ಕರ್ನಾಟಕ

karnataka

By

Published : Oct 26, 2019, 9:59 AM IST

ETV Bharat / state

ಕ್ಯಾರ್​ಗೆ ಕಡಲು ಪ್ರಕ್ಷುಬ್ಧ: ಸಮುದ್ರದಲ್ಲಿ ಸಿಲುಕಿದ್ದ ಸಾವಿರಕ್ಕೂ ಅಧಿಕ ಮೀನುಗಾರರ ರಕ್ಷಣೆ

ಕರಾವಳಿಯ ತೀರಕ್ಕೆ ಕ್ಯಾರ್​ ಚಂಡಮಾರುತದ ಬಿಸಿ ತಟ್ಟಿದ್ದು, ಕಡಲು ಪ್ರಕ್ಷುಬ್ಧಗೊಂಡಿದೆ. ಈ ನಡುವೆ ಮೀನುಗಾರಿಕೆಗೆ ತೆರಳಿದ್ದ ಬೋಟ್​ಗಳು ಹಾಗೂ ಸಾವಿರಕ್ಕೂ ಅಧಿಕ ಮೀನುಗಾರರನ್ನು ಎನ್​ಎಂಪಿಟಿ ರಕ್ಷಣಾ ತಂಡ ರಕ್ಷಿಸಿದೆ.

ಕ್ಯಾರ್​ ಚಂಡಮಾರುತ

ಮಂಗಳೂರು: ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಸುಮಾರು 100 ಮೀನುಗಾರಿಕಾ ಬೋಟ್​ಗಳು ಹಾಗೂ ಅವುಗಳಲ್ಲಿದ್ದ ಸಾವಿರಕ್ಕೂ ಅಧಿಕ ಮೀನುಗಾರರನ್ನು ರಕ್ಷಿಸಲಾಗಿದೆ.

ರಕ್ಷಿಸಲಾದ ಮೀನುಗಾರಿಕಾ ಬೋಟ್​ಗಳು

ಮಂಗಳೂರಿನ ಎನ್​ಎಂಪಿಟಿಯಿಂದ ಹೊರಟ ರಕ್ಷಣಾ ಬೋಟ್​ಗಳು, ಕಡಲಿನ ರೌದ್ರಾವತಾರದಿಂದ ಸಂಕಷ್ಟಕ್ಕೆ ಸಿಲುಕಿದ್ದ ಬೋಟ್​ಗಳನ್ನು ಹಾಗೂ ಮೀನುಗಾರರನ್ನು ರಕ್ಷಿಸಿದೆ. ಮಂಗಳೂರಿನ ಸುತ್ತಮುತ್ತಲ ಕಡಲ ತೀರದಲ್ಲಿ ಮೀನುಗಾರಿಕೆಗೆ ಬಂದಿದ್ದ ಬೋಟ್​ಗಳನ್ನು ರಕ್ಷಿಸಿ, ಅದರಲ್ಲಿದ್ದ ಸಾವಿರಕ್ಕೂ ಅಧಿಕ ಮೀನುಗಾರರನ್ನು ರಕ್ಷಿಸಲಾಗಿದೆ. ರಕ್ಷಿಸಲಾದ ಮೀನುಗಾರರಿಗೆ ಮಂಗಳೂರಿನ ಎನ್​ಎಂಪಿಟಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ABOUT THE AUTHOR

...view details