ಕರ್ನಾಟಕ

karnataka

ETV Bharat / state

ಸಕಾಲ ಮಿಷನ್​ನಿಂದ ಕಡಬ ಉಪತಹಶಿಲ್ದಾರ್​ ನವ್ಯಗೆ ಪ್ರಶಂಸಾ ಪತ್ರ - ದಕ್ಷಿಣ ಕನ್ನಡ ಜಿಲ್ಲೆ ಉಪ ತಹಶೀಲ್ದಾರ್​ಗೆ ಪ್ರಶಂಸಾ ಪತ್ರ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉಪ ತಹಶಿಲ್ದಾರ್​ ನವ್ಯ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ. ಸಕಾಲ ಸೇವೆಗಳ ಅಧಿ ನಿಯಮದ ಅಡಿ ನಾಗರಿಕರಿಗೆ ಉತ್ತಮ ಸೇವೆ ಒದಗಿಸಿದ್ದಕ್ಕೆ ಜಿಲ್ಲಾಧಿಕಾರಿ ಪ್ರಶಂಸಾ ಪತ್ರ ವಿತರಿಸಿದ್ದಾರೆ.

Letter of thanks to Deputy Tahsildar in dakshina kannada

By

Published : Oct 25, 2019, 3:40 PM IST

Updated : Oct 25, 2019, 11:08 PM IST

ಕಡಬ: ಸಕಾಲ ಸೇವೆಗಳ ಅಧಿ ನಿಯಮದಡಿ ನಿಗದಿತ ಕಾಲಮಿತಿಯಲ್ಲಿ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಕರ್ತವ್ಯಪ್ರಜ್ಞೆ ಮೆರೆದ ಕಡಬದ ಉಪ ತಹಶಿಲ್ದಾರ್​ ನವ್ಯ ಅವರು ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಡಬ ತಹಶಿಲ್ದಾರ್ ಪ್ರಾಮಾಣಿಕ ಕೆಲಸಕ್ಕೆ ಸಿಕ್ತು ಗೌರವ​

ಸೆಪ್ಟಂಬರ್​ ತಿಂಗಳಲ್ಲಿ ನಿಗದಿತ ಸಮಯದೊಳಗೆ ನಾಗರಿಕರಿಗೆ ಸುಮಾರು 383 ಸೇವೆಗಳನ್ನು ಕಾಲಮಿತಿಯಲ್ಲಿ ಸಕಾಲ ಸೇವೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಸಕಾಲ ಮಿಷನ್​ನಿಂದ ಪ್ರಶಂಸಾ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೀಡಿದ್ದಾರೆ. ವಿವಿಧ ಇಲಾಖೆಯಲ್ಲಿ ನಿರಂತರವಾಗಿ ದುಡಿಯುವ ಸರ್ಕಾರಿ ಅಧಿಕಾರಿಗಳ ಸೇವೆಯನ್ನು ಅವಲೋಕಿಸಿ ಪ್ರಶಂಸೆ ವ್ಯಕ್ತಪಡಿಸಿದರೆ ಇನ್ನಷ್ಟು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Last Updated : Oct 25, 2019, 11:08 PM IST

For All Latest Updates

TAGGED:

ABOUT THE AUTHOR

...view details