ಕರ್ನಾಟಕ

karnataka

ETV Bharat / state

ಬೋಟ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ನಿವೇಶನ ಒದಗಿಸುವಂತೆ ಒತ್ತಾಯ

ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಸ್ಥರಿಗೆ ಸರ್ಕಾರ ನಿವೇಶನ ಒದಗಿಸಬೇಕೆಂದು ಮೀನುಗಾರರ ಸಂಘದ ಮುಖಂಡ ಇಬ್ರಾಹಿಂ ಬೇಂಗ್ರೆ ಒತ್ತಾಯಿಸಿದ್ದಾರೆ.

By

Published : Dec 3, 2020, 8:10 PM IST

Ibrahim Bangre
ಇಬ್ರಾಹಿಂ ಬೇಂಗ್ರೆ

ಮಂಗಳೂರು: ನಗರದಲ್ಲಿ ನಡೆದ ದೋಣಿ ದುರಂತದಲ್ಲಿ ಮೃತಪಟ್ಟ ಎಲ್ಲಾ ಮೀನುಗಾರರ ಕುಟುಂಬಸ್ಥರಿಗೆ ಮತ್ಸ್ಯಾಶ್ರಯ ಯೋಜನೆಯಡಿ ಸರ್ಕಾರ ನಿವೇಶನ ಒದಗಿಸಬೇಕೆಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಕೋಶಾಧಿಕಾರಿ ಇಬ್ರಾಹಿಂ ಬೇಂಗ್ರೆ ಒತ್ತಾಯಿಸಿದ್ದಾರೆ.

ಇಬ್ರಾಹಿಂ ಬೇಂಗ್ರೆ ಮಾತನಾಡಿದರು

ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಸರ್ಕಾರ 6 ಲಕ್ಷ ರೂ. ಪರಿಹಾರಧನದ ಚೆಕ್ ಅನ್ನು ಮೃತರ ಕುಟುಂಬಸ್ಥರಿಗೆ ನೀಡಿದೆ. ಮೃತಪಟ್ಟ ಎಲ್ಲಾ ಮೀನುಗಾರರ ಕುಟುಂಬಸ್ಥರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಮೀನುಗಾರಿಕೆ ನಡೆಸಿಯೇ ಅವರು ಜೀವನ ನಿರ್ವಹಣೆ ಮಾಡಬೇಕಾಗಿದೆ. ಎಲ್ಲರೂ ಸಣ್ಣ-ಪುಟ್ಟ ಮಕ್ಕಳನ್ನು ಹೊಂದಿದ್ದು, ಸರಿಯಾದ ಮನೆಯೂ ಇಲ್ಲದೆ ಜೋಪಡಿಯಂಥ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅವರ ಕುಟುಂಬಿಕರಿಗೆ ಮನೆ ನಿರ್ಮಾಣ ಮಾಡಿಕೊಡಬೇಕಾಗಿದೆ ಎಂದರು.

ಪರ್ಸಿನ್ ಬೋಟ್​​ನಲ್ಲಿ ಮೀನುಗಾರಿಕೆ ನಡೆಸಿ ಹಿಂದಕ್ಕೆ ಬರುವಾಗ ಬೋಟ್ ಮಗುಚಿ ಈ ದುರಂತ ನಡೆದಿದೆ. ಇದರಲ್ಲಿ ಆರು ಮಂದಿ ಕಣ್ಮರೆಯಾಗಿ ಐದು ಮಂದಿಯ ಮೃತದೇಹ ಈಗಾಗಲೇ ದೊರಕಿದೆ. ಮತ್ತೋರ್ವ ಮೀನುಗಾರನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅವರ ಮೃತದೇಹದ ಪತ್ತೆ ಕಾರ್ಯವು ಬೋಟ್ ಮಾಲೀಕರ ಸಂಘದ ವತಿಯಿಂದ ಹಾಗೂ ಇಲಾಖೆಯಿಂದಲೂ ನಡೆಯುತ್ತಿದೆ ಎಂದು ತಿಳಿಸಿದರು.

ABOUT THE AUTHOR

...view details