ಮಂಗಳೂರು: ಸೋಮವಾರ ನಡೆದಿದ್ದ ಸಿಎಎ ಪರ ರ್ಯಾಲಿಯಲ್ಲಿ ನನ್ನ ತಲೆ ಕಡಿಯುತ್ತೇವೆ ಎಂದು ಘೋಷಣೆ ಕೂಗಿದ ಯುವಕರಿಗೆ ಸಿಎಎ, ಎನ್ಆರ್ಸಿ ಬಗ್ಗೆ ನಿಜಾಂಶ ಗೊತ್ತಾದರೆ ನನ್ನ ವಿರುದ್ಧ ಅಲ್ಲ, ಅವರ ವಿರುದ್ಧವೇ ಘೋಷಣೆ ಕೂಗಬಹುದು ಎಂದು ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ಯುವಕರಿಗೆ ಸರಿಯಾಗಿ ವಿಷಯ ಗೊತ್ತಿಲ್ಲದೆ ಘೋಷಣೆ ಕೂಗಿದ್ದಾರೆ. ಅವರಿಗೆ ಸರಿಯಾಗಿ ವಿಷಯ ಗೊತ್ತಾಗಿ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಬಂದಾಗ ಎನ್ಆರ್ಸಿ ಕಾನೂನು ತಂದವರ ವಿರುದ್ಧ ಘೋಷಣೆ ಕೂಗಬಹುದು ಎಂದರು. ಎನ್ಆರ್ಸಿ ಕಾನೂನು ಬಂದಾಗ ಇವರು ಮೈದಾನಕ್ಕೆ ಹೋಗಿದ್ದಾರೆ, ರಕ್ಷಣಾ ಸಚಿವರ ಭಾಷಣ ಕೇಳಿದ್ದಾರೆ. ಇವರನ್ನು ಸಹ ಎನ್ಆರ್ಸಿ ಯಲ್ಲಿ ಕೇಂದ್ರ ಸರ್ಕಾರ ಬಿಡುವುದಿಲ್ಲ ಎಂದರು.