ಕರ್ನಾಟಕ

karnataka

By

Published : Mar 13, 2023, 2:50 PM IST

ETV Bharat / state

75 ದಾಟಿದವರಿಗೆ ಟಿಕೆಟ್ ಇಲ್ಲ ಎಂಬುದು ಬಿಜೆಪಿ ಸಂವಿಧಾನದಲ್ಲಿ ಇಲ್ಲ: ಕೆ ಎಸ್ ಈಶ್ವರಪ್ಪ

ಮಂಗಳೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್​ ನಾಯಕರ ವಿರುದ್ದ ಕೆ ಎಸ್​ ಈಶ್ವರಪ್ಪ ಕಿಡಿಕಾರಿದರು.

Former minister KS Eshwarappa
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಚುನಾವಣೆಯಲ್ಲಿ ಯಾಕೆ ನಾನೇ ನಿಲ್ಲಬೇಕು. ನನ್ನಿಂದಾಗಿ ಬಿಜೆಪಿ ಇಲ್ಲ : ಕೆ ಎಸ್ ಈಶ್ವರಪ್ಪ

ಮಂಗಳೂರು:75 ವರ್ಷ ದಾಟಿದವರಿಗೆ ಬಿಜೆಪಿ ಯಿಂದ ಟಿಕೆಟ್ ಇಲ್ಲ ಎಂಬ ಚರ್ಚೆಯ ನಡುವೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಅಚ್ಚರಿಯ ಹೇಳಿಕೆ ನೀಡಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾಕೆ ನಾನೇ ನಿಲ್ಲಬೇಕು. ನನ್ನಿಂದಾಗಿ ಬಿಜೆಪಿ ಇಲ್ಲ. 150 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ನಾನು ಶಾಸಕನಾಗುತ್ತೇನೆ ಎಂಬುದು ಬೇರೆ ವಿಚಾರ ಎಂದು ಹೇಳಿದರು.

75 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ವಿಚಾರ ಬಿಜೆಪಿ ಸಂವಿಧಾನದಲ್ಲಿ ಇಲ್ಲ. ಹೊರಟ್ಟಿಯವರಿಗೆ 77 ವರ್ಷ ಆದರೂ ಟಿಕೆಟ್ ನೀಡಲಾಗಿದೆ. ನನಗೆ ಟಿಕೆಟ್ ಸಿಗುವುದು ಮಹತ್ವ ಅಲ್ಲ. ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡದೇ ಸಾಮಾಜಿಕ ಸೇವೆ ಮಾಡಬಹುದು. ಪಕ್ಷ ನಿಲ್ಲಬೇಕೆಂದು ಹೇಳಿದರೆ ಚುನಾವಣೆಗೆ ನಿಲ್ಲುತ್ತೇನೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಬಿಜೆಪಿ ಪಕ್ಷದಿಂದ ಸರ್ವೆ ನಡೆಯುತ್ತಿದೆ. 224 ಕ್ಷೇತ್ರಗಳಲ್ಲೂ ಸರ್ವೆ ನಡೆಯುತ್ತಿದ್ದು, ಗೆಲ್ಲುವ ಮಾನದಂಡದಲ್ಲಿ ಟಿಕೆಟ್ ಸಿಗಲಿದೆ. ಬಿಜೆಪಿಯಲ್ಲಿ ಯಾರಿಗೂ ವಯಸ್ಸಾಗುವುದಿಲ್ಲ ಎಂದರು.

ರಾಜಕೀಯ ಸಂನ್ಯಾಸ :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಜೀವನಪೂರ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಹೇಳಿದರೆ, ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದರು.

ಕೆಂಪಣ್ಣ ಕಾಂಗ್ರೆಸ್ ಏಜೆಂಟ್ :ಬಿಜೆಪಿ ಮೇಲೆ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಮೇಲೆ ಜನಸಾಮಾನ್ಯರು ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿದೆ. ದೆಹಲಿ ಬಂಗಲೆಯಲ್ಲಿ ಕೂಡ ಹಣ ಸಿಕ್ಕಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲ್​ಗೆ ಹೋಗಿ ಬಂದಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಡಿಕೆಶಿ ವಿರುದ್ದ ಗುಡುಗಿದರು.

