ಕರ್ನಾಟಕ

karnataka

ETV Bharat / state

ಮಂಗಳೂರು: ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಸಾವು - ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಸಾವು

ಮಂಗಳೂರು ನಗರದ ಅತ್ತಾವರದಲ್ಲಿ ಶನಿವಾರ ರಾತ್ರಿ ಆಕಸ್ಮಿಕವಾಗಿ ಲಾರಿಯಲ್ಲಿದ್ದ ಗ್ರಾನೈಟ್​​ಗಳು ಮೈಮೇಲೆ ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ..

ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಸಾವು
ಲಾರಿಯಲ್ಲಿದ್ದ ಗ್ರಾನೈಟ್ ಮೈಮೇಲೆ ಬಿದ್ದು ಯುವಕ ಸಾವು

By

Published : Nov 14, 2021, 8:02 PM IST

ಮಂಗಳೂರು :ಆಕಸ್ಮಿಕವಾಗಿ ಲಾರಿಯಲ್ಲಿದ್ದ ಗ್ರಾನೈಟ್​​ಗಳು ಮೈಮೇಲೆ ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ನಗರದ ಅತ್ತಾವರದಲ್ಲಿ ಶನಿವಾರ ರಾತ್ರಿ ನಡೆದಿದೆ. ನಗರದ ಜಪ್ಪು ನಿವಾಸಿ ಅಬ್ದುಲ್ ರೆಹಮಾನ್ ರಿಲ್ವಾನ್(30) ಮೃತ ದುರ್ದೈವಿ.

ಅಬ್ದುಲ್ ರೆಹಮಾನ್ ರಿಲ್ವಾನ್ ಅತ್ತಾವರದಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಕಟ್ಟಡಕ್ಕೆಂದು ರಾಜಸ್ಥಾನದಿಂದ ಗ್ರಾನೈಟ್ ಹೇರಿಕೊಂಡು ಲಾರಿ ಬಂದಿತ್ತು. ಈ ಸಂದರ್ಭ ಕಟ್ಟಡದ ಸೂಪರ್‌ವೈಸರ್ ಗ್ರಾನೈಟ್ ಫೋಟೋ ತೆಗೆಯಲು ಸೂಚಿಸಿದ್ದಾರೆನ್ನಲಾಗಿದೆ.

ಅವರು ಫೋಟೋ ತೆಗೆಯಲೆಂದು ಲಾರಿ ಹಿಂಭಾಗಕ್ಕೆ ಬಂದಿದ್ದಾರೆ‌. ಇದೇ ಸಮಯಕ್ಕೆ ಗ್ರಾನೈಟ್ ಏಕಾಏಕಿ ಅಬ್ದುಲ್ ರೆಹಮಾನ್ ರಿಲ್ವಾನ್ ಅವರ ಮೇಲೆಯೇ ಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details