ಕರ್ನಾಟಕ

karnataka

By

Published : Apr 8, 2020, 6:23 PM IST

ETV Bharat / state

ಬಡ ಕುಟುಂಬಗಳಿಗೆ 2 ಲಕ್ಷ  ರೂ. ಮೌಲ್ಯದ ಆಹಾರ ಸಾಮಗ್ರಿ ವಿತರಣೆ

ರಾಜ್ಯದಲ್ಲಿನ್ನೂ ಲಾಕ್​​ಡೌನ್ ನಿಯಮ ಜಾರಿ ಇರುವುದರಿಂದ ಬಡ ಕುಟುಂಬದವರು ದಿನನಿತ್ಯದ ಅಗತ್ಯ ವಸ್ತುಗಳೂ ಸೇರಿದಂತೆ ಆಹಾರ ಸಾಮಗ್ರಿ ಸಿಗದೇ ಪರದಾಡುತ್ತಿದ್ದಾರೆ. ಈ ಹಿನ್ನೆಲೆ ಇಂದು ಪುತ್ತೂರು ಭಾಗದಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿಗಳನ್ನು ಅಗತ್ಯವಿರುವ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿ, ಬಡವರಿಗೆ ಸಾಮಗ್ರಿ ವಿತರಿಸಿದರು.

Lockdown Effect: Distribution of food items worth Rs 2 lakh to poor families
ಲಾಕ್​​​ಡೌನ್​​ ಎಫೆಕ್ಟ್​: ಬಡ ಕುಟುಂಬಗಳಿಗೆ 2 ಲಕ್ಷ ರೂಪಾಯಿಯ ಆಹಾರ ಸಾಮಾಗ್ರಿ ವಿತರಣೆ

ದಕ್ಷಿಣ ಕನ್ನಡ (ಪುತ್ತೂರು): ದೇಶದಲ್ಲಿ ಉಂಟಾದ ಕೊರೊನಾ ಭೀತಿಯಿಂದ ಜನತೆ ಮನೆಯಲ್ಲಿಯೇ ಇರಬೇಕಾಗಿದೆ. ಈ ಸಂದರ್ಭದಲ್ಲಿ ಬಡಕುಟುಂಬಗಳಿಗೆ ಸಮಸ್ಯೆಗಳು ಉಂಟಾಗದಂತೆ ಕನಿಷ್ಠ ಮೂರು ಹೊತ್ತಿನ ಊಟಕ್ಕೆ ತೊಂದರೆ ಉಂಟಾಗದಂತೆ ಈ ಆಹಾರ ಸಾಮಗ್ರಿಗಳನ್ನು ನೀಡಲಾಗುತ್ತಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಉಂಟಾಗಿರುವ ಸಂಕಷ್ಟಕ್ಕೆ ದಾನಿಗಳ ಮೂಲಕ ಸಂಗ್ರಹಿಸಿದ ಸುಮಾರು 2 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್​​ ಅನ್ನು ಬುಧವಾರ ಎಪಿಎಂಸಿ ಪ್ರಾಂಗಣದಲ್ಲಿ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು.

ಪುತ್ತೂರಿನ ಅಡಕೆ ವರ್ತಕರಿಂದ 1.5 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿಗಳು, ದಾನಿಗಳಿಂದ ಸುಮಾರು 13 ಕ್ವಿಂಟಲ್ ಅಕ್ಕಿ ಸೇರಿ ಒಟ್ಟು ಸುಮಾರು 2 ಲಕ್ಷದ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.

ಬಂಟರ ಸಂಘದ ಮೂಲಕ 1 ಸಾವಿರ ಕುಟುಂಬಗಳಿಗೆ ಪಡಿತರ ವ್ಯವಸ್ಥೆ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.

ABOUT THE AUTHOR

...view details