ಇನ್ನೂ ಸಿದ್ದರಾಮಯ್ಯ ಅವರ ಮೇಲಿನ ಭ್ರಷ್ಟಾಚಾರ ಆರೋಪ ಇದೆ. ನ್ಯಾ. ಕೆಂಪಯ್ಯ ಅವರ ವರದಿ ಬಹಿರಂಗ ಆಗಿದೆ. ಅರ್ಕಾವತಿ ಯೋಜನೆಯಲ್ಲಿ 800 ಎಕರೆಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿರುವುದು ಬಹಿರಂಗ ಆಗಿದೆ. ಇದರಲ್ಲಿ 8 ಸಾವಿರ ಕೋಟಿ ರೂ ಲೂಟಿ ಆಗಿದ್ದು, ಇದನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಪಕ್ಷವು ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಕಾಂಟ್ರಾಕ್ಟ್​​​ದಾರರ ಅಸೋಸಿಯೇಷನ್​ನ ಕೆಂಪಣ್ಣ ಅವರು ಕೇಸ್ ಹಾಕದೇ ಪ್ರಧಾನಮಂತ್ರಿ ಗಳಿಗೆ ಪತ್ರ ಬರೆದಿದ್ದಾರೆ. ಕೆಂಪಣ್ಣ ಒಬ್ಬ ಕಾಂಗ್ರೆಸ್ ಏಜೆಂಟ್. ಸೂಕ್ತ ದಾಖಲೆ ಕೊಡದೇ ಕೇಸ್ ಹಾಕದೇ ಆರೋಪ ಮಾಡಲಾಗಿದೆ ಎಂದರು.

ವಿಜಯೋತ್ಸವ ತಪ್ಪು :ಮಾಡಾಳು ಪ್ರಕರಣದಲ್ಲಿ ವಿಜಯೋತ್ಸವ ಮಾಡಿದ್ದು ತಪ್ಪು. ಇದಕ್ಕೆ ಪ್ರೇರಣೆ ಕಾಂಗ್ರೆಸ್. ಕಾಂಗ್ರೆಸ್ ಅಧ್ಯಕ್ಷ ಜೈಲಿನಿಂದ ಹೊರಬಂದಾಗ ವಿಜಯೋತ್ಸವ ಮೆರವಣಿಗೆ ಮಾಡಿದೆ. ಮಾಡಾಳು ಮೆರವಣಿಗೆ ಮಾಡಿದ್ದು ತಪ್ಪು. ಇದನ್ನು ಬಿಜೆಪಿ ಮುಖಂಡರು ತಪ್ಪು ಎಂದು ಹೇಳಿದ್ದಾರೆ ಎಂದರು.

ಎಲ್ಲಾ ಮುಸಲ್ಮಾನರ ವೋಟು ಬೇಡ ಎಂದು ಹೇಳಿಲ್ಲ :ನಿನ್ನೆ ವಿಜಯಸಂಕಲ್ಪ ಯಾತ್ರೆಯಲ್ಲಿ ಮುಸಲ್ಮಾನರ ವೋಟು ಬೇಡ ಎಂದು ಹೇಳಿದ್ದು ಹೌದು. ಆದರೆ ಎಲ್ಲಾ ಮುಸಲ್ಮಾನರ ವೋಟು ಬೇಡ ಎಂದು ಹೇಳಿಲ್ಲ. ರಾಷ್ಟ್ರೀಯವಾದಿ ಮುಸಲ್ಮಾನರು ಬಿಜೆಪಿಗೆ ವೋಟು ಹಾಕುತ್ತಾರೆ. ಪಿಎಫ್ಐ, ಎಸ್​ಡಿಪಿಐ ಬೆಂಬಲಿತ ಮುಸಲ್ಮಾನರ ಮತ್ತೆ ಆಜಾನ್ ಬಗ್ಗೆ ಹೇಳಿದ್ದೆ. ಪರೀಕ್ಷೆ ನಡೆಯುತ್ತಿದೆ, ಆಸ್ಪತ್ರೆಯಲ್ಲಿ ರೋಗಿಗಳು ಇರುತ್ತಾರೆ. ಶ್ರೀಸಾಮಾನ್ಯನ ಭಾವನೆಯನ್ನು , ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ. ಅಲ್ಲಾಗೆ ಕಿವಿ ಕೇಳಲ್ವ, ಕಿವುಡ ಎಂದು ಹೇಳಿದ್ದೇನೆ. ಮುಸಲ್ಮಾನ ನಾಯಕರು ಚಿಂತನೆ ಮಾಡಬೇಕು. ಇದು ಧಾರ್ಮಿಕ ನಿಂದನೆ ಅಲ್ಲ ಎಂದರು.

ಇದನ್ನೂ ಓದಿ:ಹಿಂದೂಗಳ ಓಟು ನಮಗೆ ಬೇಡ ಎಂದು ಸಿದ್ದರಾಮಯ್ಯ ಘೋಷಣೆ ಮಾಡಲಿ: ಕೆ.ಎಸ್.ಈಶ್ವರಪ್ಪ

ABOUT THE AUTHOR

...view details