ಕರ್ನಾಟಕ

karnataka

ETV Bharat / state

ಬಸ್​ ಡಿಕ್ಕಿ: ರಸ್ತೆ ವಿಭಜಕ ಹತ್ತಿದ ಟ್ಯಾಂಕರ್​ - ಟ್ಯಾಂಕರ್​​

ಟ್ಯಾಂಕರ್​ ಹೋಗುತ್ತಿದ್ದ ರಸ್ತೆಗೆ ಏಕಾಏಕಿ ಕೆಸ್​ಆರ್​ಟಿಸಿ ಬಸ್​ ಬಂದ ಕಾರಣ ಎರಡು ವಾಹನಗಳಿಗೆ ಡಿಕ್ಕಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ. ನಿಯಂತ್ರಣ ತಪ್ಪಿದ ಟ್ಯಾಂಕರ್​ ರಸ್ತೆ ವಿಭಜಕವನ್ನೇರಿದೆ.

ಟ್ಯಾಂಕರ್​​ಗೆರ ಬಸ್​ ಡಿಕ್ಕಿ : ರಸ್ತೆ ವಿಭಜಕವನ್ನೇರಿದ ಟ್ಯಾಂಕರ್​

By

Published : Jun 17, 2019, 7:27 PM IST

ಮಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಗ್ಯಾಸ್ ಟ್ಯಾಂಕರ್ ವೊಂದು ರಸ್ತೆ ವಿಭಜಕ ಏರಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ.

ಟ್ಯಾಂಕರ್​ ಲಾರಿಯು ಬಿಸಿ ರೋಡ್ ಕಡೆಯಿಂದ ಮಂಗಳೂರಿಗೆ ಹೋಗುತ್ತಿತ್ತು. ಈ ಸಮಯದಲ್ಲಿ ಅದೇ ರಸ್ತೆಯಲ್ಲೇ ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಏಕಾಏಕಿ ಲಾರಿ ಹೋಗುತ್ತಿದ್ದ ರಸ್ತೆ ಕಡೆ ಬಂದಿದೆ. ಇದರಿಂದ ಬಸ್​ಗೆ ಡಿಕ್ಕಿ ಹೊಡೆದ ಟ್ಯಾಂಕರ್​ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಹೋಗಿದೆ. ಅದೃಷ್ಟವಶಾತ್​​ ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಬಂಧಿಸಿಲ್ಲ.

ABOUT THE AUTHOR

...view details