ಮಂಗಳೂರು: ದೇಶದಲ್ಲಿ ಪಿಎಫ್ಐ ನಿಷೇಧಿಸಿದಂತೆ ಎಸ್ಡಿಪಿಐ ಮತ್ತು ಮದರಸಗಳನ್ನು ನಿಷೇಧಿಸಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆಗ್ರಹಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವಾಗ ಪಿಎಫ್ಐನ ರಾಜಕೀಯ ಪಕ್ಷವಾದ ಎಸ್ಡಿಪಿಐಯನ್ನು ನಿಷೇಧ ಮಾಡದಿರುವುದು ಯಾಕೆ? ಮುಂದಿನ ಚುನಾವಣೆ ರಾಜಕೀಯಕ್ಕಾಗಿ ಲಾಭ ಪಡೆಯಲು ಎಸ್ಡಿಪಿಐಯನ್ನು ನಿಷೇಧ ಮಾಡದೇ ಇರುವ ಬಗ್ಗೆ ಅನುಮಾನಗಳಿದೆ. ಎಸ್ಡಿಪಿಐ ಮತ್ತು ಓವೈಸಿ ಪಕ್ಷವನ್ನು ಚುನಾವಣೆಗಾಗಿ ಬಿಜೆಪಿ ಬಳಸುತ್ತಿದೆ. ಎಸ್ಡಿಪಿಐ ನಿಷೇಧ ಮಾಡದೇ ಇರುವುದು ಬೇಸರದ ಸಂಗತಿ ಎಂದರು.
ಅದೇ ರೀತಿ ಮದರಸಗಳನ್ನು ನಿಷೇಧಿಸಬೇಕು. ಈ ರೀತಿ ಮಾಡಿದರೆ ಹಿಂದೂ ರಾಷ್ಟ್ರ ನಿರ್ಮಾಣವಾಗಲಿದೆ ಎಂದ ಅವರು, ಬಿಜೆಪಿ ಎಂಬುದು ಭ್ರಷ್ಟ ಜನರ ಪಕ್ಷವಾಗಿದೆ. ಅದು ಹಿಂದೂ ಪಕ್ಷವಲ್ಲ. ಕೇವಲ ಬೂಟಾಟಿಕೆ ಮಾಡುತ್ತಿದೆ ಎಂದು ಟೀಕಿಸಿದರು.