ಉಳ್ಳಾಲ: ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಾವುದೇ ರೀತಿಯ ಸಮಸ್ಯೆ ಬರಲು ಸಾಧ್ಯವಿಲ್ಲ. ಸಕಾರಾತ್ಮಕ ಧೋರಣೆಯ ಮೂಲಕ ಅಭಿವೃದ್ದಿಯಾಗಿರುವ ಪಾವೂರು ಗ್ರಾಮವನ್ನು ಸೌಹಾರ್ದ ಗ್ರಾಮವನ್ನಾಗಿ ರೂಪಿಸಬಹುದು ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಪಾವೂರು ಸೌಹಾರ್ದ ಗ್ರಾಮ ನಾಮಕರಣ ಹಾಗೂ ಪಾವೂರು ಪಂಚಾಯತ್ ಜಂಕ್ಷನ್ ನಲ್ಲಿ ಯು.ಟಿ. ಫರೀದ್ ಸ್ಮರಣಾರ್ಥ ಸ್ವಾಗತ ದ್ವಾರ ನಿರ್ಮಾಣಕ್ಕೆ ಭಾನುವಾರ ಶಿಲಾನ್ಯಾಸಗೈದು ಮಾತನಾಡಿದ ಯು.ಟಿ.ಖಾದರ್, ಧಾರ್ಮಿಕ ವಿಚಾರದಲ್ಲಿ ಮಾರ್ಗದರ್ಶನ ನೀಡಲು ಗುರುಗಳಿದ್ದಾರೆ. ಅದು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇದೀಗ ಪಾವೂರಿನಲ್ಲಿ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಭವಿಷ್ಯದ ದಿನಗಳಲ್ಲಿ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲು ಸಹಕಾರಿಯಾಗಲಿದೆ ಎಂದು ಹೇಳಿದರು.