ಕರ್ನಾಟಕ

karnataka

ETV Bharat / state

ಮಳೆಗಾಲದಲ್ಲಿ ಯಕ್ಷಗಾನ ಕಲಾವಿದರಿಗೆ ಉದ್ಯೋಗ ಕೊರತೆ..ಮನೆಮನೆಯಲ್ಲಿ ನಡೆಯುತ್ತೆ ಚಿಕ್ಕಮೇಳ

ಕರಾವಳಿಯ ಗಂಡುಕಲೆ ಯಕ್ಷಗಾನ ಮಳೆಗಾಲದಲ್ಲಿ ಮಾಡೋದಿಲ್ಲ.ಇಲ್ಲಿರುವ ಹಲವು ಮೇಳಗಳು ಮಳೆಗಾಲದಲ್ಲಿ ಬಂದ್ ಆಗಿರುವುದರಿಂದ ಯಕ್ಷಗಾನ ಕಲಾವಿದರು ಮನೆಮನೆಗೆ ತೆರಳಿ ಯಕ್ಷಗಾನ ಪ್ರಸಂಗ ಮಾಡಿ ಜೀವನ ಸಾಗಿಸುತ್ತಾರೆ.

By

Published : Sep 9, 2019, 11:31 PM IST

ಮಳೆಗಾಲದಲ್ಲಿ ಯಕ್ಷಗಾನ ಕಲಾವಿದರಿಗೆ ಉದ್ಯೋಗ ಕೊರತೆ..ಮನೆಮನೆಯಲ್ಲಿ ನಡೆಯುತ್ತೆ ಚಿಕ್ಕಮೇಳ


ಮಂಗಳೂರು:ಕರಾವಳಿಯ ಗಂಡುಕಲೆ ಯಕ್ಷಗಾನ ಮಳೆಗಾಲದಲ್ಲಿ ಮಾಡೋದಿಲ್ಲ.ಇಲ್ಲಿರುವ ಹಲವು ಮೇಳಗಳು ಮಳೆಗಾಲದಲ್ಲಿ ಬಂದ್ ಆಗಿರುವುದರಿಂದ ಯಕ್ಷಗಾನ ಕಲಾವಿದರು ಮನೆಮನೆಗೆ ತೆರಳಿ ಯಕ್ಷಗಾನ ಪ್ರಸಂಗ ಮಾಡಿ ಜೀವನ ಸಾಗಿಸುತ್ತಾರೆ.

ಮಳೆಗಾಲದಲ್ಲಿ ಯಕ್ಷಗಾನ ಕಲಾವಿದರಿಗೆ ಉದ್ಯೋಗ ಕೊರತೆ..ಮನೆಮನೆಯಲ್ಲಿ ನಡೆಯುತ್ತೆ ಚಿಕ್ಕಮೇಳ

ಯಕ್ಷಗಾನ ಮೇಳಗಳಲ್ಲಿ ದುಡಿಯುವ ಹಲವು ಕಲಾವಿದರು, ಮಳೆಗಾಲದ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಇರುವುದರಿಂದ, ಚಿಕ್ಕಮೇಳದ ಮೂಲಕ ಜೀವನ ಸಾಗಿಸುತ್ತಾರೆ. ಯಕ್ಷಗಾನ ಮೇಳದ ಕಲಾವಿದರ ನಾಲ್ಕು ಜನರ ತಂಡವೊಂದು, ಪ್ರತಿದಿನ ಜಿಲ್ಲೆಯ ಒಂದು ನಿರ್ದಿಷ್ಟ ಪ್ರದೇಶಕ್ಕೆ ಹೋಗಿ ಅಲ್ಲಿ ಚಿಕ್ಕಮೇಳ ನಡೆಸುತ್ತಾರೆ. ಪೌರಾಣಿಕ ಕಥೆಯ ಪ್ರಸಂಗವೊಂದನ್ನು ಈ ತಂಡ ಮನೆ ಮನೆಗೆ ತೆರಳಿ ಮಾಡುತ್ತದೆ. ತಂಡದಲ್ಲಿ ಇಬ್ಬರು ವೇಷಧಾರಿಗಳಿದ್ದರೆ,ಮತ್ತಿಬ್ಬರು ದೇವರ ಮೂರ್ತಿ ಮತ್ತು ಚೆಂಡೆಯನ್ನು ತರುತ್ತಾರೆ.

ಈ ತಂಡದ ಒಬ್ಬ ಸದಸ್ಯ ಒಂದು ವಾರದ ಮುಂಚೆ ತಾವು ತೆರಳುವ ಜಾಗಕ್ಕೆ ಹೋಗಿ ಅಲ್ಲಿನ ಮನೆಯವರಿಗೆ ತಾವು ಬರುವ ಸಮಯವನ್ನು ತಿಳಿಸುತ್ತದೆ. ಚಿಕ್ಕಮೇಳ ಬರುವ ತಂಡಕ್ಕೆ ಮೊದಲೇ ಮನೆಯವರು ಅಕ್ಕಿ,ಅಡಕೆ,ವೀಳ್ಯದೆಲೆ,ಎರಡು ತೆಂಗಿನಕಾಯಿ,ಫಲಪುಷ್ಪ ಮತ್ತು ಕಾಣಿಕೆಯನ್ನು ಸಿದ್ದಪಡಿಸಿರುತ್ತಾರೆ‌. ಕಲಾವಿದರು ಬಂದವರೆ,ಮನೆಯಲ್ಲಿ ಒಂದು ಯಕ್ಷಗಾನ ಪ್ರಸಂಗ ಮಾಡಿ ಜನರು ನೀಡಿದ ಕಾಣಿಕೆ, ಫಲಪುಷ್ಪವನ್ನು ತೆಗೆಕೊಂಡು ಹೋಗ್ತಾರೆ. ಹೀಗೆ ಯಕ್ಷಗಾನ ಪ್ರಸಂಗ ಮಾಡಿ, ಜನರು ನೀಡಿದ ಕಾಣಿಕೆ ಮೂಲಕ ಜೀವನ ಸಾಗಿಸುತ್ತಾರೆ.

ಇದು ಮಳೆಗಾಲದ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರು ಮಾಡುವ ಚಿಕ್ಕಮೇಳ. ಮಳೆಗಾಲ ಹೊರತುಪಡಿಸಿ, ಜನರಿಗೆ ಮನೋರಂಜನೆ ನೀಡುವ ಕಲಾವಿದರುಗಳು ಮಳೆಗಾಲದ ಸಂದರ್ಭದಲ್ಲಿ ಮಾಡುವ ಚಿಕ್ಕಮೇಳಕ್ಕೆ ಅಷ್ಟೇ ರೀತಿಯಲ್ಲಿ ಪ್ರೋತ್ಸಾಹಿಸುತ್ತಾರೆ.

ABOUT THE AUTHOR

...view details