ಮಂಗಳೂರು:ನಗರದಲ್ಲಿ ಅನಧಿಕೃತ ಕ್ಯಾಬ್ಗಳ ಸೇವೆ ಅಧಿಕವಾಗಿದ್ದು, ಸರ್ಕಾರ ಖಜಾನೆಗೆ ತುಂಬಲಾರದ ನಷ್ಟ ಉಂಟಾಗುತ್ತಿದೆ. ಇಲ್ಲಿ ಸರ್ಕಾರಕ್ಕೆ ರಾಜಧನ ಪಾವತಿಸಿ ಟೂರಿಸ್ಟ್ ಕಾರು ಚಾಲಕರು ಈ ಸೇವೆ ನೀಡುತ್ತಿದ್ದಾರೆ. ಆದರೆ, ಅವರ ಹೊಟ್ಟೆಗೆ ಅನಧಿಕೃತ ಕ್ಯಾಬ್ ಚಾಲಕರು ಕಲ್ಲು ಹಾಕುತ್ತಿದ್ದಾರೆ.
ಟೂರಿಸ್ಟ್ ವಾಹನಗಳಿಗೆ ಸೆಡ್ಡು ಹೊಡೆಯುತ್ತಿರುವ ಅನಧಿಕೃತ ಕ್ಯಾಬ್ ಸೇವೆ - ಮಂಗಳೂರಿನಲ್ಲಿ ಅನಧಿಕೃತ ಕ್ಯಾಬ್ ಸೇವೆ ಏರಿಕೆ
ವೈಟ್ ಬೋರ್ಡ್ ವಾಹನ ಚಾಲಕರು ಜೀವಿತಾವಧಿಗೆ ಮತ್ತು ಅಧಿಕೃತ ಕ್ಯಾಬ್ ಸೇವೆ ನೀಡುವ ಚಾಲಕರು ವರ್ಷಂ ಪ್ರತಿ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ಹೀಗಾಗಿ, ಅನಧಿಕೃತ ಕ್ಯಾಬ್ ಸೇವೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ನಷ್ಟ ಉಂಟಾಗುತ್ತಿದೆ.
![ಟೂರಿಸ್ಟ್ ವಾಹನಗಳಿಗೆ ಸೆಡ್ಡು ಹೊಡೆಯುತ್ತಿರುವ ಅನಧಿಕೃತ ಕ್ಯಾಬ್ ಸೇವೆ Loss of government by unauthorized cab service](https://etvbharatimages.akamaized.net/etvbharat/prod-images/768-512-9560945-260-9560945-1605527788437.jpg)
ಅನಧಿಕೃತ ಕ್ಯಾಬ್ ಸೇವೆಯಿಂದ ಸರ್ಕಾರಕ್ಕೆ ನಷ್ಟ
ಅನಧಿಕೃತ ಕ್ಯಾಬ್ಗಳ ಸೇವೆಯಿಂದ ಅಧಿಕೃತ ಕ್ಯಾಬ್ ಸೇವೆ ನೀಡುವ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಕೆಲ ಸಂಸ್ಥೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಅನಧಿಕೃತ ಕ್ಯಾಬ್ ಸೇವೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಸರ್ಕಾರಕ್ಕೆ ಆಗುವ ನಷ್ಟ ತಪ್ಪಿಸಬಹುದು.