ಕರ್ನಾಟಕ

karnataka

ETV Bharat / state

ಕೊರೊನಾ ಹಿನ್ನೆಲೆ ದೇಗುಲಗಳಿಗೆ ನಿರ್ಬಂಧ... ಕುಕ್ಕೆಯಲ್ಲಿ ಭಕ್ತರ ಆಕ್ರೋಶ - Kukke Subramanya Temple closed

ಸರ್ಕಾರದ ಆದೇಶದ ಬಳಿಕ ಮತ್ತೆ ಭಕ್ತಾಧಿಗಳಿಗೆ ಅವಕಾಶ ನೀಡಲಾಗುವುದು ಮತ್ತು ಪ್ರಸ್ತುತ ಸರ್ಪಸಂಸ್ಕಾರ ಸೇರಿದಂತೆ ಸೇವೆಗಳಿಂದ ವಂಚಿತರಾದವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಅವರು ಭರವಸೆ ನೀಡಿದ್ದಾರೆ.

kukke-subramanya-temple-closed-due-t-o-the-corona
ಕುಕ್ಕೆಯಲ್ಲಿ ಭಕ್ತರ ಆಕ್ರೋಶ.

By

Published : Apr 22, 2021, 7:44 AM IST

ಸುಬ್ರಹ್ಮಣ್ಯ: ಕೊರೊನಾ ನಿಯಂತ್ರಣ ಹಿನ್ನೆಲೆ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಸರ್ಕಾರದ ಆದೇಶ ನೀಡಿದ ಬೆನ್ನಲ್ಲೇ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸ್ವಲ್ಪ ಸಮಯದ ಮಟ್ಟಿಗೆ ಗೊಂದಲದ ವಾತಾವರಣ ನಿರ್ಮಾಣವಾಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಅಧ್ಯಕ್ಷ ಮೋಹನ್ ರಾಂ ಸುಳ್ಳಿ

ಸರ್ಪ ಸಂಸ್ಕಾರ ಸೇವೆ ಸೇರಿದಂತೆ ಇತರ ಪೂಜಾ ವಿಧಿಗಳಿಗಾಗಿ ನೂರಾರು ಭಕ್ತರು ಒಂದು ದಿನದ ಮುನ್ನವೇ ಕುಕ್ಕೆಗೆ ಆಗಮಿಸಿದ್ದರು. ಸರ್ಪ ಸಂಸ್ಕಾರ ಸೇವೆ ನೆರವೇರಿಸುವ ಮಂದಿ ಎರಡು ದಿನದ ಮೊದಲೇ ಬಂದು ವಾಸ್ತವ್ಯ ಇರಬೇಕಾಗುವುದರಿಂದ ಭಕ್ತರು ಸೇವೆಯನ್ನು ತಿಂಗಳ ಮೊದಲೇ ಬುಕ್ ಮಾಡಿಕೊಂಡು ಬಂದಿದ್ದರು.

ಆದರೆ, ದಿಢೀರ್ ಆಗಿ ದೇಗುಲದಲ್ಲಿ ಸೇವೆ ಬಂದ್ ಮಾಡಿರುವುದಕ್ಕೆ ದೇವಸ್ಥಾನದ ಆಡಳಿತ ಸಮಿತಿಯನ್ನು ಭಕ್ತರು ತರಾಟೆಗೆ ತೆಗೆದುಕೊಂಡರು. ಸರ್ಪ ಸಂಸ್ಕಾರ ಸೇವೆಯನ್ನು ನಡೆಸಲು ಕುಕ್ಕೆಗೆ ಬಂದಿದ್ದೆವು. ಎರಡು-ಮೂರು ತಿಂಗಳ ಮೊದಲೇ ಬುಕ್ ಮಾಡಿದ್ದೆವು. ಆದರೆ ಈಗ ಕೊರೊನಾ ಅಂತ ಹೇಳಿ ದಿಢೀರ್ ಆಗಿ ಪೂಜೆ ರದ್ದುಪಡಿಸಿದ್ದಾರೆ. ದೂರದ ಊರುಗಳಿಂದ ಎರಡು ದಿನ ಮೊದಲೇ ರೂಮ್ ಬುಕ್ ಮಾಡಿಕೊಂಡು ಉಳಿದುಕೊಂಡವರಿಗೆ ಸಮಸ್ಯೆ ಆಗಿದೆ. ಸೇವೆ ಇರುವುದನ್ನು ಖಚಿತಪಡಿಸಿಕೊಂಡೇ ಬಂದಿದ್ದೆವು. ಈಗ ಇಲ್ಲ ಎಂದರೆ ನಾವು ಏನು ಮಾಡಬೇಕು ಎಂದು ಭಕ್ತರು ಪ್ರಶ್ನೆ ಮಾಡುತ್ತಿದ್ದರು.

ಕೊನೆಗೂ ಭಕ್ತರ ಮನವೊಲಿಸಿದ ಆಡಳಿತ ಮಂಡಳಿ ಭಕ್ತರಿಗೆ ದೇವರ ಪ್ರಸಾದ ನೀಡಿ ಕಳುಹಿಸಿದರು. ಕೆಲವರಿಗೆ ಹಣ ಮರುಪಾವತಿ ಮಾಡಿದ್ದಾಗಿ ಮತ್ತು ಹೆಚ್ಚಿನವರನ್ನು ನಿರ್ಬಂಧ ತೆರವಾದ ಮುಂದಿನ ದಿನಾಂಕದಂದು ‌ಬರಲು ಮನವಿ ಮಾಡಿ ವಾಪಸು ಕಳುಹಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸರ್ಕಾರದ ಆದೇಶದ ಬಳಿಕ ಮತ್ತೆ ಭಕ್ತಾಧಿಗಳಿಗೆ ಅವಕಾಶ ನೀಡಲಾಗುವುದು ಮತ್ತು ಪ್ರಸ್ತುತ ಸರ್ಪಸಂಸ್ಕಾರ ಸೇರಿದಂತೆ ಸೇವೆಗಳಿಂದ ವಂಚಿತರಾದವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಅವರು ಭರವಸೆ ನೀಡಿದ್ದಾರೆ.

ಓದಿ:ಹೇಗಿರಲಿದೆ ನೈಟ್ ಅಂಡ್ ವೀಕೆಂಡ್ ಕರ್ಫ್ಯೂ, ಈ ಬಗ್ಗೆ ಪೊಲೀಸ್ ಆಯುಕ್ತರು ಹೇಳಿದ್ದೇನು?

ABOUT THE AUTHOR

...view details