ಪೋಸ್ಟ್ ಗೆ ಮಾಹಿತಿ ನೀಡಿದ್ದರು.

ಮುಕ್ಕ ಚೆಕ್ ಪೋಸ್ಟ್ ಬಳಿ ಬಜರಂಗದಳದ ಕಾರ್ಯಕರ್ತರು ಪಿಕಪ್ ಅನ್ನು ಅಡ್ಡಗಟ್ಟಿ ನಿಲ್ಲಿಸಿದ್ದು, ಇಬ್ಬರು ಆರೋಪಿಗಳಲ್ಲಿ ಓರ್ವ ಪರಾರಿಯಾಗಿದ್ದು, ಮತ್ತೊಬ್ಬ ಆರೋಪಿ ಮಹಮ್ಮದ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ABOUT THE AUTHOR

...view details