ಸುಬ್ರಹ್ಮಣ್ಯ :ತುರ್ತು ಸಮಯದಲ್ಲಿ ನೆರವಾಗುವ ಉದ್ದೇಶದಿಂದ ಸುಳ್ಯ ಅಗ್ನಿಶಾಮಕ ದಳಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಮೋಟಾರ್ ಚಾಲಿತ ಬೋಟ್ನ ಕೊಡುಗೆಯಾಗಿ ನೀಡಿತು.
ಸುಳ್ಯ ಅಗ್ನಿಶಾಮಕ ದಳಕ್ಕೆ ಮೋಟಾರ್ ಚಾಲಿತ ಬೋಟ್ ಕೊಡುಗೆ ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇಗುಲ - Kukke subramanya temple
ಈ ಹಿಂದೆ ಕರ್ನಾಟಕ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕುಕ್ಕೆ ದೇವಸ್ಥಾನದಲ್ಲಿ ನಡೆಸಿದ ಪ್ರಗತಿ ಪರಿಶೀಲನೆ ಸಭೆಯ ವೇಳೆಯಲ್ಲಿ ನೆರೆ ಪರಿಹಾರ ಸಂದರ್ಭದಲ್ಲಿ ಸಹಾಯಕವಾಗಲೆಂದು ಬೋಟ್ ಖರೀದಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು..
![ಸುಳ್ಯ ಅಗ್ನಿಶಾಮಕ ದಳಕ್ಕೆ ಮೋಟಾರ್ ಚಾಲಿತ ಬೋಟ್ ಕೊಡುಗೆ ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇಗುಲ Kukke Subramanya temple](https://etvbharatimages.akamaized.net/etvbharat/prod-images/768-512-03:10:35:1596879635-kn-dk-02-boat-donate-av-pho-kac10008-08082020143607-0808f-1596877567-749.jpg)
Kukke Subramanya temple
ಮಳೆಗಾಲದಲ್ಲಿ ಕುಮಾರಧಾರ ನದಿ ಉಕ್ಕಿ ಹರಿದು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಬೋಟ್ ಅಗತ್ಯತೆ ಹೆಚ್ಚಿರುತ್ತದೆ. ಇದನ್ನು ಮನಗಂಡ ಕುಕ್ಕೆ ಸುಬ್ರಮಣ್ಯ ಆಡಳಿತ ಮಂಡಳಿ ಸುಮಾರು 6.75 ಲಕ್ಷ ಮೌಲ್ಯದ ಬೋಟ್ ಖರೀದಿಸಿ ಸುಳ್ಯ ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ನೀಡಿದೆ.
ಈ ಹಿಂದೆ ಕರ್ನಾಟಕ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕುಕ್ಕೆ ದೇವಸ್ಥಾನದಲ್ಲಿ ನಡೆಸಿದ ಪ್ರಗತಿ ಪರಿಶೀಲನೆ ಸಭೆಯ ವೇಳೆಯಲ್ಲಿ ನೆರೆ ಪರಿಹಾರ ಸಂದರ್ಭದಲ್ಲಿ ಸಹಾಯಕವಾಗಲೆಂದು ಬೋಟ್ ಖರೀದಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎನ್ನಲಾಗುತ್ತಿದೆ.