ಕರ್ನಾಟಕ

karnataka

ETV Bharat / state

'ಗೋ ಬ್ಯಾಕ್ ಮೋದಿ' ಪ್ರತಿಭಟನೆಗೆ ಸಿಗದ ಅನುಮತಿ: ಮನವಿ ವಾಪಸ್​ ಪಡೆದ ಡಿಸೋಜ ನಿಯೋಗ - undefined

'ಗೋ ಬ್ಯಾಕ್ ಮೋದಿ' ಪ್ರತಿಭಟನೆಗೆ ಜಿಲ್ಲಾಡಳಿತದಿಂದ ಅನುಮತಿ ದೊರೆಯದಿದ್ದಕ್ಕೆ ಐವನ್ ಡಿಸೋಜರ ನಿಯೋಗ ಮನವಿ ಹಿಂಪಡೆದಿದೆ

'ಗೋ ಬ್ಯಾಕ್ ಮೋದಿ' ಪ್ರತಿಭಟನೆ ಹಿಂಪಡೆದ ಐವನ್ ಡಿಸೋಜ

By

Published : Apr 13, 2019, 5:31 AM IST

ಮಂಗಳೂರು: 'ಗೋ ಬ್ಯಾಕ್ ಮೋದಿ' ಪ್ರತಿಭಟನೆಗೆ ಅನುಮತಿ ದೊರೆಯದ ಹಿನ್ನೆಲೆ ಸಿಎಂರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ತಮ್ಮ ಮನವಿ ವಾಪಸ್​ ಪಡೆದುಕೊಂಡಿದೆ.

'ಗೋ ಬ್ಯಾಕ್ ಮೋದಿ' ಪ್ರತಿಭಟನೆ ಹಿಂಪಡೆದ ಐವನ್ ಡಿಸೋಜ

ಐವನ್ ಡಿಸೋಜರ ನಿಯೋಗ ಜಿಲ್ಲಾಧಿಕಾರಿ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು‌ ಭೇಟಿ ಮಾಡಿ, ಪ್ರತಿಭಟನೆ ಹಿಂದೆಗೆದುಕೊಂಡಿದೆ.

ವಿಜಯ ಬ್ಯಾಂಕ್ ವಿಲೀನ ಹಾಗೂ ಎನ್​ಎಂಪಿಟಿ ಪೋರ್ಟ್ ಖಾಸಗೀಕರಣ ಬಗ್ಗೆ ಕೇಂದ್ರ ಸರಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಮೋದಿಗೆ ಆಗ್ರಹಿಸಲಾಗಿತ್ತು. ಶನಿವಾರ ಮಂಗಳೂರಿಗೆ ಬರುವ ಪ್ರಧಾನಿ‌ ಮೋದಿ ಜತೆ ಈ ವಿಚಾರ ಮಾತನಾಡಲು ಅವಕಾಶ ನೀಡಬೇಕು ಎಂದೂ ಡಿಸೋಜ ಮನವಿ ಮಾಡಿದ್ದರು. ಒಂದು ವೇಳೆ ಪ್ರಧಾನಿ ಭೇಟಿಗೆ ಅವಕಾಶ ನೀಡದಿದ್ದರೆ ಗೋ ಬ್ಯಾಕ್ ಮೋದಿ ಘೋಷಣೆ ಕೂಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು.

'ಗೋ ಬ್ಯಾಕ್ ಮೋದಿ' ಪ್ರತಿಭಟನೆ ಹಿಂಪಡೆದ ಐವನ್ ಡಿಸೋಜ

ಆದರೆ ಜಿಲ್ಲಾಡಳಿತದಿಂದ ಪ್ರತಿಭಟನೆಗೆ ಅವಕಾಶ ದೊರೆಯದ ಹಿನ್ನೆಲೆ ಡಿಸೋಜ ನಿಯೋಗ ಮನವಿಯನ್ನು ಹಿಂದೆಗೆದುಕೊಂಡಿದೆ.

For All Latest Updates

TAGGED:

ABOUT THE AUTHOR

...view details